ಬೃಹತ್ ರಾಷ್ಟ್ರಧ್ವಜ ಸ್ತಂಭ ಬೆಂಗಳೂರಿನಲ್ಲಿ ಅನಾವರಣ
ಬೆಂಗಳೂರು, ಜ.23: ಇಡೀ ದೇಶ ಗಣರಾಜ್ಯೋತ್ಸವ ಆಚರಣೆಗೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೇಶದಲ್ಲಿಯೇ ಅತಿ ಎತ್ತರದ, ದೊಡ್ಡ ರಾಷ್ಟ್ರಧ್ವಜ ಸ್ತಂಭವನ್ನು ಪ್ರತಿಷ್ಠಾಪಿಸಲಾಗಿದೆ.
ಭಾರದ್ವಾಜರಿಂದ ಧ್ವಜ ಅನಾವರಣ: 213 ಅಡಿ ಎತ್ತರದ ಧ್ವಜ ಸ್ತಂಭವು ಚೌಡಯ್ಯ ರಸ್ತೆಯಲ್ಲಿರುವ (ನೆಹರೂ ತಾರಾಲಯದ ಎದುರಿಗೆ) ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ವಹಣಾ ಟ್ರಸ್ಟ್ ಕೇಂದ್ರದಲ್ಲಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇಂದು ಇದೇ ಸ್ತಂಭದ ಮೇಲಿಂದ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಲೋರ್ಕಾಪಣೆಗೊಳಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸತ್ ಸದಸ್ಯರಾದ ರಾಜೀವ್ ಚಂದ್ರಶೇಖರ್, ಅನಂತಕುಮಾರ್, ನವೀನ್ ಜಿಂದಾಲ್ ಉಪಸ್ಥಿತರಿದ್ದರು.

ರಾಷ್ಟ್ರ ಧ್ವಜ ಸಂಹಿತೆಯ ( Flag Code of India ) ಪ್ರಕಾರ ಧ್ವಜವನ್ನು 24 ಗಂಟೆಯೂ ಹಾರಿಬಿಡುವಂತಿಲ್ಲ. ಆದರೆ ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ವಹಣಾ ಟ್ರಸ್ಟ್ ಕೇಂದ್ರದಲ್ಲಿ ವಿಶೇಷವಾಗಿ ಹಾರಿಬಿಡಲು ಇತ್ತೀಚೆಗೆ ಅನುಮತಿ ಪಡೆಯಲಾಗಿದೆ. ಈ ಚಾರಿತ್ರಿಕ ತೀರ್ಪು ಜನವರಿ 23ರಂದು 2004ರಂದು ಹೊರಬಿದ್ದ ಕಾರಣ ಆ ನೆನಪಿನಲ್ಲಿ ಇಂದೇ ಧ್ವಜ ಅನಾವರಣ ಮಾಡಲಾಗಿದೆ.
ಹೀಗಿದೆ ರಾಷ್ಟ್ರಧ್ವಜ ಸ್ತಂಭ:
213 ಅಡಿ ಎತ್ತರದ ಧ್ವಜಸ್ತಂಭದಲ್ಲಿ 48 ಅಡಿ ಉದ್ದ, 72 ಅಡಿ ಅಗಲದ, 31 ಕೆಜಿ ತೂಕದ ರಾಷ್ಟ್ರಧ್ವಜ ಇದಾಗಿದೆ. ಗಣರಾಜ್ಯೋತ್ಸವಕ್ಕೆ ಮೂರು ದಿನಕ್ಕೆ ಮುಂಚೆ ಇದರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಸಂಸದ, National Military Memorial Committee ಅಧ್ಯಕ್ಷ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಇದು 24x7 ಜಮಾನಾ!
ಈಗಂತೂ ಬಿಡಿ ಹಗಲು ರಾತ್ರಿ ಅನ್ನದೆ ಎಲ್ಲವೂ ಇಡೀ ದಿನ ನೇರವೇರುತ್ತಿರುತ್ತದೆ. ಈ ಧ್ವಜವೂ ಹಾಗೆಯೇ ಹಗಲು ರಾತ್ರಿ ಹಾರಾಡುತ್ತಿರುತ್ತದೆ. ದೀಪಾಲಂಕಾರದಿಂದ ಆವೃತವಾದ ಈ ಧ್ವಜವು ಬೆಂಗಳೂರಿನ ಯಾವುದೇ ಮೂಲೆಯಿಂದ ನೋಡಿದರೂ ಕಾಣಸಿಗುತ್ತದೆ. Remote control ನಿಂದ ಈ ಧ್ವಜವನ್ನು ನಿಯಂತ್ರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ರಾಜೀವ್ ಚಂದ್ರಶೇಖರ್, ಈ ಬೃಹತ್ ರಾಷ್ಟ್ರಧ್ವಜ ಎಲ್ಲರಿಗೂ ಸ್ಫೂರ್ತಿಯಾಗಲಿದೆ. ಭಾರತದಲ್ಲೇ ಅತೀ ದೊಡ್ಡ ರಾಷ್ಟ್ರಧ್ವಜ ಇದಾಗಿದ್ದು, ಪ್ರತಿದಿನವೂ ಹಗಲು ರಾತ್ರಿ ಹಾರಾಡಲಿದೆ ಎಂದು ತಿಳಿಸಿದರು. ಸುಮಾರು 50 ಲಕ್ಷ ರೂ. ವೆಚ್ಚದ ಯೋಜನೆ ಇದಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications