ಯಜಮಾನ ಸಿನೆಮಾದ ಹಾಡಿಗೆ ಈಗ ವಿಚಿತ್ರ ಅರ್ಥ ಕಲ್ಪಿಸಿ ಹಾಡಿದ ತಮಿಳು ಹುಡುಗರು: ವಿಡಿಯೊ ಫುಲ್ ವೈರಲ್
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಚಾರದ (ಕಾಮಿಡಿ, ಪ್ರೀತಿ, ಪ್ರೇಮ ಕಥೆಗಳು, ವಿಚಿತ್ರ ರೀಲ್ಸ್) ಬಗ್ಗೆ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಚಾಮರಾಜನಗರ ಜಿಲ್ಲೆಯ ತಾತಾನೋರ್ವ ಇರೋವಾರ್ಗೂ ಎಂಜಾಯ್ ಮಾಡಬೇಕು. ಸತ್ತ ಮೇಲೆ ಏನು ಮಾಡೋದಿಕ್ಕೆ ಆಗೋದಿಲ್ಲ ಎನ್ನುವ ಮಾತು ಭಾರೀ ವೈರಲ್ ಆಗಿತ್ತು. ಇದೀಗ ತಮಿಳು ಹುಡುಗರು ಹಾಡಿದ ಆ ವಿಭಿನ್ನವಾಗಿ ಹಾಡೊಂದರ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಿಷ್ಣುವರ್ಧನ್ ನಟನೆಯ ಯಜಮಾನ ಸಿನೆಮಾ 2000ನೇ ಇಸವಿಯಲ್ಲಿ ಬಂದಿದ್ದು, ಇಲ್ಲಿಗೆ 23 ವರ್ಷ ಆಗಿದೆ. ಇನ್ನು ಆಗಿನ ಕಾಲದಲ್ಲೇ ಏನು ತಂತ್ರಜ್ಞಾನದ ಅಭಿವೃದ್ಧಿ ಇಲ್ಲದಿದ್ದಾಗಲೇ ಭಾರೀ ಸದ್ದು ಮಾಡಿದ್ದ ಸಿನೆಮಾ ಅದು. ಈಗಲೂ ಕೂಡ ಮನೆಯಲ್ಲಿ ಟಿವಿಯಲ್ಲಿ ಈ ಸಿನೆಮಾ ಹಾಕಿದರೆ ಕುಟುಂಬದವರೆಲ್ಲ ಒಟ್ಟಿಗೆ ಕುಳಿತುಕೊಂಡು ನೋಡುತ್ತಾರೆ. ಇದೇ ಸಿನಿಮಾದ "ನಮ್ಮ ಮನೆಯಲಿ ದಿನವು ದಿನವು ಚೈತ್ರವೆ" ಎಂಬ ಹಾಡಿನ ರೀತಿಯೇ ಇದೀಗ ತಮಿಳು ಹುಡುಗರು ವಿಭಿನ್ನ ಅರ್ಥ ಕಲ್ಪಿಸಿ ಹಾಡಿರುವುದು ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

"ನಮ್ಮ ಮಮ್ಮಿಗೂ ಎದುರುಮನೆ ಆಂಟಿಗೂ ಜಗಳವೇ, ಪ್ರತಿದಿನ ನಡೆಯುವ ಜಗಳವ ತಡೆಯಲು ಸಾಧ್ಯವೇ. ಮಮ್ಮಿಗೂ.. ಆ ಆಂಟಿಗೂ.. ಒಂದೇ ಅನುಮಾನ, ನಮ್ಮಪ್ಪ ಯಾರಿಗೆ ಯಜಮಾನ," ಎಂದು ತಬಲ ಬಾರಿಸುವ ಮೂಲಕ ತಮಿಳು ಹುಡುಗರು ವಿಭಿನ್ನವಾಗಿ ಹಾಡಿದ್ದಾರೆ. ಆಗ ಫೇಮಸ್ ಆಗಿದ್ದ "ನಮ್ಮ ಮನೆಯಲಿ ದಿನವು ದಿನವು ಚೈತ್ರವೆ" ಎಂಬ ಯಜಮಾನ ಸಿನಿಮಾದ ಹಾಡಿಗೆ ಇದೀಗ ಹೀಗೆ ಬೇರೆ ಅರ್ಥ ಕಲ್ಪಿಸಿ ಹಾಡಿರುವುದು ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗೆಯೇ ಇದಕ್ಕೆ ಪ್ರತಿಕ್ರಿಯೆಗಳು ಕೂಡ ವಿಚಿತ್ರವಾಗಿ ಬರುತ್ತಿವೆ.
ತಮಿಳು ಹುಡುಗರು ಹಾಡಿರುವ ಈ ಹಾಡು ಇದೀಗ ಭಾರೀ ಫೇಮಸ್ ಆಗಿದ್ದು, ನೋಡುಗರು, ಕೇಳುಗರನ್ನು ರಂಜಿಸುವಂತಿದೆ. ಹಳೇ ಕಾಲದ ಸಿನೆಮಾಗಳ ಹಾಡುಗಳು ಎಲ್ಲೋ ಒಂದು ಕಡೆ ಮರೆಯಾಗುತ್ತಿದ್ದವು. ಆದರೆ ಈ ರೀತಿಯ ರೀಲ್ಸ್ಗಳಿಂದಾದರೂ ಹೊರಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಇಂತಹ ರೀಲ್ಸ್ ಹಾಡುಗಳಿಗೆ ನೋಡುಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ.
ಅಷ್ಟೇ ಅಲ್ಲದೆ ತಮಿಳಿಗರು ಇಷ್ಟು ಚಂದವಾಗಿ ಕನ್ನಡದಲ್ಲಿ ಹಾಡುಗಳನ್ನು ಹಾಡುತ್ತರಲ್ಲ ಅದೇ ಒಂದೆಡೆ ಖಷಿಯ ವಿಚಾರವಾಗಿದೆ. ಇದು ಕೇಳುಗರ ಕಿಮಿಗೆ ಕಟ್ಟ ಅರ್ಥ ಕಲ್ಪಿಸಬಹುದು. ಆದರೆ ನೀವು ಇನ್ನೊಂದು ರೀತಿಯಲ್ಲೂ ಯೋಚನೆ ಮಾಡಬಹುದಾಗಿದೆ. ಮನರಂಜನೆ ದೃಷ್ಟಿಯಿಂದ ಕಾಣುವುದು ಹಾಗೂ ನಮ್ಮ ಭಾಷೆಯಲ್ಲಿ ಬೇರೆ ಭಾಷಿಗರು ಹಾಡುಗಳನ್ನು ಸೃಷ್ಟಿ ಮಾಡುತ್ತಿರುವುದಾಗಿರಬಹುದು. ಹೀಗೆ ಧನಾತ್ಮಕವಾಗಿಯೂ ಆಲೋಚನೆ ಮಾಡಬೇಕಾಗುತ್ತದೆ.
-
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Prem: ಸರ್ಸೆ ಸೆರಗ ಹಾಡನ್ನ ಎಲ್ರೂ ತಪ್ಪಾಗಿ ಅರ್ಥ ಮಾಡ್ಕೊಂಡಿದ್ದಾರೆ, ನನ್ನ ಉದ್ದೇಶ ಅದಾಗಿರಲಿಲ್ಲ: ಪ್ರೇಮ್ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications