ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.14, 15ರಂದು ಹಳ್ಳಿಮನೆಯಲ್ಲಿ ಸಂಕ್ರಾಂತಿ ಹಬ್ಬದೂಟ

|
Google Oneindia Kannada News

ಬೆಂಗಳೂರು, ಜ.13 : ಸಂಕ್ರಾಂತಿ ಹಬ್ಬದೂಟಕ್ಕೆ ಮಲ್ಲೇಶ್ವರಂನಲ್ಲಿರುವ 'ಹಳ್ಳಿಮನೆ' ಸಜ್ಜಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಜನವರಿ 14 ಮತ್ತು 15ರಂದು ಹಳ್ಳಿಮನೆಯಲ್ಲಿ ಹಬ್ಬದೂಟವನ್ನು ಸವಿಯಬಹುದಾಗಿದೆ. ಸಂಕ್ರಾಂತಿ ವಿಶೇಷ ಅವರೇ ಖಾದ್ಯಗಳನ್ನು ಹಳ್ಳಿಮನೆ ಈ ಬಾರಿಯ ಮೆನುವಿನಲ್ಲಿ ಸೇರಿಸಿಕೊಂಡಿದೆ.

ಗ್ರಾಮೀಣ ಶೈಲಿಯ ಕಲಾತ್ಮಕ ವಾತಾವರಣದ ಹಳ್ಳಿಮನೆ ಈ ಬಾರಿಯ ಸಂಕ್ರಾಂತಿ ಹಬ್ಬದೂಟಕ್ಕಾಗಿ ಸಿದ್ಧವಾಗಿದೆ ಎಂದು ಹೋಟೆಲ್ ವ್ಯವಸ್ಥಾಪಕ ನಿರ್ದೇಶಕರಾದ ನೀಲಾವರ ಸಂಜೀವರಾವ್ ತಿಳಿಸಿದ್ದಾರೆ. ಜ.14 ಮತ್ತು 15 ರಂದು ಮಧ್ಯಾಹ್ನ 12 ರಿಂದ 3 ಹಾಗೂ ಸಂಜೆ 7.30ರಿಂದ 10ರವರೆಗೆ ಹಬ್ಬದೂಟ ಲಭ್ಯವಿರುತ್ತದೆ.

Sankranti

ಊಟದ ಮೆನು : ಸಂಕ್ರಾಂತಿಯ ಪಾರಂಪರಿಕ ಹಬ್ಬದೂಟದ ರುಚಿಯೊಂದಿಗೆ ಅವರೇ ಕಾಳು ಅಕ್ಕಿರೊಟ್ಟಿ, ಅವರೇಕಾಳು ಗಸಿ, ಅವರೇಕಾಳು ಮಸಾಲೆ ವಡೆ, ಅವರೇ ಕಾಳು ಉಸ್ಲಿ, ಅವರೇ ಚಿತ್ರಾನ್ನ ಹೀಗೆ ವಿವಿಧ ಭಕ್ಷ್ಯಗಳ ರುಚಿಯನ್ನು ಸವಿಯಬಹುದಾಗಿದೆ. [2015 ಸಂಕ್ರಮಣ ರಾಶಿಫಲ : ಯಾರಿಗೆ ಲಾಭ, ನಷ್ಟ]

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಎಳ್ಳು ಬೆಲ್ಲ ವಿನಿಮಯ, ಹಳ್ಳಿಯ ವಿಶಿಷ್ಟ ಸೊಬಗಿನ ಅಲಂಕಾರಗಳನ್ನು ಎರಡೂ ದಿನಗಳ ಕಾಲ ಹಳ್ಳಿಮನೆ ಪರಿಸರದಲ್ಲಿ ಕಾಣಬಹುದು. ಇಂದಿನ ಜೀವನ ಶೈಲಿಯ ಒತ್ತಡದಲ್ಲಿ ಹಬ್ಬದ ಸಂಭ್ರಮ-ಸಡಗರ ಮರೆಯಾಗುತ್ತಿದೆ. ಕುಟುಂಬ ಸಮೇತರಾಗಿ ಹಳ್ಳಿಮನೆಯ ಈ ಪಾರಂಪರಿಕ, ಸಾಂಪ್ರದಾಯಿಕ ಹಬ್ಬದೂಟಗಳಲ್ಲಿ ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. [ಅಮೆರಿಕನ್ನಡಿಗರಲ್ಲಿ ಎಳ್ಳುಬೆಲ್ಲ ಬೀರಲಿಕ್ಕೆ ಬರುತ್ತಿದ್ದಾನೆ 'ಡಿಂಕು']

ಪಾರ್ಸೆಲ್ ನೀಡಲಾಗುತ್ತದೆ : ಹಬ್ಬದೂಟದಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಹಬ್ಬದೂಟದ ಎರಡೂ ದಿನಗಳಲ್ಲಿ ಮಧ್ಯಾಹ್ನ 12 ರಿಂದ 3 ಹಾಗೂ ಸಂಜೆ 7.30ರಿಂದ 10ರವರೆಗೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ 9945761283 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
Visit for 'Halli Mane' Malleshwaram, Bengaluru for Makar Sankranti otta on January 14 and 15th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X