ಅನಂತಮೂರ್ತಿಯವರ ನೆನಪಿನಲ್ಲಿ - ರಂಗ ಯುಗಾದಿ
ಬೆಂಗಳೂರು, ಮಾ.20: ರಂಗ ಶಂಕರದಲ್ಲಿ ಅನಂತಮೂರ್ತಿಯವರ ನೆನಪಿನಲ್ಲಿ - ರಂಗ ಯುಗಾದಿ ಆಚರಿಸಲಾಗುತ್ತಿದೆ. ನಾಟಕ, ಕತೆ, ಕಾವ್ಯ, ವಾಚನ, ಸಂವಾದ, ಗೆಳೆಯರು, ಹರಟೆ, ಹಬ್ಬದ ಊಟ, ಸಾಹಿತ್ಯ, ಇತ್ಯಾದಿಗಳ ಸಂಭ್ರಮವನ್ನು ಕಂಡು ಆನಂದಿಸಬಹುದು.
ಯುಗಾದಿಯನ್ನು ವಿಭಿನ್ನ ರೀತಿಯಲ್ಲಿ, ರಂಗ ಸಂವೇದನೆಯೊಂದಿಗೆ ಆಚರಿಸುವುದು ರಂಗ ಶಂಕರ ಪಾಲಿಸಿಕೊಂಡು ಬಂದಿರುವ ಒಂದು ಸಂಪ್ರದಾಯ. ನಾಟಕಗಳಲ್ಲದೇ ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕಾರಗಳನ್ನೂ ಒಳಗೊಂಡ ಒಂದು ಸಂಭ್ರಮವೇ ಈ ರಂಗ ಯುಗಾದಿ.
ಬೆಂಗಳೂರಿನ ಜನತೆಯನ್ನು ಒಂದು ಹಬ್ಬದ ವಾತಾವರಣವನ್ನು ನಿರ್ಮಿಸಿ ಅದರ ಮೂಲಕ ರಂಗ ಸಂವೇದನೆಯನ್ನು ಹಂಚಿಕೊಳ್ಳುವುದು ರಂಗ ಯುಗಾದಿಯ ಹಿಂದಿನ ಉದ್ದೇಶ. [ಯುವ ಸಮಸ್ಯೆಗಳ ಕುರಿತ ಮರ್ಯಾದೆ ಪ್ರಶ್ನೆ ನಾಟಕ]
ಈ ಹಿಂದೆ ಚಂದ್ರಶೇಖರ ಕಂಬಾರರ, ಪಿ ಲಂಕೇಶರ, ಪೂರ್ಣಚಂದ್ರ ತೇಜಸ್ವಿಯರ ಹೆಸರಿನಲ್ಲಿ ರಂಗ ಯುಗಾದಿಯನ್ನು ಆಚರಿಸಿದ್ದಲ್ಲದೇ, ಜಾನಪದ ನಾಟಕ ಪ್ರಕಾರಗಳು, ಕಾಮೆಡಿ ನಾಟಕಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ನೆನಪಿನಲ್ಲಿ ಕೂಡಾ ರಂಗ ಯುಗಾದಿಯನ್ನು ಆಚರಿಸಿದ್ದೇವೆ.
ಈ ಸಂಪ್ರದಾಯದ ಮುಂದಿನ ಹೆಜ್ಜೆಯಾಗಿ ಈ ವರ್ಷ ಕನ್ನಡದ ಹಿರಿಯ ಚಿಂತಕರಾಗಿದ್ದ, ಮಾರ್ಗದರ್ಶಿಗಳಾಗಿದ್ದ ಅನಂತಮೂರ್ತಿಯವರ ನೆನಪಿನಲ್ಲಿ ರಂಗ ಯುಗಾದಿಯನ್ನು ಆಚರಿಸಲಾಗುವುದು ಎಂದು ರಂಗಶಂಕರ ಪ್ರಕಟಿಸಿದೆ.

ಅಂದಿನ ಕಾರ್ಯಕ್ರಮ ವಿವರಗಳು ಹೀಗಿವೆ.
* ಬೆಳಿಗ್ಗೆ 10.00 : ಅನಂತ ಸಂವಾದ ಜಯಂತ್ ಕಾಯ್ಕಿಣಿಯವರು ಅನಂತಮೂರ್ತಿ ಅವರೊಂದಿಗೆ ನಡೆಸಿದ ಸಂವಾದದ ಚಿತ್ರ.
* ಬೆಳಿಗ್ಗೆ 11.00: ನಾಟಕ ಮೌನಿ ಪ್ರಯೋಗ ರಂಗ, ನಿರ್ದೇಶನ: ಕೆ ವಿ ನಾಗರಾಜಮೂರ್ತಿ
* ಮದ್ಯಾಹ್ನ 12.30 : ಅನಂತ ಕಾವ್ಯವಾಚನ: ಟಿ ಎನ್ ಸೀತಾರಾಮ್, ಎಸ್ ದಿವಾಕರ್, ವಿವೇಕ್ ಶಾನಬಾಗ್, ಜೋಗಿ, ಜಿ ಎನ್ ಮೋಹನ್, ಪ್ರತಿಭಾ
ನಂದಕುಮಾರ್, ಮಮತಾ ಸಾಗರ್, ಜಯಲಕ್ಷ್ಮಿ ಪಾಟೀಲ್, ಸಂಧ್ಯಾರಾಣಿ, ರಾಜೇಂದ್ರ ಪ್ರಸಾದ್, ಸ್ಫೂರ್ತಿ ಹರವು.
* ಮಧ್ಯಾಹ್ನ 3.30 : ನಾಟಕ ಸೂರ್ಯನ ಕುದುರೆ ವೇಷ ರಂಗ ತಂಡ, ನಿರ್ದೇಶನ: ಪ್ರಶಾಂತ್ ಸಿದ್ಧಿ
* ಸಂಜೆ 5.00 : ಅನಂತ ಕಥಾವಾಚನ ಕತೆ: ಸಂಯೋಗ ಕಿರಣ್ವಟಿ ಗೆಳೆಯರು
* ಸಂಜೆ 6.00 : ಅನಂತ ಜೀವನ ಜಯಂತ್ ಕಾಯ್ಕಿಣಿ - ಸುರಗಿಯಿಂದ ಆಯ್ದ ಭಾಗದ ಓದು.
* ಸಂಜೆ 7.30 ನಾಟಕ ಅವಸ್ಥೆ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ, ನಿರ್ದೇಶನ: ಪ್ರಕಾಶ್ ಬೆಳವಾಡಿ.
ಕಾರ್ಯಕ್ರಮದ ನಿರೂಪಣೆ : ಸಂಯುಕ್ತ ಪುಲಿಗಲ್.
ಟಿಕೆಟ್ ಗಳು www.bookmyshow.com ಹಾಗೂ ರಂಗ ಶಂಕರ ದಲ್ಲಿ ದೊರೆಯುತ್ತವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ರಂಗ ಶಂಕರ: 99722 55400
ಒನ್ ಇಂಡಿಯಾ ಸುದ್ದಿ
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications