ಬೆಂಗಳೂರಲ್ಲಿ ಇಬ್ಬರು ಬಾಲಕರ ಮೇಲೆ ಬೀದಿನಾಯಿಗಳ ದಾಳಿ
ಬೆಂಗಳೂರು, ಸೆಪ್ಟೆಂಬರ್ 6: ವಾರದ ಹಿಂದಷ್ಟೇ ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದ ಬೀದು ನಾಯಿಗಳು ಗುರುವಾರ ಮತ್ತೊಮ್ಮೆ ನಗರದಲ್ಲಿ ಅಟ್ಟಹಾಸ ಮೆರೆದಿದೆ.
ರಾಜಾಜಿನಗರ ಸಮೀಪವಿರುವ ಗುಬ್ಬಣ್ಣ ಲೇಔಟ್ ಬಳಿ ಇಬ್ಬರು ಬಾಲಕರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ, ಆಕಾಶ್ ಮತ್ತು ಸಾಯಿಸಿರಿ ದಾಳಿಗೆ ಒಳಗಾದವರು. ಈ ಇಬ್ಬರು ಬಾಲಕರು ರಾಜಾಜಿನಗರದ ಸೇಂಟ್ ಮೀರಾ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗಾಯಗೊಂಡ ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ಬೀದಿ ನಾಯಿ ಸಮಸ್ಯೆಯೇ? ದೂರು ನೀಡುವುದು ಹೇಗೆ?
ವಾರದ ಹಿಂದೆ ನಾಲ್ಕು ವರ್ಷದ ಬಾಲಕ ಅರುಣನ ಮೇಲೆ ಹತ್ತಕ್ಕಿಂತ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿದ್ದವು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.
ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿ ಹಾವಳಿ: 4 ವರ್ಷದ ಮಗು ಮೇಲೆ ದಾಳಿ
ಅಂದು ಬಿಬಿಎಂಪಿ ಎಚ್ಚೆತ್ತುಕೊಂಡು ಬಾಲಕನನ್ನು ಕಚ್ಚಿದ್ದ ಬೀದಿನಾಯಿಗಳನ್ನು ಮಾತ್ರ ಹುಡುಕಿ ಬಂಧಿಸಿಟ್ಟಿದ್ದರು. ಆದರೆ ಏರಿಯಾಗೆ ಮಾತ್ರ ಸೀಮಿತವಾಯಿತೇ, ಉಳಿದೆಲ್ಲಾ ಪ್ರದೇಶಗಳಲ್ಲೂ ಬೀದಿನಾಯಿಗಳ ಕಾಟ ವಿಪರೀತವಾಗಿದೆ ಎನ್ನುವ ಮಾತು ಪೋಷಕರ ವಲಯದಿಂದ ಕೇಳಿಬಂದಿತ್ತು. ಇದೀಗ ಮತ್ತೊಂದು ಘಟನೆ ನಡೆದಿರುವುದು ಪೋಷಕರನ್ನು ಆತಂಕಕ್ಕೀಡುಮಾಡಿದೆ.