Get Updates
Get notified of breaking news, exclusive insights, and must-see stories!

Bengaluru Karaga: ಕರಗ ಮಹೋತ್ಸವಕ್ಕೆ 10,000 ಜನ ಸೇರುವ ನಿರೀಕ್ಷೆ, ಪರ್ಯಾಯ ಮಾರ್ಗಗಳು ಇಲ್ಲಿವೆ

ಬೆಂಗಳೂರು, ಮಾರ್ಚ್ 12: ಬೆಂಗಳೂರಿನಲ್ಲಿ ನಡೆಯಲಿರುವ ಐತಿಹಾಸಿಕ ಕರಗ ಮಹೋತ್ಸವದಲ್ಲಿ 10,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಾರ್ಚ್ 12 ಮತ್ತು ಮಾರ್ಚ್ 13 ರಂದು ನಡೆಯಲಿರುವ ಈ ಉತ್ಸವದ ಕಾರಣ ಎರಡು ದಿನ ಸಂಚಾರ ದಟ್ಟಣೆ ಉಂಟಾಗಲಿದ್ದು, ಬೆಂಗಳೂರು ಪೊಲೀಸರು ಮಂಗಳವಾರ ಸಂಚಾರ ಸಲಹೆಯನ್ನು ಹೊರಡಿಸಿದ್ದಾರೆ.

ಮಡಿವಾಳ ವ್ಯಾಪ್ತಿಯಲ್ಲಿ ಎರಡು ದಿನಗಳಲ್ಲಿ ಟ್ರಾಫಿಕ್ ನಿರ್ವಹಣೆ ಮತ್ತು ಸುಗಮ ವಾಹನ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮಾರ್ಗಸೂಚಿಗಳನ್ನು ಹಾಕಿದ್ದಾರೆ. ಮಡಿವಾಳ ವ್ಯಾಪ್ತಿಯ ಹೊಂಗಸಂದ್ರ ಬೇಗೂರು ಮುಖ್ಯರಸ್ತೆಯಲ್ಲಿ 10 ವರ್ಷಕ್ಕೊಮ್ಮೆ ನಡೆಯುವ ಶ್ರೀ ರೇಣುಕಾ ಯಲ್ಲಮ್ಮ ದೇವಿ ಕರಗ ಮಹೋತ್ಸವದಲ್ಲಿ 2024ರ ಮಾರ್ಚ್ 12 ಮತ್ತು 13ರಂದು ರಾಜಕೀಯ ಮುಖಂಡರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 10 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಮಡಿವಾಳ ಸಂಚಾರ ಪೊಲೀಸ್ ಠಾಣೆ ಸಲಹೆ ನೀಡಿದೆ.

Traffic Alert Karaga Mahotsava expected 10 000 Crowd Cops issue traffic advisory

ಇದಲ್ಲದೆ, ಮಾರ್ಚ್ 12, 2024 ರಂದು, ಸಂಜೆ 5:00 ರಿಂದ ಹೂವಿನ ಪಲ್ಲಕ್ಕಿ ಉತ್ಸವವು ಹೊಂಗಸಂದ್ರ ಆಂಜನೇಯ ದೇವಸ್ಥಾನದಿಂದ ಆದರ್ಶ ಶಾಲೆಯವರೆಗೆ ಸಾಗಲಿದೆ. ಈ ವೇಳೆ ಕೋಡಿಚಿಕ್ಕನಹಳ್ಳಿ ಜಂಕ್ಷನ್‌ನಿಂದ ಹೊಂಗಸಂದ್ರ ಮುಖ್ಯರಸ್ತೆ ಮೂಲಕ ಬೇಗೂರು ಕಡೆಗೆ ಹೋಗುವ ವಾಹನಗಳನ್ನು ಕೋಡಿಚಿಕ್ಕನಹಳ್ಳಿ ಜಂಕ್ಷನ್‌ನಲ್ಲಿ ತಡೆದು ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಡಿ ಮಾರ್ಟ್ ಕಡೆಗೆ ತಿರುಗಿಸಲಾಗುತ್ತದೆ.

ಅದೇ ರೀತಿ ಬೇಗೂರು ಮುಖ್ಯರಸ್ತೆಯಲ್ಲಿ ಕೋಡಿಚಿಕ್ಕನಹಳ್ಳಿ ಜಂಕ್ಷನ್ ಕಡೆಗೆ ಬರುವ ವಾಹನಗಳನ್ನು ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಪಿ.ಕೆ.ಕಲ್ಯಾಣ ಮಂಟಪ ಅಡ್ಡರಸ್ತೆಯಲ್ಲಿ ತಡೆದು ಬೇಗೂರು ಒಳರಸ್ತೆಗಳಲ್ಲಿ ಮರುನಿರ್ದೇಶಿಸಲಾಗುತ್ತದೆ. ಈ ಬದಲಾವಣೆಗಳನ್ನು ಪರಿಗಣಿಸಿ, ಮಂಗಳವಾರ ಸಂಜೆ 5:00 ರಿಂದ ಬುಧವಾರ ಮಧ್ಯಾಹ್ನ 3:00 ರವರೆಗೆ ಸಾರ್ವಜನಿಕ ಬಳಕೆಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ಈ ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ

1. ಹೊಸೂರು ಮುಖ್ಯರಸ್ತೆಯಲ್ಲಿ ಬೊಮ್ಮನಹಳ್ಳಿ ಜಂಕ್ಷನ್ ಮೂಲಕ ಬೇಗೂರು ಕಡೆಗೆ ಬರುವ ವಾಹನಗಳು ನೇರವಾಗಿ ಕೂಡ್ಲುಗೇಟ್‌ಗೆ ತೆರಳಿ ಅಲ್ಲಿಂದ ಬಲ ತಿರುವು ಪಡೆದು ಬೇಗೂರು ಮುಖ್ಯರಸ್ತೆ ತಲುಪಬಹುದು.

Traffic Alert Karaga Mahotsava expected 10 000 Crowd Cops issue traffic advisory

2. ಬೊಮ್ಮನಹಳ್ಳಿ ಜಂಕ್ಷನ್‌ನಿಂದ ದೇವರಚಿಕ್ಕನಹಳ್ಳಿ ಮತ್ತು ಬೇಗೂರು ಕಡೆಗೆ ಹೋಗುವ ವಾಹನಗಳು ಕೋಡಿಚಿಕ್ಕನಹಳ್ಳಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಡಿ ಮಾರ್ಟ್ ಜಂಕ್ಷನ್ ಮೂಲಕ ಸಾಗಬೇಕು.

3. ಬೇಗೂರಿನಿಂದ ಕೋಡಿಚಿಕ್ಕನಹಳ್ಳಿ ಕಡೆಗೆ ಬರುವ ವಾಹನಗಳು ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಕೆ.ಕಲ್ಯಾಣ ಮಂಟಪ ಕ್ರಾಸ್ ಬಳಿ ಎಡ ತಿರುವು ಪಡೆದು ಬೇಗೂರಿನ ಆಂತರಿಕ ರಸ್ತೆಗಳ ಮೂಲಕ ಕೋಡಿಚಿಕ್ಕನಹಳ್ಳಿ ತಲುಪಬಹುದು.

4. ಮುಂದೆ ಸಾಗುವ ವಾಹನಗಳು ದೇವರಚಿಕ್ಕನಹಳ್ಳಿ ಮುಖ್ಯರಸ್ತೆ ತಲುಪಿ ಕೋಡಿಚಿಕ್ಕನಹಳ್ಳಿ ಜಂಕ್ಷನ್ ಮೂಲಕ ಬೊಮ್ಮನಹಳ್ಳಿ ಜಂಕ್ಷನ್ ಕಡೆಗೆ ಸಾಗಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+