ಸ್ಪೇನ್ ಕ್ರೀಡಾಕೂಟದಲ್ಲಿ ಬೆಂಗಳೂರಿನ ರೀನಾ ರಾಜು
ಬೆಂಗಳೂರು, ಜೂನ್ 26 : ಕರ್ನಾಟಕದ ಮೊಟ್ಟಮೊದಲ ಹೃದಯ ಕಸಿ ಮಾಡಿಸಿಕೊಂಡ ಯುವತಿ, ಬೆಂಗಳೂರಿನ ರೀನಾ ರಾಜು ಅವರು ಸ್ಪೇನ್ ನಲ್ಲಿ ನಡೆಯಲಿರುವ 'ವರ್ಲ್ಡ್ ಟ್ರಾನ್ಸ್ಪ್ಲಾಂಟ್ ಗೇಮ್'ನಲ್ಲಿ ಭಾರತವನ್ನು ಬ್ಯಾಡ್ಮಿಂಟನ್ (ಮಿಕ್ಸ್ಡ್ ಡಬಲ್ಸ್) ಮತ್ತು 100 ಮೀ ಓಟದಲ್ಲಿ ಪ್ರತಿನಿಧಿಸಲಿದ್ದಾರೆ.
ವರ್ಲ್ಡ್ ಟ್ರಾನ್ಸ್ ಪ್ಲಾಂಟ್ ಗೇಮ್ಸ್ ಫೆಡರೇಶನ್ ಆಯೋಜಿಸಿರುವ, ಎರಡು ವರ್ಷಕ್ಕೊಮ್ಮೆ ಜರುಗುವ ಎಂಟು ದಿನಗಳ ಈ ಕ್ರೀಡಾಕೂಟದಲ್ಲಿ ರೀನಾ ರಾಜು ಅವರೊಂದಿಗೆ, ಉತ್ತರಪ್ರದೇಶದ ಬಲ್ವೀರ್ ಸಿಂಗ್ ಮತ್ತು ಲಕ್ನೋನ ಧರ್ಮೇಂದ್ರ ಸೋಟಿ ಅವರು ಕೂಡ ಭಾಗವಹಿಸುತ್ತಿದ್ದಾರೆ.

ನವೆಂಬರ್ 19, 2009ರಲ್ಲಿ ಚೆನ್ನೈನಲ್ಲಿ ಡಾ. ಚೆರಿಯನ್ ಅವರಿಂದ ಹೃದಯ ಕಸಿ ಮಾಡಿಸಿಕೊಂಡು ಮರುಹುಟ್ಟು ಪಡೆದಿರುವ ರೀನಾ ರಾಜು ಅವರು ಈ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂದು ಹಲವು ವರ್ಷಗಳಿಂದ ಕನಸು ಕಂಡಿದ್ದರು.
ಹೃದಯ ಬೇನೆಗೆ ತುತ್ತಾಗುವ ಮುನ್ನ ಉತ್ತಮ ಕ್ರೀಡಾಪಟುವಾಗಿದ್ದ ರೀನಾ ರಾಜು ಅವರು, ಹಾಕಿ ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು. ನೂರು ಮೀಟರ್ ಓಟದಲ್ಲಿ ವೃತ್ತಿ ನಿಪುಣರಿಂದ ರೀನಾ ಅವರು ತರಬೇತಿಯನ್ನು ಪಡೆದಿದ್ದಾರೆ.
ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಬೇಕಾದರೆ, ದೈಹಿಕ ಸದೃಢತೆಯನ್ನು ಸಾಬೀತುಪಡಿಸಲು ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಅವರು ಒಡ್ಡಿಕೊಳ್ಳಬೇಕಾಯಿತು. ಈ ಎಲ್ಲ ಪರೀಕ್ಷೆಗಳನ್ನು ನಡೆಸಿರುವ ಡಾ. ಚೆರಿಯನ್ ಅವರೇ, ರೀನಾ ಎಲ್ಲ ಪರೀಕ್ಷೆಗಳನ್ನು ಪಾಸು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಯುನೈಟೆಡ್ ಕಿಂಗಡಂ ಮತ್ತು ಅಮೆರಿಕದಿಂದ ನೂರಾರು ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದರೆ, ಭಾರತದಿಂದ ಕೇವಲ ಮೂವರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಈ ಕ್ರೀಡಾಕೂಟದ ಬಗ್ಗೆ ಮಾತ್ರವಲ್ಲ, ಶಸ್ತ್ರಚಿಕಿತ್ಸೆಯ ನಂತರ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವು ಸಾಕಷ್ಟು ಹಿಂದಿದ್ದೇವೆ ಎಂದು ರೀನಾ ವಿಷಾದ ವ್ಯಕ್ತಪಡಿಸುತ್ತಾರೆ.
ರೀನಾ ರಾಜು ಅವರು 'ಲೈಟ್ ಎ ಲೈಫ್ - ರೀನಾ ರಾಜು ಫೌಂಡೇಷನ್' ಹುಟ್ಟುಹಾಕಿದ್ದು, ಅದರ ಮುಖಾಂತರ ನೂರಾರು ಬಡವರಿಗೆ ಅಂಗ ಕಸಿ ಮಾಡಿಸುವಲ್ಲಿ, ಶಸ್ತ್ರಚಿಕಿತ್ಸೆಯ ನಂತರ ಉಚಿತವಾಗಿ ಔಷಧಿ ದೊರಕಿಸಿಕೊಡುವಲ್ಲಿ ಸಹಾಯ ಮಾಡುತ್ತಿದ್ದಾರೆ.
-
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
Popular Indian Foods: ಈ 5 ಆಹಾರಗಳು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಗಳು! -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ












Click it and Unblock the Notifications