15ರಂದು ಸಾವಯವ ಆಯುರ್ವೇದ ಉತ್ಪನ್ನ ಬಿಡುಗಡೆ

ಬೆಂಗಳೂರು, ಫೆ. 14: ಆಯುರ್ವೇದ ಚಿಕಿತ್ಸೆಯಲ್ಲಿ ಒಂದು ಶತಮಾನಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 'ಶತಾಯು ಆಯುರ್ವೇದ' ಸಂಸ್ಥೆ ತಾನು ತಯಾರಿಸಿರುವ ಹಲವು ಸಾವಯವ ಆಯುರ್ವೇದ ಉತ್ಪನ್ನಗಳನ್ನು ಫೆ. 15ರಂದು ಸ್ಥಳೀಯ ಹಾಗೂ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಸಾವಯವ ಚ್ಯವನ್‌ಪ್ರಾಶ್ ಲೇಹ, ಅಶ್ವಗಂಧ ಲೇಹ, ಶತಾವರಿ ಲೇಹ, ತ್ರಿಫಲ ಗುಳಿಗೆ, ಟರ್ಮೆರಿಕ್, ತುಳಸಿ, ಅಮಲಕಿ, ನೀಮ್, ಭೂಮಿ ಅಮಲಕಿ, ಬ್ರಾಹ್ಮಿ, ಗುಡುಚಿ, ತ್ರಿಕಟು, ಮಧುನಾಶಿನಿ, ಹಿಂಗಾಸ್ಟಕ ಒಟ್ಟು 14 ಸಾವಯವ ಔಷಧಗಳ ಬಿಡುಗಡೆ ಹಾಗೂ www.shathayuwellness.com ವೆಬ್‌ಸೈಟ್‌ ಉದ್ಘಾಟನೆ ನಡೆಯಲಿದೆ.

ayu

ಮಧ್ಯಾಹ್ನ 2.30 ಗಂಟೆಗೆ ರಾಜಭವನ ರಸ್ತೆಯ ಹೋಟೆಲ್ ಪರಾಗ್‍ನಲ್ಲಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಉತ್ಪನ್ನಗಳನ್ನು ಬಿಡುಗಡೆ ಮಾಡುವರು.

ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ನಿರ್ದೇಶಕ ಡಾ. ವಿಜಯ ಕುಮಾರ್ ಗೋಗಿ ಗೌರವ ಅತಿಥಿಯಾಗಿ ಭಾಗವಹಿಸುವರು. ಖ್ಯಾತ ನಟಿ ಪೂಜಾ ಗಾಂಧಿ ಅತಿಥಿಯಾಗಿ ಪಾಲ್ಗೊಳ್ಳುವರು. ವಿ ಹೀಲ್ ಹೆಲ್ತ್ ಕೇರ್ ಸರ್ವೀಸಸ್ ಪ್ರೈ.ಲಿ. ನಿರ್ದೇಶಕ ಡಾ. ಮೃತ್ಯುಂಜಯ ಸ್ವಾಮಿ, ಡಾ. ಅನಿತಾ ಎಂ. ಡಾ. ಹೆರಮ್ ರೆಡ್ಡಿ ಹಾಜರಿರುವರು ಎಂದು 'ಶತಾಯು' ಆಯುರ್ವೇದ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+