ಆಡುಗೋಡಿಯಲ್ಲಿ ಸಂಜೆ ಟ್ರಾಫಿಕ್ ಜಾಮ್ ಸಾಧ್ಯತೆ, ಬದಲಿ ಮಾರ್ಗ ಬಳಸಿ
ಬೆಂಗಳೂರು, ಫೆಬ್ರವರಿ 12: ರಥಸಪ್ತಮಿ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಆಡುಗೋಡಿ ಮುಖ್ಯರಸ್ತೆಯಲ್ಲಿ ಮಂಗಳವಾರ ಸಂಜೆ 7ರಿಂದ ವಾಹನ ಸಂಚಾರವನ್ನು ನಿಷೇಧಿಸಿಲಾಗುತ್ತಿದೆ.
ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಸೂರು ರಸ್ತೆಗಳು ಟ್ರಾಫಿಕ್ ನಿಂದಲೇ ಪರಿಚಿತ, ಇದೀಗ ರಥಸಪ್ತಮಿ ಮೆರವಣಿಗೆಯಿಂದಾಗಿ ಸಂಚಾರ ದಟ್ಟಣೆ ಹೆಚ್ಚುವ ಎಲ್ಲಾ ಸಾಧ್ಯತೆ ಇದೆ.
ಹೊಸೂರು ಮುಖ್ಯರಸ್ತೆಯಿಂದ ಲಷ್ಕರ್ ಗೆ ಕಡೆಗೆ ಬರುವ ವಾಹನಗಳು ಮಡಿವಾಳದಲ್ಲಿ ತಿರುವು ತೆಗೆದುಕೊಳ್ಳಬೇಕು. ಅಲ್ಲಿಂದ ಡಾ. ಮರಿಗೌಡ ರಸ್ತೆ ಹಾಗೂ ಡೈರಿ ಜಂಕ್ಷನ್ ಮೂಲಕ ಕೆಎಚ್ ರಸ್ತೆ ತಲುಪಿ ಅಲ್ಲಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಸಂಚರಿಸಬೇಕು.

ಕೋರಮಂಗಲ 80 ಅಡಿ ರಸ್ತೆಯ ಮೂಲಕ ಬರುವ ವಾಹನಗಳು ಲಷ್ಕರ್ ರಸ್ತೆಯಿಂದ ಮಡಿವಾಳ ಚೆಕ್ಪೋಸ್ಟ್, ಮರಿಗೌಡ ರಸ್ತೆಗೆ ತಲುಪಬೇಕು. ಯಡನೀರು ಮಠದ ಕಡೆಯಿಂದ ಬರುವ ವಾಹನಗಳು 80 ಅಡಿ ರಸ್ತೆಯ ಪೆರಿಫೆರಲ್ ರಸ್ತೆ ಮೂಲಕ ವಿವೇಕನಗರ ತಲುಪಬೇಕು.












Click it and Unblock the Notifications