Get Updates
Get notified of breaking news, exclusive insights, and must-see stories!

ಇಂದಿರಾನಗರದಲ್ಲಿ ಶಂಕರ್ ಮಹಾದೇವನ್ ಸಂಗೀತ ಸಂಜೆ!

ಬೆಂಗಳೂರು, ಫೆ.11: ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ರವರ ಸಂಗೀತ ಕಾರ್ಯಕ್ರಮವನ್ನು ಹಾರ್ಮನಿ ಸಂಸ್ಥೆ ಫೆಬ್ರವರಿ 14, ಭಾನುವಾರದಂದು ಇಂದಿರಾನಗರ ಕ್ಲಬ್ ನಲ್ಲಿ ಏರ್ಪಡಿಸಿದೆ.

ಹಾರ್ಮನಿ ಸಂಸ್ಥೆಯು ಕಳೆದ 14 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ಅನಾಥ ಮಕ್ಕಳ ಸೇವೆಯಲ್ಲಿ ನಿರತವಾಗಿದೆ. ಇವರು ವೈದ್ಯಕೀಯ ಹಾಗು ಶಿಕ್ಷಣ ಕ್ಷೇತ್ರಗಳಲ್ಲಿ ಹಲವಾರು ಮಕ್ಕಳಿಗೆ ನೆರವು ನೀಡಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

Shankar Mahadevan Live in Concert Indiranagar Club

ಹಾರ್ಮನಿ ಸಂಸ್ಥೆಯು ಸಲ್ಲಿಸಿರುವ ಸತತ ಸೇವೆಯಿಂದ ಇಂದು ಸಮಾಜದ ಎಲ್ಲ ವರ್ಗದಿಂದ ಸದಸ್ಯರನ್ನು ಸಂಪಾದಿಸಿದೆ. ಪ್ರಮುಖರು ಖ್ಯಾತ ಕ್ರಿಕೆಟ್ ಆಟಗಾರ ಸೈಯದ್ ಕಿರ್ಮಾನಿ, ಬಿಲಿಯರ್ಡ್ಸ್ ಆಟಗಾರ ಪಂಕಜ್ ಅದ್ವಾನಿ ಹಾಗು ಕನ್ನಡ ಚಿತ್ರ ರಂಗದ ಮೇರುನಟ ದಿವಂಗತ ವಿಷ್ಣುವರ್ಧನ್ ಅವರು ಈ ಸಂಸ್ಥೆಯ ಪೋಷಕರಾಗಿದ್ದಾರೆ.

ಕಲಾವಿದ ಶಂಕರ್ ಮಹಾದೇವನ್: ವಿದ್ವಾನ್ ಶಂಕರ್ ಮಹಾದೇವನ್ ರವರು ಖ್ಯಾತ ಹಾಡುಗಾರ ಹಾಗು ಸುಪ್ರಸಿದ್ಧ ಸಂಗೀತ ಸಂಯೋಜಕ. ಇವರು ಹಲವಾರು ಹಿಂದಿ ಚಿತ್ರಗಳಿಗೆ ಸಂಗೀತ ನೀಡಿದ್ದು, ಕನ್ನಡ, ತಮಿಳು, ತೆಲುಗು ಮತ್ತಿತರ ಭಾಷೆಗಳ ಚಿತ್ರಗಳಿಗೆ ಹಾಡಿರುವ ಪ್ರಖ್ಯಾತ ಕಲಾವಿದರು. ಇವರು 4 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ ಹಾಗು ಶಂಕರ್-ಎಹ್ಸಾನ್-ಲಾಯ್ ಎಂಬ ಹೆಸರಾಂತ ತಂಡವನ್ನು ಪ್ರಾರಂಭಿಸಿದ್ದಾರೆ. ಇವರ ಶಂಕರ್ ಮಹಾದೇವನ್ ಮ್ಯೂಸಿಕ್ ಅಕಾಡೆಮಿಯು ಪ್ರಪಂಚಾದ್ಯಂತ ಮಕ್ಕಳಿಗೆ ಇಂಟರ್ನೆಟ್ ಮೂಲಕ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿಯನ್ನು ನೀಡುತ್ತಿದೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ಕರೆ ಮಾಡಿ - 98458 24725, visit - www.talkofthetown.in

ಇಂದಿರಾನಗರದ ಕ್ಲಬ್ ಗೆ ಗೂಗಲ್ ಮ್ಯಾಪ್ ದಾರಿ:

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+