ಕೊರೊನಾ ವಿರುದ್ಧದ ಸಮರಕ್ಕೆ ಬಾಲಕಿಯ ಕವನದ ಶಕ್ತಿ
ಬೆಂಗಳೂರು, ಏಪ್ರಿಲ್ 9: ಕೊರೊನಾ ವಿರುದ್ಧದ ಸಮರಕ್ಕೆ ಬಾಲಕಿಯ ಕವನ ಶಕ್ತಿ ನೀಡಿದೆ.ಕೊರೊನಾ ಎಂದರೇನು, ಲಾಕ್ಡೌನ್ ಎಂದರೇನು ಎಂದು ಬಾಲಕಿಯನ್ನು ಕೇಳಿದ್ದಕ್ಕೆ ಅವಳು ವಿವರಿಸಿದ್ದು ಹೀಗೆ.
Recommended Video
' ಕೊರೊನಾ ಯಾರಿಗೂ ಅರಿಯದಂತೆ ನಿಮ್ಮನ್ನು ಪ್ರವೇಶಿಸುವ ದುಷ್ಟ ಶಕ್ತಿ, ಪ್ರವೇಶದ ಬಳಿಕವೇ ಎಲ್ಲರೂ ಅರಿಯುವಂತೆ ಗೋಚರವಾಗುತ್ತದೆ. ಯಾರನ್ನೂ ದೂಷಿಸುವಂತಿಲ್ಲ ಯಾಕೆಂದರೆ ನಾವು ಈಗ ಇನ್ನೇನು ಕತ್ತರಿಸಿಯೇ ಹೋಗಲಿದೆ ಎನ್ನುವ ದಾರದ ಮೇಲೆ ನಿಂತಿದ್ದೀವೆ''.
'ಯಾವುದೇ ಚಲನೆ ಇಲ್ಲ, ಶಬ್ದವಿಲ್ಲ, ಅನಿವಾರ್ಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ'.ದೇಶಕ್ಕೋಸ್ಕರ ಎಲ್ಲರೂ ಒಂದಾಗೋಣ, ಯಾವುದೇ ಸಂದರ್ಭ ಬಂದರೂ ಒಗ್ಗಟ್ಟಾಗಿರೋಣ, ಒಬ್ಬರೊಗೊಬ್ಬರು ಸಹಾಯ ಮಾಡೋಣ.

ನಮ್ಮ ಒಳಿತಿಗೋಸ್ಕರ ಸರ್ಕಾರ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ. ನಿಮ್ಮ ನಿಮ್ಮ ಕೈಲಾದ ಸಹಾಯವನ್ನು ಮಾಡಿ. ದೇವರಲ್ಲಿ ಬೇಡಿಕೊಳ್ಳಿ, ನೀವು ಬೇರೆಯವರಿಗೆ ಸಹಾಯ ಮಾಡಿದರೆ ಇನ್ನೊಬ್ಬರು ನಿಮಗೆ ಸಹಾಯ ಮಾಡುತ್ತಾರೆ. ಕೊರೊನಾವನ್ನು ನಾವೆಲ್ಲಾ ಸುಲಭವಾಗಿ ತಡೆಯಬಹುದು. ಎಲ್ಲರೂ ಮನೆಯಲ್ಲಿಯೇ ಇರಿ , ಸುರಕ್ಷಿತವಾಗಿ ಎಂಬ ಸಂದೇಶವನ್ನೂ ಬಾಲಕಿ ನೀಡಿದ್ದಾಳೆ.

ಕೊರೊನಾ ಕುರಿತ ಸುಳ್ಳು ಸುದ್ದಿಗಳನ್ನು ಹರಡಿಸಬೇಡಿ, ಸುಳ್ಳುಸುದ್ದಿಗಳಿಗೆ ಕಿವಿಗೊಡಬೇಡಿ- ಅಮನಾ, ಆರನೇ ತರಗತಿ, ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್.












Click it and Unblock the Notifications