ರವಿ ಬೆಳಗೆರೆ ಆರೋಗ್ಯದಲ್ಲಿ ಮತ್ತೆ ಏರುಪೇರು, ಕೆಐಡಿಗೆ ದಾಖಲು
ಬೆಂಗಳೂರು, ಡಿಸೆಂಬರ್ 13: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದೆ.
ಜ್ಯೋತಿಷಿ ಕಮಲಾಕರ್ ಭಟ್ ರಿಂದ ರವಿ ಬೆಳಗೆರೆ ಜಾತಕ ವಿಶ್ಲೇಷಣೆ
ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ರವಿ ಬೆಳಗೆರೆ ಅವರು ತೀವ್ರ ರಕ್ತದ ಒತ್ತಡ ಉಂಟಾಗಿದೆ. ಇದರಿಂದ ಬುಧವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಯ ಆವರಣದಲ್ಲಿರುವ ಕರ್ನಾಟಕ ಮಧುಮೇಹ ಸಂಸ್ಥೆ (ಕೆಐಡಿ)ಗೆ ದಾಖಲಿಸಲಾಗಿದೆ. ರವಿ ಬೆಳಗೆರೆ ಜೊತೆ ಪುತ್ರಿ ಚೇತನಾ ಮತ್ತು ಪುತ್ರ ಕರ್ಣ ಇದ್ದಾರೆ.
ಮಂಗಳವಾರ ಸಂಜೆ ಕೂಡ ಇದೇ ಕಾರಣಕ್ಕೆ ರವಿ ಬೆಳಗೆರೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮತ್ತೊಂದೆಡೆ ಮಧ್ಯಂತರ ಜಾಮೀನು ಕೋರಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ravi belagere health hospital sunil heggaravalli bengaluru ರವಿ ಬೆಳಗೆರೆ ಆರೋಗ್ಯ ಆಸ್ಪತ್ರೆ ಸುನೀಲ್ ಹೆಗ್ಗರವಳ್ಳಿ ಬೆಂಗಳೂರು
English summary
Ravi Belagere, the editor of regional tabloid ‘Hai Bangalore' admitted to Karnataka Institute of Diabetology (KID) at Sri Jayadeva Institute Of Cardiology Campus, Bannerghata Road, Jayanagar 9th Block, Bangaluru. on December 13.Ravi Belegere is in judicial custody for 14 days for allegedly giving Supari to kill fellow journalist Sunil Heggaravalli.