ಬೆಂಗಳೂರಿಗೆ ಬಂತು ಮರ ಸ್ಥಳಾಂತರಿಸುವ ಅತ್ಯಾಧುನಿಕ ಯಂತ್ರ
ಬೆಂಗಳೂರು, ನವೆಂಬರ್ 2: ವಿದೇಶಗಳಲ್ಲಿ ಮರಗಳನ್ನು ಕಾಂಡ ಸಮೇತ ಕಿತ್ತು ಬೇರೆಡೆ ನಾಟಿ ಮಾಡುವ ತಂತ್ರಜ್ಞಾನವನ್ನು ನೋಡಿರಬಹುದು. ಇದೀಗ ಅಂಥಹದ್ದೇ ತಂತ್ರಜ್ಞಾನದ ಟ್ರಕ್ ಬೆಂಗಳೂರು ನಗರಕ್ಕೂ ಆಗಮಿಸಿದೆ.
ವೋಲ್ವೋ ಕಂಪನಿ ಈ ಯಂತ್ರವನ್ನು ತಯಾರಿಸಿದ್ದು 'ಟ್ರೀ ಟ್ರಾನ್ಸ್ಪ್ಲಾಂಟರ್' ಎಂಬ ಹೆಸರನ್ನು ಹೊಂದಿದೆ. ನಗರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಮರಗಳು ಬಲಿಯಾಗುವುದನ್ನು ತಪ್ಪಿಸಲು ಈ ಯಂತ್ರ ಸಹಾಯಕವಾಗಲಿದೆ. ಮಂಗಳವಾರ ಐಐಎಸ್ಸಿ ಆವರಣದಲ್ಲಿ ಈ ಯಂತ್ರವನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಈ ಅತ್ಯಾಧುನಿಕ ಯಂತ್ರದ ಸಹಾಯದಿಂದ ಮರಗಳನ್ನು ಬುಡ ಸಮೇತ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿ ಮರು ನಾಟಿ ಮಾಡಬಹುದಾಗಿದೆ. ಮರದ ಬೇರಿಗೆ ಅಂಟಿಕೊಂಡ ಮಣ್ಣಿನ ಸಮೇತ ಗಿಡವನ್ನು ತೆರವು ಮಾಡುವುದರಿಂದ ಬೇರಿಗೆ ಹಾನಿಯಾಗುವುದಿಲ್ಲ. ಜತೆಗೆ ಮರಕ್ಕೂ ಹಾನಿಯಾಗುವುದಿಲ್ಲ.
ಮರದ ಕಾಂಡದ ಅಳತೆಗೆ ತಕ್ಕಂತೆ ಈ ಯಂತ್ರವನ್ನು ಅಳವಡಿಸಿ, ಮರವನ್ನು ಬುಡ ಸಮೇತ ಕಿತ್ತು ಬೇರೆಡೆ ನೆಡಬಹುದು. ಮರವನ್ನು ಸುಮಾರು 50 ಕಿ.ಮೀ ದೂರದವರೆಗೂ ಸಾಗಿಸಬಹುದು. ಇಂಥಹ ಅತ್ಯಾಧುನಿಕ ಯಂತ್ರದ ಬೆಲೆ ಕೇವಲ 5 ಕೊಟಿ ರೂಪಾಯಿ!

ಈ ಯಂತ್ರವನ್ನು ವೀಕ್ಷಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್ ಯಂತ್ರದ ಬೆಲೆ ಕಡಿತಗೊಳಿಸುವಂತೆ ಕಂಪನಿಯ ಅಧಿಕಾರಿಗಳ ಬಳಿ ಕೋರಿಕೊಂಡರು. ಜತೆಗೆ ಇಂಥಹ ವಾಹನಗಳಿಗೆ ಜಿಎಸ್ಟಿ ವಿನಾಯಿತಿ ನೀಡುವಂತೆಯೂ ಅವರು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು












Click it and Unblock the Notifications