ಮುಂದಿನ ವಾರ ಶಿವಾನಂದ ವೃತ್ತದ ಮೇಲ್ಸೇತುವೆ ಪುನಾರಂಭ: ಬಿಬಿಎಂಪಿ
ಬೆಂಗಳೂರು, ಸೆಪ್ಟೆಂಬರ್ 25: ಕಳೆದ ತಿಂಗಳು ಉದ್ಘಾಟನೆಗೊಂಡ ಒಂದು ವಾರದೊಳಗೆ ಭಾಗಶಃ ಸ್ಥಗಿತಗೊಂಡಿದ್ದ ಶಿವಾನಂದ ಸರ್ಕಲ್ ಮೇಲ್ಸೇತುವೆ ಯಾವುದೇ ವಿನ್ಯಾಸ ದೋಷಗಳನ್ನು ಹೊಂದಿಲ್ಲ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಪುನರಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ತಿಳಿಸಿದೆ.
ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳ ತೀವ್ರ ವಿರೋಧದ ನಡುವೆ ನಿರ್ಮಿಸಲಾದ 493 ಮೀಟರ್ ಉದ್ದದ ಉಕ್ಕಿನ ಮೇಲ್ಸೇತುವೆಯನ್ನು ಬಿಬಿಎಂಪಿ ಆಗಸ್ಟ್ 15 ರಂದು ತೆರೆದಾಗ ಹಲವಾರು ವರ್ಷಗಳ ತಡವಾಗಿತ್ತು. ಆದರೆ ಕೆಲವೇ ದಿನಗಳಲ್ಲಿ, ವಾಹನ ಬಳಕೆದಾರರ ದೂರಿನಂತೆ ಕಳಪೆ ನಿರ್ಮಾಣದಿಂದಾಗಿ ಭಾಗಶಃ ಮುಚ್ಚಬೇಕಾಯಿತು.
ಆಗಸ್ಟ್ 30ರಿಂದ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ವಾಹನ ಸಂಚಾರಕ್ಕೆ ಮುಕ್ತ: ಬಿಬಿಎಂಪಿ
ಇದರಿಂದ ಮುಜುಗರಕ್ಕೊಳಗಾದ ಬಿಬಿಎಂಪಿ ಫ್ಲೈಓವರ್ ಬಾಳಿಕೆಯ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಸಂಶೋಧಕರಿಂದ ತಜ್ಞರ ಅಭಿಪ್ರಾಯ ಕೇಳಿತ್ತು. ಐಐಎಸ್ಸಿ ಸಂಶೋಧಕರನ್ನು ಉಲ್ಲೇಖಿಸಿ, ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ಗುಣಮಟ್ಟದಲ್ಲಿ ವ್ಯತ್ಯಾಸ ಇಲ್ಲ. ಈ ಫ್ಲೈಓವರ್ ಸಾಕಷ್ಟು ಬಾಳಿಕೆ ಬರುವಂತಹದ್ದಾಗಿದೆ ಎಂದು ಹೇಳಿದರು. ಆದರೆ, ಬಿಬಿಎಂಪಿ ಇನ್ನೂ ತಜ್ಞರ ತಂಡದಿಂದ ಅಧಿಕೃತ ವರದಿಯನ್ನು ಸ್ವೀಕರಿಸಬೇಕಿದೆ.
ಐಐಎಸ್ಸಿ ಸಂಶೋಧಕರು ಕೂಡ ಫ್ಲೈಓವರ್ ವಿನ್ಯಾಸವನ್ನು ಅನುಮೋದಿಸಿದ್ದಾರೆ. ಅವರು ಕೇವಲ ಏರಿಳಿತಗಳನ್ನು (ಅಸಮ ಮೇಲ್ಮೈ) ಗಮನಿಸಿದ್ದು, ಡಾಂಬರಿನ ಮತ್ತೊಂದು ಪದರವನ್ನು ಅನ್ವಯಿಸಲು ಬಿಬಿಎಂಪಿಗೆ ಸೂಚಿಸಿದರು ಎಂದು ಅಧಿಕಾರಿ ತಿಳಿಸಿದರು.
ಇನ್ನೆರಡು ದಿನಗಳಲ್ಲಿ ನಾವು ಫ್ಲೈಓವರ್ ಮೇಲ್ಮೈ ಸಮವಾಗಿ ಮತ್ತು ಗುಂಡಿ ಮುಕ್ತವಾದ ರಸ್ತೆ ಮಾಡಲು ಮತ್ತೊಂದು ಬಾರಿ ಡಾಂಬರು ಹಾಕುತ್ತೇವೆ. ಫ್ಲೈಓವರ್ ಒಂದು ಬದಿಯಲ್ಲಿ ತೆರೆದಿರುವುದರಿಂದ ನಾವು ಅದನ್ನು ರಾತ್ರಿಯಲ್ಲಿ ಡಾಂಬರು ಮಾಡುತ್ತೇವೆ. ಸೋಮವಾರ ಐಐಎಸ್ಸಿಯಿಂದ ವರದಿ ಮತ್ತು ಅದರ ನಂತರ ಸಂಪೂರ್ಣವಾಗಿ ಫ್ಲೈಓವರ್ ಅನ್ನು ತೆರೆಯಲಾಗುವುದು ಎಂದು ಅಧಿಕಾರಿ ಹೇಳಿದರು.
ಹಲವು ಅಡ್ಡಿ ಆತಂಕಗಳ ನಡುವೆಯೇ ಬಹು ನಿರೀಕ್ಷಿತ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಆಗಸ್ಟ್ 30ರಂದು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಲೋಕೇಶ್ ಎಂ. ಆಗಸ್ಟ್ 25ರಂದು ಮಾಹಿತಿ ನೀಡಿದ್ದರು. ಆಗಸ್ಟ್ 15ರಂದು ಶಿವಾನಂದ ಸರ್ಕಲ್ ಉಕ್ಕಿನ ಮೇಲ್ಸೇತುವೆ ಉದ್ಘಾಟನೆ ಮಾಡಲು ಬಿಬಿಎಂಪಿ ಉದ್ದೇಶ ಹೊಂದಿತ್ತು. ಆದರೆ ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿಯಾಗಿತ್ತು. ಇದರಿಂದ ನಿಗದಿತ ವೇಳೆಗೆ ಕಾಮಗಾರಿ ಮುಗಿಸುವಲ್ಲಿ ಅಡ್ಡಿಯಾಗಿತ್ತು. ನಂತರ ಫ್ಲೈಓವರ್ ನ ಒಂದು ಭಾಗವನ್ನು ಸಾರ್ವಜನಿಕ ಓಡಾಟಕ್ಕೆ ತೆರೆಯಲಾಗಿತ್ತು.