ಕಿದ್ವಾಯಿ ಆವರಣದ ಇಂದಿರಾ ಕ್ಯಾಂಟೀನ್ ಊಟ ಗ್ರಾಹಕರಿಗಿಲ್ಲ

ಬೆಂಗಳೂರು, ಜನವರಿ 30: ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಊಟ, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಸಿಗುತ್ತಿಲ್ಲ ಎನ್ನುವುದು ಸಾರ್ವಜನಿಕರಿಂದ ಕೇಳಿ ಬಂದಿರುವ ದೂರಾಗಿದೆ.

ಹಸಿವು ಮುಕ್ತ ಸಂಕಲ್ಪದೊಂದಿಗೆ ಅಗ್ಗದ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್,ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಾಗೂ ಸಂಬಂಧಿಗಳಿಗೆ ಅನಗತ್ಯವಾಗಿದೆ.

ಬಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2018ರ ಜನವರಿಯಲ್ಲಿ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಸಂಬಂಧಿಕರಿಗೆ ಉಚಿತವಾಗಿ ಊಟ ಒದಗಿಸುತ್ತಿರುವುದರಿಂದ ಇಂದಿರಾ ಕ್ಯಾಂಟೀನ್ ಜನರ ಅಭಾವ ಎದುರಿಸುತ್ತಿದೆ.

Shift indira canteen out of Kidwai campus

ಮೊದಲ ದಿನದಿಂದ ಕ್ಯಾಂಟೀನ್ ಊಟಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಆದರೆ ಇದೀಗ ಧರ್ಮಶಾಲೆಯಲ್ಲಿ ಮೂರು ಹೊತ್ತು ಪ್ರತಿನಿತ್ಯ ಸಾವಿರ ಮಂದಿಗೆ ಗುಣಮಟ್ಟದ ಊಟ ಒದಗಿಸಲಾಗುತ್ತಿದೆ.

ಅಷ್ಟೇ ಅಲ್ಲ, ಮೆನುವಿನಲ್ಲಿ ಕೂಡ ವೈವಿಧ್ಯವಿರುವುದಕ್ಕೆ ರೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸತ್ಯಸಾಯಿ ಟ್ರಸ್ಟ್ ನಿತ್ಯ 1200 ಮಂದಿಗೆ ಊಟ ನೀಡುತ್ತಿರುವುದರಿಂದ ಯಾರೂ ಇಂದಿರಾ ಕ್ಯಾಂಟೀನ್ ಕಡೆಗೆ ಹೋಗುತ್ತಿಲ್ಲ. ಹಾಗಾಗಿ ನಷ್ಟ ಅನುಭವಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+