Republic Day 2024: ಬೆಂಗಳೂರಲ್ಲಿ ಅತೀ ಎತ್ತರದ ಧ್ವಜಸ್ತಂಭ, ಎಲ್ಲಿ?, ಎಷ್ಟು ಅಡಿ, ಸ್ಟಾರ್ ಆಕರ್ಷಣೆ ಹೇಗೆ? ಮಾಹಿತಿ
ಬೆಂಗಳೂರು, ಜನವರಿ 16: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಗಣರಾಜ್ಯೋತ್ಸವ ದಿನಾಚರಣೆಗೆ ಸಿದ್ಧತೆ ಆರಂಭವಾಗಿದೆ. ಲಾಲ್ಬಾಗ್ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಇದೀಗ ವಿಜಯನಗರದಲ್ಲಿ ಅತೀ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತಿದೆ. ಇದು ಈ ಬಾರಿ ಸ್ಟಾರ್ ಆಕರ್ಷಣೆಯಾಗಲಿದೆ.
ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ಅತೀ ಎತ್ತಿರದ ಧ್ವಜಸ್ತಂಭದ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ವಿಜಯನಗರದಲ್ಲಿ 215 ಅಡಿ ಎತ್ತರದ ಧ್ವಜಸ್ತಂಭ ತಲೆ ಎತ್ತಲಿದೆ. ಇದು ಸ್ಟಾರ್ ಆಕರ್ಷಣೆ ಆಗುವ ಸಾಧ್ಯತೆ ಇದೆ ಎಂದು TNIE ವರದಿ ಮಾಡಿದೆ.

ಧ್ವಜಸ್ತಂಭದ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ಹೇಮಂತ್ ಎಚ್.ಜಿ ಮಾತನಾಡಿ, ಮಾಜಿ ಸಚಿವ ಹಾಗೂ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಶಾಸಕರ ಅನುದಾನದಲ್ಲಿ ಯೋಜನೆಗೆ ಹಣ ಬಿಡುಗಡೆ ಆಗಿದೆ. ಚಂದ್ರಾ ಲೇಔಟ್ನಲ್ಲಿ ಸ್ಥಾಪಿಸಲಾಗಿರುವ ಧ್ವಜ ಸ್ತಂಭವು 210 ಅಡಿ ಎತ್ತರ ಇದೆ. ಮೇಲ್ಭಾಗದಲ್ಲಿ 5 ಅಡಿ ಅಶೋಕ ಲಾಂಛನ ಇದೆ ಎಂದು ತಿಳಿಸಿದರು.
2 ತಿಂಗಳಿಗೊಮ್ಮೆ ಧ್ವಜ ಬದಲಾವಣೆ
ರಾಷ್ಟ್ರೀಯ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜವನ್ನು ಹಾರಿಸುವುದು ಜೊತೆಗೆ ಪ್ರತಿ ಎರಡು ತಿಂಗಳಿಗೊಮ್ಮೆ ಧ್ವಜವನ್ನು ಬದಲಾಯಿಸಲಾಗುತ್ತದೆ. ನಿರಂತರ ಗಾಳಿ ಬೀಸುವ ಹಿನ್ನೆಲೆಯಲ್ಲಿ ಇಷ್ಟು ಎತ್ತರದಲ್ಲಿರುವ ಧ್ವಜಕ್ಕೆ ಗಾಳಿಯಿಂದ ಹಾನಿಯಾಗಬಹದು. ಹೀಗಾಗದಂತೆ ನೋಡಿಕೊಳ್ಳಲು ಕಾಲಕಾಲಕ್ಕೆ ಬದಲಾಯಿಸಲಾಗುವುದು.
ಧ್ವಜಸ್ತಂಭದಲ್ಲಿ ಧ್ವಜ ಏರಿಸಲು ಮತ್ತು ಇಳಿಸಲು, ಕೈಪಿಡಿ ಮತ್ತು ಮೋಟಾರು ಕಾರ್ಯಾಚರಣೆಗೆ ಅವಕಾಶ ಇದೆ. ಸುಗಮ ಕಾರ್ಯಾಚರಣೆಗಾಗಿ 8-ಎಂಎಂ ಸ್ಟೀಲ್ ತಂತಿ 3ಎಚ್ಪಿ ಮೋಟಾರ್ಗೆ ಸಂಪರ್ಕಿಸಲಾಗುತ್ತದೆ. ಯೋಜನೆ ಪೂರ್ಣಗೊಂಡ ನಂತರ ವಾರ್ಷಿಕ ನಿರ್ವಹಣೆಗಾಗಿ ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು ಎಂದು ಗುತ್ತಿಗೆದಾರರು ಮಾಹಿತಿ ನೀಡಿದರು.
ಧ್ವಜಸ್ತಂಭ ತೂಕ, ಕಾಮಗಾರಿ ಮಾಹಿತಿ
ಧ್ವಜಸ್ತಂಭವು ಒಟ್ಟು 19 ಟನ್ ತೂಕ ಇದೆ. ಡಿಸೆಂಬರ್ನಲ್ಲಿ ಪೈಲ್ ಫೌಂಡೇಶನ್ ಮಾಡಲಾಗಿದ್ದು, ಕ್ರೇನ್ ಬಳಸಿ ಬೃಹತ್ ಕಂಬವನ್ನು ನಿರ್ಮಿಸಲಾಗಿದೆ. ಧ್ವಜಸ್ತಂಭದ ಸುತ್ತ ಮತ್ತು ಕಾಂಕ್ರೀಟ್ ಮೆಟ್ಟಿಲುಗಳನ್ನು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಗಣರಾಜ್ಯೋತ್ಸವ ಮುನ್ನಾದಿನ ದಿನ ಇದನ್ನ ಪೂರ್ಣಗೊಳಿಸಲಾಗುವುದು.
ವಿಜಯನಗರ ವ್ಯಾಪ್ತಿಯಲ್ಲಿ ಈಧ್ವಜಸ್ತಂಭಕ್ಕೂ ಮೊದಲು ರಾಜಭವನದ ಬಳಿಯ ರಾಷ್ಟ್ರೀಯ ಸೇನಾ ವಸ್ತು ಸಂಗ್ರಹಾಲಯದಲ್ಲಿ 213 ಅಡಿ ಎತ್ತರದ ಧ್ವಜಸ್ತಂಭ ಸ್ಥಾಪಿಸಲಾಗಿತ್ತು. ಅದಲ್ಲದೇ ಧ್ವಜದ ನಿರ್ವಹಣೆ ಮತ್ತು ಹೈಡ್ರಾಲಿಕ್ ಯಂತ್ರವನ್ನು ನಿರ್ವಹಿಸುವ ತಂಡದ ಕೊರತೆಯ ಸಂಬಂಧ ರಾಜ್ಯ ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು.
ಶಾಸಕ ಕೃಷ್ಣಪ್ಪ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕೃಷ್ಣಪ್ಪ ಅವರು, ಒಟ್ಟು 1 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಧ್ವಜಸ್ತಂಭದ ಮೇಲಿರುವ ನಾಲ್ಕು ತಲೆಯ ಸಿಂಹವು ವಿಜಯನಗರದ ನಿವಾಸಿಗಳಿಗೆ ಮಾತ್ರವಲ್ಲದೇ, ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೂ ಕಾಣಸಿಕೊಳ್ಳುತ್ತದೆ. ನವೆಂಬರ್ ಅಂತ್ಯದಲ್ಲಿ ಈ ಕಾಮಗಾರಿ ಆರಂಭವಾಗಿತ್ತು ಎಂದು ಅವರು ಮಾಹಿತಿ ನೀಡಿದರು.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications