ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಭಾರೀ ಮಳೆಗೆ ಮುಳುಗುವ ಅಪಾಯದಲ್ಲಿರುವ ಪ್ರದೇಶಗಳು ಯಾವವು!

|
Google Oneindia Kannada News

Recommended Video

ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಮಳೆ ಸಾಧ್ಯತೆ | ಈ ಪ್ರದೇಶಗಳು ಮುಳುಗುವ ಭೀತಿಯಲ್ಲಿ | Oneindia Kannada

ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ರಾತ್ರಿ ಹಲವು ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಬೆಂಗಳೂರಿಗರು ತತ್ತರಿಸಿದ್ದಾರೆ. ಧಾರಾಕಾರ ಮಳೆಯಿಂದ ಹಲವು ಬಡಾವಣೆಗಳು ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ.

ಇನ್ನೂ ಒಂದು ವಾರಗಳ ಕಾಲ ರಾಜಧಾನಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಮಳೆಯಿಂದ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಸಜ್ಜಾಗಬೇಕು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ(ಕೆಎಸ್ ಎನ್ಡಿಎಂಸಿ) ಹೇಳಿದೆ.

ಬೆಂಗಳೂರು ಮಳೆ, ಬೆಳ್ಳಂದೂರು ಕೆರೇಲಿ ನೊರೆ, ಪಿಕ್ನಿಕ್ ಗೆ ಹೋಗೋಣ ಬಾರೆಬೆಂಗಳೂರು ಮಳೆ, ಬೆಳ್ಳಂದೂರು ಕೆರೇಲಿ ನೊರೆ, ಪಿಕ್ನಿಕ್ ಗೆ ಹೋಗೋಣ ಬಾರೆ

ಬೆಂಗಳೂರಿನಲ್ಲಿ ಕಳೆದ ಎರಡು ರಾತ್ರಿ ಸುರಿದಂಥದೇ ಭಾರೀ ಮಳೆ ಮುಂದುವರಿದರೆ ಉದ್ಯಾನನಗರಿಯ ಹಲವು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದೆ ಎಂದು ಕೆಎಸ್ಎನ್ಡಿಎಂಸಿ ಎಚ್ಚರಿಕೆ ನೀಡಿದ್ದು, ಫ್ಲಡ್ ಪಾಯಿಂಟ್ ಗಳನ್ನು ಈ ಕೆಳಗಿನ ಪ್ರದೇಶಗಳಲ್ಲಿ ಗುರುತಿಸಿದೆ.

ಜೆಪಿ ಪಾರ್ಕ್ ಮತ್ತಿಕೆರೆ

ಜೆಪಿ ಪಾರ್ಕ್ ಮತ್ತಿಕೆರೆ

ಲಗ್ಗೆರೆ, ಯಶವಂತಪುರ ರೈಲ್ವೇ ಸ್ಟೇಶನ್ ಪ್ರದೇಶ, ಜಯಪ್ರಕಾಶ್ ನಾರಾಯಣ್ ಪಾರ್ಕ್(ಜೆಪಿ ಪಾರ್ಕ್ ಮತ್ತಿಕೆರೆ), ಎನ್ ಆರ್ ಗಾರ್ಡನ್, ಆರ್ ಆರ್ ನಗರ ಗಳು ಜಲಾವೃತವಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಬೆಂಗಳೂರಲ್ಲಿ ಮತ್ತೆ ಧಾರಾಕಾರ ಮಳೆ, ಹಲವು ಬಡಾವಣೆಗಳು ಜಲಾವೃತ ಬೆಂಗಳೂರಲ್ಲಿ ಮತ್ತೆ ಧಾರಾಕಾರ ಮಳೆ, ಹಲವು ಬಡಾವಣೆಗಳು ಜಲಾವೃತ

ಮುನಿರೆಡ್ಡಿ ಪಾಳ್ಯ

ಮುನಿರೆಡ್ಡಿ ಪಾಳ್ಯ

ಎಚ್ ಎಸ್ ಆರ್ ಲೇಔಟ್ ನ ನ್ಯಾಶ್ನಲ್ ಗೇಮ್ಸ್ ವಿಲೇಜ್, ಬೊಮ್ಮನಹಳ್ಳಿ ವಲಯದ ಮುನಿರೆಡ್ಡಿ ಪಾಳ್ಯ, ಮಾರುತಿ ನಗರ, ಬಿಸ್ಮಿಲ್ಲಾ ನಗರ, ಮಾಗಡಿ ಪೊಲೀಸ್ ಸ್ಟೇಶನ್ ಪ್ರದೇಶ ಸಹ ಜಲಾವೃತವಾಗಲಿವೆ.

ರಸ್ತೆಗುಂಡಿ ಮುಚ್ಚುವ ಗಂಡಾಗುಂಡಿ ತಡೆಗೆ ಕೋರ್ಟ್ ಕಮಿಷನ್ ನೇಮಕ ರಸ್ತೆಗುಂಡಿ ಮುಚ್ಚುವ ಗಂಡಾಗುಂಡಿ ತಡೆಗೆ ಕೋರ್ಟ್ ಕಮಿಷನ್ ನೇಮಕ

ರುದ್ರಪ್ಪ ಗಾರ್ಡನ್

ರುದ್ರಪ್ಪ ಗಾರ್ಡನ್

ಅಂತೆಯೇ ರುದ್ರಪ್ಪ ಗಾರ್ಡನ್, ದೊಮ್ಮಲೂರು, ದಾಸರಹಳ್ಳಿ ವಲಯದ ಕೆಲವು ಪ್ರದೇಶಗಳು ಸಹ ಜಲಾವೃತವಾಗುವ ಸಾಧ್ಯತೆ ಇದೆ. ಭಾನುವಾರ ರಾತ್ರಿ ಇಲ್ಲಿನ ಅಂಜನಾಪುರದಲ್ಲಿ 20 ಮಿ ಮೀ. ನಷ್ಟು ಮಳೆಯಾಗಿತ್ತು. ಹುಲಿಮಾವು ಕೆರೆ ಸೇರಿದಂತೆ ದಕ್ಷಿಣ ಬೆಂಗಳೂರು ಭಾಗದ ಹಲವೆಡೆ ಧಾರಾಕಾರ ಮಳೆಯಾಗಿತ್ತು.

ಒಂದು ವಾರ ಮಳೆ?

ಒಂದು ವಾರ ಮಳೆ?

ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಬೆಂಗಳೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ ಮಳೆಯಾಗುತ್ತಿದೆ.

English summary
India Meteorological Department predicts Bengaluru may get heavy rain in this week And Karnataka State Natural Disaster Monitoring Centre listed some areas, which may affected with heavy rain and may get floodlike situations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X