ರಾಜ್ಯದಲ್ಲಿ ಹೆಚ್ಚಿದ ತಾಪಮಾನಕ್ಕೆ ಬಸವಳಿದ ಜನ
ಬೆಂಗಳೂರು, ಮಾರ್ಚ್ 27: ರಾಜ್ಯದಲ್ಲಿ ಎರಡು ವಾರಗಳ ಹಿಂದೆ ಸಾಕಷ್ಟು ಕಡೆಗಳಲ್ಲಿ ಮಳೆಯಾಗಿತ್ತು. ನಂತರ ಏಕಾಏಕಿ ತಾಪಮಾನ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇನ್ನು ಎರಡು ದಿನ ಮೋಡ ಕವಿದ ವಾತಾವರಣವಿರಲಿದೆ.
ರಾಜ್ಯದಲ್ಲಿ ತಾಪಮಾನ ಏರುತ್ತಿದ್ದು, ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಇತ್ತೀಚೆಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಾಗ ರಾಜ್ಯದಲ್ಲಿ ತಾಪಮಾನದಲ್ಲಿ ಕುಸಿತವಾಗಿತ್ತು.
ಚಳಿ ಕಳಚಿ ಬೇಸಿಗೆಯತ್ತ ಹೆಜ್ಜೆ: ತಾಪಮಾನ ಹೆಚ್ಚಳ
ಹೀಗಾಗಿ ಮಾರ್ಚ್ ಎರಡನೇ ವಾರದಲ್ಲಿ ಹೆಚ್ಚು ಸೆಕೆ ಕಂಡುಬಂದಿರಲಿಲ್ಲ. ಮಳೆ ನಿಂತ ನಂತರ ಬಿಸಿಲಿನ ಆಟ ಆರಂಭವಾಗಿದ್ದು, ದಿನೇದಿನೆ ಸೆಕೆ ಅಧಿಕವಾಗುತ್ತಿದೆ. ಹವಾಮಾನ ಇಲಾಖೆಯ ಸೋಮವಾರದ ಮಾಹಿತಿಯಂತೆ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಕರಾವಳಿಯ ಎಲ್ಲ ಪ್ರದೇಶಗಳಲ್ಲೂ ಅಧಿಕ ತಾಪಮಾನವಿದೆ.
ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲೂ ತಾಪಮಾನವು ವಾಡಿಕೆಗಿಂತ ಸ್ವಲ್ಪ ಏರಿಕೆಯಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 1.5 ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ. ಏಪ್ರಿಲ್ನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು ವಾಡಿಕೆಗಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಕರಾವಳಿಯಲ್ಲಿ ಸಮುದ್ರ ಭಾಗದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಸೆಕೆ ಅತಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ 37.2ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ವಿಜಯಪುರದಲ್ಲಿ ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್ , ಬಾಗಲಕೋಟೆಯಲ್ಲಿ 37.8ಡಿಗ್ರಿ ಸೆಲ್ಸಿಯಸ್ , ಗದಗ 37.2ಡಿಗ್ರಿ ಸೆಲ್ಸಿಯಸ್ , ಕಲಬುರ್ಗಿ 40.2ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನು
ಕರಾವಳಿ
ಭಾಗದಲ್ಲಿ
ಅಂದರೆ
ಹೊನ್ನಾವರದಲ್ಲಿ
32.7
ಡಿಗ್ರಿ
ಸೆಲ್ಸಿಯಸ್,
ಶಿರಾಲಿಯಲ್ಲಿ
35.2ಡಿಗ್ರಿ
ಸೆಲ್ಸಿಯಸ್,
ಮಂಗಳೂರಿನಲ್ಲಿ
34.6
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶವಿದೆ.
ಬೆಂಗಳೂರು
ನಗರದಲ್ಲಿ
34.1
ಡಿಗ್ರಿ
ಸೆಲ್ಸಿಯಸ್
ಉಷ್ಣಾಂಶ
ದಾಖಲಾಗಿದ್ದು
ಅಂತಾರಾಷ್ಟ್ರೀಯ
ವಿಮಾನ
ನಿಲ್ದಾಣದಲ್ಲಿ
32.9
ಡಿಗ್ರಿ
ಸೆಲ್ಸಿಯಸ್
ಉಷ್ಣಾಂಶ
ದಾಖಲಾಗಿದೆ.
ಇನ್ನು
ಎರಡು
ದಿನಗಳಲ್ಲಿ
ಎರಡು
ಡಿಗ್ರಿ
ಸೆಲ್ಸಿಯಸ್
ಗಳಷ್ಟು
ಹೆಚ್ಚಳವಾಗುವ
ನಿರೀಕ್ಷೆ
ಇದೆ.