ನೋಟು ರದ್ದು: ಚಿಲ್ಲರೆ ವ್ಯಾಪಾರ ಏನಾಗಿದೆ?
ಬೆಂಗಳೂರು, ನವೆಂಬರ್ 22: ನೋಟು ಬದಲಾವಣೆಯಿಂದ ರಾಜ್ಯದಲ್ಲಿ ಎಲ್ಲ ವ್ಯಾಪಾರಗಳೂ ತಗ್ಗವೆ ಹಾಗೆಯೇ ಚಿಲ್ಲರೆ ವ್ಯಾಪಾರಿಗಳ ಗತಿ ಚಿಂತಾಜನಕವಾಗಿದೆ.
ಅಣ್ಣಾ.. ಒಂದು ಬೀಡ ಕೋಡು ಎಂದು 2000 ನೋಟನ್ನು ನೀಡಿದರೆ ಅವನ ಸ್ಥಿತಿ ಹೇಗಾಗಬೇಡ, ಚಿಲ್ಲರೆ ಕೊಡಿ ಇಲ್ಲವೆ ಮನೆಗೆ ಹೋಗಿ ಎಂದು ಸಾರಾಸಗಟಾಗಿ ಹೇಳಿಬಿಡುತ್ತಾರೆ. ಚಿಲ್ಲರೆಯ ಕಾರಣದಿಂದಾಗಿಯೇ ವ್ಯಾಪಾರ ತಗ್ಗಿದೆ.
ಸಿಗರೇಟು, ಬನ್, ಟೀ , ಪಾನ್ ಪರಾಕ್ ಹೀಗೆ ಸಣ್ಣ ಪುಟ್ಟ ವಸ್ತ್ರಗಳನ್ನು ಇಷ್ಟುಕೊಂಡು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ನ. 8ರಿಂದ ಸರಿಯಾಗಿ ವ್ಯಾಪಾರವನ್ನೇ ಮಾಡಿಲ್ಲ. ದಿನಕ್ಕೆ ಸಾವಿರಾರು ರುಪಾಯಿಗಳನ್ನು ನೋಡುತ್ತಿದ್ದ ಚಿಲ್ಲರೆ ವ್ಯಾಪಾರಿಗಳೂ ಕೂಡ ನೂರು ಇನ್ನೂರು ರುಪಾಯಿಗೆ ಇಳಿದಿದ್ದಾರೆ.[ನೋಟು ನಿಷೇಧದಿಂದ ಶೇ.70ರಷ್ಟು ಇಳಿಮುಖವಾದ ಅಪರಾಧಗಳು]

ವ್ಯಾಪಾರವಾಗದವರು ಬೇರೆ ಯಾವುದಾದರೂ ವ್ಯಾಪಾರ ಶುರುಮಾಡಬೇಕು ಹಾಕಿದ ಬಂಡವಾಳ ಕೈಗಿಟ್ಟುತ್ತಿಲ್ಲ ಎಂದು ಬೇರೆ ಯೋಚನೆಗೆ ಮುಂದಾಗಿದ್ದಾರೆ.
ಸುಮಾರಾಗಿ ಸಂಜೆ ಹೊತ್ತಿಗೆ ಚಿಲ್ಲರೆ ಅಂಗಡಿಯಲ್ಲಿ ರು 400-500 ನೋಡುತ್ತಿದ್ದ ಆರ್.ಟಿ.ನಗರದ ರಾಜಣ್ಣ ಸಂಜೆಯಾದರೂ ಸರಿಯಾಗಿ ರು 200 ವ್ಯಾಪಾರ ಆಗುತ್ತಿಲ್ಲ ಎನ್ನುತ್ತಾರೆ. ಕೊಟ್ಟರೆ ರು 500 ಹಳೇ ನೋಟನ್ನೇ ಕೊಡುತ್ತಾರೆ ಚಿಲ್ಲರೆ ಕೇಳುತ್ತಾರೆ. ಕೆಲವು ದಿನ ಕ್ಯೂನಲ್ಲಿ ನಿಂತು ಚಿಲ್ಲರೆ ತರುವುದು ಹಳೇ ನೋಟುಗಳನ್ನು ಪಡೆಯುವುದು ಮಾಡುತ್ತಿದ್ದೆ ಆದರೆ ಎಷ್ಟುದಿನ ಅಂತ ಹಾಗೆ ಮಾಡುವುದು ಎನ್ನುತ್ತಾರೆ ರಾಜಣ್ಣ.
ಇದು ಬೆಂಗಳೂರಿನ ಒಂದು ಕಥೆಯಲ್ಲ ರಾಜ್ಯದ ಎಲ್ಲ ಜಿಲ್ಲೆ ಎಲ್ಲ ನಗರಗಳ ಚಿಲ್ಲರೆ ವ್ಯಾಪಾರಿಗಳು ಒಂದಿಲ್ಲೊಂದು ರೀತಿ ಚಿಲ್ಲರೆ, ಹೊಸನೋಟು, ಹಳೇ ನೋಟಿನ ಜಾಲದಲ್ಲಿ ಸಿಲುಕಿ ವ್ಯಾಪಾರನ್ನು ಕಳೆದುಕೊಳ್ಳುತ್ತಿದ್ದಾರೆ.
-
2nd PUC ಫಲಿತಾಂಶದಲ್ಲಿ ಶೇ. 13ರಷ್ಟು ಏರಿಕೆ; ಕಲಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಫಸ್ಟ್: ಮಧು ಬಂಗಾರಪ್ಪ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ












Click it and Unblock the Notifications