ಡಿ 12ರಿಂದ ರಂಗ ಶಂಕರ ಯುವ ನಾಟಕೋತ್ಸವ
ಬೆಂಗಳೂರು, ಡಿಸೆಂಬರ್ 07: ರಂಗಭೂಮಿ ಜೀವಂತವಾಗಿರಬೇಕೆಂದಲ್ಲಿ ಅದು ಅಂದಂದಿಗೆ ಪ್ರಸ್ತುತವಾಗಿರಲೇ ಬೇಕಾದದ್ದು ಅನಿವಾರ್ಯ. ಈ ನಿಟ್ಟಿನಲ್ಲಿ ರಂಗಶಂಕರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಡಿಸೆಂಬರ್ 12ರಿಂದ ನಡೆಯಲಿರುವ ಯುವ ನಾಟಕೋತ್ಸವವೂ ಸೇರಿದೆ.
ರಂಗಭೂಮಿ ಪ್ರಸ್ತುತವಾಗಿರಲೇ ಬೇಕಾದಲ್ಲಿ ಅಂದಂದಿನ ಪೀಳಿಗೆಯ ರಂಗಕರ್ಮಿಗಳನ್ನು, ನಾಟಕಕಾರರನ್ನು, ಪ್ರೇಕ್ಷಕರನ್ನು ಒಳಗೂಡಿಸಿಕೊಂಡು ಬೆಳೆಯ ಬೇಕಾಗುತ್ತದೆ. ರಂಗಭೂಮಿಯನ್ನು ಇಂದಿನ ತಲೆಮಾರಿಗೆ ತಲುಪಿಸುವುದು ರಂಗ ಶಂಕರದ ಬಹು ದೊಡ್ಡ ಕನಸು. ಈ ದಿಸೆಯಲ್ಲಿ ರಂಗ ಶಂಕರ ಹಲವು ಹತ್ತು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ.
ಟೈಟಾನ್ ಕಂಪನಿಯ ಸಹಕಾರದೊಂದಿದೆ ರಂಗ ಶಂಕರ ನಡೆಸುತ್ತಿರುವ ಮೇಕಿಂಗ್ ಥಿಯೇಟರ್ ಆ ಕನಸುಗಳಲ್ಲಿ ಒಂದು. ಈ ಯೋಜನೆಗೆ ಹಲವು ಹಂತಗಳಿವೆ.
ವಸತಿ-ಸಹಿತ ನಿರ್ದೇಶನ ತರಬೇತಿ ಶಿಬಿರ: ಜಿಲ್ಲೆಗೊಬ್ಬರಂತೆ 30 ವರ್ಷ ಮೀರದ ಯುವ ನಿರ್ದೇಶಕರನ್ನು ಆರಿಸುವುದು. ನಾಲ್ಕು ವಾರಗಳ ತರಬೇತಿ ಶಿಬಿರವನ್ನು ಬೆಂಗಳೂರಿನಲ್ಲಿ ನಡೆಸುವುದು. ಭಾರತ ರಂಗಭೂಮಿಯ ದಿಗ್ಗಜರು ಈ ಶಿಬಿರವನ್ನು ನಡೆಸಿಕೊಡುವುದು.
ನಾಟಕ ಪ್ರದರ್ಶನಗಳು : ಒಂದು ನಿಗದಿತ ತಿಂಗಳಿನಲ್ಲಿ ಕರ್ನಾಟಕದಾದ್ಯಂತ ನಾಟಕಗಳು ಪ್ರದರ್ಶನಗೊಳ್ಳುತ್ತವೆ.ರಂಗ ಶಂಕರದ ಒಂದು ತಜ್ಞರ ಸಮಿತಿ ಈ ಎಲ್ಲಾ ನಾಟಕಗಳನ್ನು ವೀಕ್ಷಿಸುತ್ತದೆ. ಸಮಿತಿ ಆರು ನಾಟಕಗಳನ್ನು ಆಯ್ಕೆ ಮಾಡುತ್ತದೆ.
ನಾಟಕಗಳ ಈ ಪ್ರಸ್ತುತಿಗೆ ತಲಾ ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.

ಡಿಸೆಂಬರ್ 12ರಂದು ಮದುವೆ ಹೆಣ್ಣು
ಮದುವೆ ಹೆಣ್ಣು
ಕನ್ನಡ, 120 ನಿಮಿಷಗಳು
ರಚನೆ: ಎಚ್ ಎಸ್ ಶಿವಪ್ರಕಾಶ್
ನಿರ್ದೇಶನ : ರೋಹಿತ್ ಬೈಕಾಡಿ
ಭೂಮಿಕಾ, ಹಾರಾಡಿ
ಆಟದೊಳಗಿನ ಆಟ ಮತ್ತು ಓಟದೊಂದಿಗಿನ ಸಂಘರ್ಷ - ಇದು ಈ ನಾಟಕದ ಸ್ವರೂಪ. ಈಗಾಗಲೇ ನಡೆದು ಹೋಗಿರುವ ಗಂಡಿನ ಬದುಕಿನ ದುರಂತದ ಆಟವನ್ನು ಈ ನಾಟಕ ರೂಪಿಸುತ್ತದೆ.
***
ನಾಟಕಗಳ ಆಯ್ಕೆ : ತರಬೇತಿ ಪಡೆದ ಪ್ರತಿಯೊಬ್ಬ ನಿರ್ದೇಶನೂ ಒಂದೊಂದು ನಾಟಕವನ್ನು ಆಯ್ದು ಕೊಳ್ಳಬೇಕು. ಆಯ್ದ ನಾಟಕದ ಬಗ್ಗೆ ತಮ್ಮ ತಯಾರಿಯನ್ನು ಪ್ರಸ್ತುತಿ ಪಡಿಸಬೇಕು. ಆಯ್ದ ನಾಟಕವನ್ನು ತಮ್ಮ ತಮ್ಮ ಊರುಗಳಲ್ಲಿ ಈ ನಿರ್ದೇಶಕರು ಸೂಕ್ತವಾದ ಅಭ್ಯಾಸದ ನಂತರ ಪ್ರಸ್ತುತ ಪಡಿಸಬೇಕು.

ಡಿಸೆಂಬರ್ 13ರಂದು ಇನ್ನೊಂದು ಸಭಾಪರ್ವ
ಡಿಸೆಂಬರ್ 13
ಇನ್ನೊಂದು ಸಭಾಪರ್ವ
ಕನ್ನಡ, 80 ನಿಮಿಷಗಳು
ರಚನೆ: ಲಲಿತಾ ಸಿದ್ದಬಸವಯ್ಯ
ನಿರ್ದೇಶನ : ಶ್ರೀನಿವಾಸಮೂರ್ತಿ
ಸ್ವರ ಭಾರತಿ ಕಲಾಕೇಂದ್ರ, ತುಮಕೂರು
ಮಹಾಭಾರತದ ಪಾತ್ರಗಳನ್ನು ಪುನರ್ ವ್ಯಾಖ್ಯಾನಿಸಿದ ಒಂದು ವಿಶಿಷ್ಟ ನಾಟಕ. ದ್ರೌಪದಿ, ಸುಭದ್ರಾ, ಹಿಡಿಂಬೆ ಇತ್ಯಾದಿ ಪಾತ್ರಗಳನ್ನು ಹೊಸ ಹಿನ್ನೆಲೆಯಲ್ಲಿ ನಿರೂಪಿಸಲಾಗಿದೆ.

ಡಿಸೆಂಬರ್ 14 -ವಿಠ್ಠಲ
ಡಿಸೆಂಬರ್ 14
ವಿಠ್ಠಲ
ಕನ್ನಡ, 95 ನಿಮಿಷಗಳು
ರಚನೆ: ವಿಜಯ ತೆಂಡೂಲ್ಕರ್ / ಕಾರ್ತಿಕ್ ವಿ ಗೌತಮ್
ನಿರ್ದೇಶನ : ಕಾರ್ತಿಕ್ ವಿ ಗೌತಮ್
ರಂಗಶಿಕ್ಷಣ ಕೇಂದ್ರ, ನೆಲಮಂಗಲ
ಮನುಷ್ಯನ ಸ್ವಾರ್ಥ, ಸಾರ್ವಭೌಮತೆಯ ಭ್ರಮೆಯನ್ನು ವಿಡಂಬನೆಯಿಂದ ಅನಾವರಣಗೊಳಿಸುತ್ತಾ, ಮಾನವೀಯ ಸಂಬಂಧಗಳ ನಡುವೆ ಒಂದು ಅಮಾನುಷ ಶಕ್ತಿಯನ್ನು ಪರಿಚಯಿಸುವ ಮೂಲಕ ಮನುಷ್ಯನ ಮಿತಿಯನ್ನೇ ಪ್ರಶ್ನಿಸುವ ನಾಟಕ.

ಡಿಸೆಂಬರ್ 15 ಕಕೇಶಿಯನ್ ಚಾಕ್ ಸರ್ಕಲ್
ಡಿಸೆಂಬರ್ 15
ಕಕೇಶಿಯನ್ ಚಾಕ್ ಸರ್ಕಲ್
ಕನ್ನಡ, 110 ನಿಮಿಷಗಳು
ರಚನೆ: ಬರ್ಟೋಲ್ಟ್ ಬ್ರೆಖ್ಟ್ / ಜಿ ಎನ್ ರಂಗನಾಥರಾವ್
ನಿರ್ದೇಶನ : ಚಂದ್ರ ಕೀರ್ತಿ ಬಿ
ಥಿಯೇಟರ್ ಆರ್ಟಿಸ್ಟ್ರೀ, ಬೆಂಗಳೂರು
ಬ್ರೆಖ್ಟನ ಎಪಿಕ್ ಥಿಯೇಟರ್ ಶೈಲಿಯ ಸ್ಪಷ್ಟ ಉದಾಹರಣೆ ಈ ನಾಟಕ. ನಾಟಕ ಒಂದು ಸಾಮಾನ್ಯ ಹಳ್ಳಿಯ ಹುಡುಗಿ ಒಂದು ಮಗುವನ್ನು ಅದರ ತಾಯಿಯಿಂದ ರಕ್ಷಿಸುವ ಒಂದು ನೀತಿಕತೆಯಂತೆ ತೋರಿದರೂ, ಮತ್ತೊಂದು ಕತೆ ಇದರಲ್ಲಿ ಮಿಳಿತವಾಗುತ್ತಾ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

ಡಿಸೆಂಬರ್ 16 ವಿ ಟೀಚ್ ಲೈಫ್ ಸರ್
ವಿ ಟೀಚ್ ಲೈಫ್ ಸರ್
(ಯುದ್ಧದ ಒಡೆದ ಚಿತ್ರಗಳು)
ಕನ್ನಡ, 80ನಿಮಿಷಗಳು
ಪ್ರಶಾಂತ್ ಉದ್ಯಾವರ
ಸಂಗಮ ಕಲಾವಿದೆರ್, ಮಣಿಪಾಲ
ಯುದ್ಧದ ಕುರಿತಾದ ಒಂದು ಪ್ರಯೋಗಾತ್ಮಕ ಕೃತಿ. ಪ್ಯಾಲೆಸ್ತೀನ್ ಯುದ್ಧದ ಕತೆ ಮತ್ತು ಕಾವ್ಯವನ್ನು ಆಧರಿಸಿದ ಈ ನಾಟಕ ಕೇವಲ ವಾಚ್ಯವಾಗದೇ ದೃಶ್ಯ ಹಾಗೂ ಆಂಗಿಕವಾಗಿಯೂ ರೂಪುಗೊಳ್ಳುತ್ತದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications