ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ
ಬೆಂಗಳೂರು, ನವೆಂಬರ್. 23: 'ಬೆಂಗಳೂರು ಮೆಟ್ರೋ ಇನ್ನು ಮುಂದೆ ಕರಾಟೆ ಕಿಂಗ್ ಶಂಕರ್ ನಾಗ್ ಮೆಟ್ರೊ',ಹೌದು ಇದು ಒನ್ಇಂಡಿಯಾ ಓದುಗರ ತೀರ್ಮಾನ. ನಮ್ಮ ಮೆಟ್ರೋ ಹೆಸರು ಬದಲಾವಣೆ ವಿಷಯ ಪ್ರಸ್ತಾಪವಾದ ನಂತರ ಒನ್ಇಂಡಿಯಾ ಜನರ ಮುಂದೆ ಆಯ್ಕೆಗಳನ್ನು ಇಟ್ಟಿತ್ತು. ಅದರಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಅವರೇ ಅತಿ ಹೆಚ್ಚು ಮತ ಪಡೆದುಕೊಂಡಿದ್ದಾರೆ.
ಹೆಸರಿಡುವ ಬಗ್ಗೆ ಒಂದೇ ಸಾಲಿನ ಉತ್ತರ ತಿಳಿಸಿದವರು ಬಹಳ ಮಂದಿ. ಅದರ ಜತೆಗೆ ಡಾ. ರಾಜ್ ಕುಮಾರ್ ಹೆಸರು ಇಡಿ ಎಂದು ಸಲಹೆ ನೀಡಿದವರು ಇದ್ದಾರೆ. ಟಿಪ್ಪು ಹೆಸರು ಮಾತ್ರ ಬೇಡವೇ ಬೇಡ ಎಂದವರು ಇದ್ದಾರೆ.[ಮಾಗಡಿ ರಸ್ತೆ-ಮೈಸೂರು ರಸ್ತೆ ನಮ್ಮ ಮೆಟ್ರೋ ದರ ಪಟ್ಟಿ]
ಸಾಮಾಜಿಕ ತಾಣ ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕವೂ ಜನ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ಒಡೆಯರ್, ವಿಷ್ಣುವರ್ಧನ್ ಹೆಸರನ್ನು ಸಹ ಅಭಿಮಾನಿಗಳು ಸೂಚನೆ ಮಾಡಿದ್ದಾರೆ. ಒನ್ ಇಂಡಿಯಾ ಪೋಲ್ ಗೆ ಸ್ಪಂದಿಸಿರುವ ನಾಗರಿಕರು ಶಂಕರ್ ನಾಗ್ ಅವರಿಗೆ ಶೇ. 37 ಮತಗಳನ್ನು ನೀಡಿದ್ದಾರೆ. ನಮ್ಮ ಮೆಟ್ರೋನೆ ಇರಲಿ ಎಂದು ಶೇ.31 ಜನ ಅಭಿಪ್ರಾಯ ಪಟ್ಟಿದ್ದಾರೆ.

ಒನ್ ಇಂಡಿಯಾ ಪೋಲ್ ಫಲಿತಾಂಶ
ನಮ್ಮ ಮೆಟ್ರೋನೇ ಇರಲಿ, ಶೇ. 31
ನಾಡಪ್ರಭು ಕೆಂಪೇಗೌಡ ಶೇ. 11
ಸರ್ ಎಂ ವಿಶ್ವೇಶ್ವರಯ್ಯಶೇ. 21
ಶಂಕರ್ ನಾಗ್ ಶೇ. 37

ವ್ಯಕ್ತಿಗಳ ಹೆಸರು ಯಾಕೆ ಬೇಕು ಹೇಳಿ?
ವ್ಯಕ್ತಿಗಳ ಹೆಸರು ಯಾಕೆ ಬೇಕು ಹೇಳಿ? ಒಂದು ವಿಶ್ವವಿದ್ಯಾಲಯಕ್ಕೆ ಹೆಸರಿಡಬೇಕೆಂದು ದಶಕಗಳ ಕಾಲ ಹೋರಾಟ ನಡೆಯಿತು.. ಜಾತಿ ಪ್ರಾತಿನಿಧ್ಯವಾಗಿ.. ಅಲ್ಪಸಂಖ್ಯಾತ .. ಹಿಂದುಳಿದ... ಬಹು ಸಂಖ್ಯಾತ ಹೀಗೆ ತಲೆ ಒಂದರಂತೆ ಹೆಸರು ಇಡಲು ಹೋರಾಟ... ಗಲಭೆ.. ಸಮಾಜದ ಶಾಂತಿ ಕದಡಿ ಹೋಗಿಬಿಡುತ್ತದೆ... ಹೆಸರು ಯಾವುದದರೇನು? ಸೇವೆ ಮುಖ್ಯ..-Artist Mahendra

ಗೊಂದಲಕ್ಕೆ ಅವಕಾಶ ಇಲ್ಲದಂತೆ ಆಗಲಿ
ಭವಿಷ್ಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಇರಲು, ಗಿರೀಶ್ ಕಾರ್ನಾಡ್ ರಂಥವರ ಬಾಯಿಗೆ ಬೀಳದಿರಲು ನಮ್ಮ ಮೆಟ್ರೋ ಹೆಸರೇ ಉತ್ತಮ. ಯಾವುದಾದದರೂ ಒಂದು ಪ್ರಮುಖ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಟ್ಟು ಗೌರವ ಸೂಚನೆ ಮಾಡಬಹುದು.-Sangamesh Sangu

ಕನ್ನಡಸ ಸಂಸ್ಕೃತಿ ಕಾಪಾಡಲಿ
ಮೂರು ಮಾರ್ಗಗಳಿಗೆ 3 ಹೆಸರಿರಬೇಕು. ಎಲ್ಲ ನಿಲ್ದಾಣಗಳಿಗೆ ಜ್ಞಾನಪೀಠ ಪುರಸ್ಕೃತರ ಹೆಸರಿಡಬೇಕು. ಉಳಿದವಕ್ಕೆ ಕನ್ನಡದ ರಾಜಜರ ಹೆಸರಿರಬೇಕು. ಇದು ಕನ್ನಡದ ಸಂಸ್ಕೃತಿ ಮತ್ತು ಸಂಪ್ರದಾಯ ಕಾಪಾಡಲು ನೆರವಾಗುತ್ತದೆ.-Lakki Lakshman
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ











Click it and Unblock the Notifications