ಬೆಂಗಳೂರು ಮಳೆ: ಇಂಟರ್ನೆಟ್ನಲ್ಲಿ ಪೋಟೋ, ವಿಡಿಯೋ ವೈರಲ್, ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಮಸ್ಯೆಗಳು ಒಂದಾದ ಮೇಲೆ ಒಂದರಂತೆ ಭುಗಿಲೇಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಗರದ ಮಳೆಯ ದುಸ್ಥಿತಿಯನ್ನು ತೋರಿಸುವ ಪೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ನಗರದ ಮಳೆಯ ಅವಾಂತರಗಳನ್ನು ತೋರಿಸಿವೆ. ಅಲ್ಲದೆ ಸರ್ಕಾರ ಹಾಗೂ ಬಿಬಿಎಂಪಿಗೂ ಪ್ರಶ್ನೆಗಳನ್ನು ಹಾಕಿವೆ.
ಕೆಲವರು ಬೆಂಗಳೂರು ಈಗ ವೆನಿಸ್ ಆಗಿವೆ ಎಂದು ವ್ಯಂಗ್ಯವಾಡಿದ್ದಾರೆ. ಮುಂದುವರಿದು ಬೆಂಗಳೂರು ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನುತರಾಟೆಗೆ ತೆಗೆದುಕೊಂಡಿದ್ದಾರೆ. ಯಾರಿಗೆ ಬೇಕು ವಂಡರ್ ಲಾ, ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ಇಡೀ ಬೆಂಗಳೂರು ಈಗ ವಾಟರ್ ಪಾರ್ಕ್ ಆಗಬಹುದು! ಹೀಗಾಗಿ ಬಿಬಿಎಂಪಿಗೆ ಧನ್ಯವಾದಗಳು. ನಗರವನ್ನು ತೇಲುವ ನಗರವನ್ನಾಗಿ ಮಾಡಲು ಸಾಕಷ್ಟು ಪ್ರಯತ್ನಗಳು ಮತ್ತು ಸಮರ್ಪಣೆ ಬೇಕು ಎಂದು ಅನಾಮಧೇಯರೊಬ್ಬರು @Died_Democracy" ಎಂಬ ಹೆಸರಿನಿಂದ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಮಳೆಯ ಅಬ್ಬರಕ್ಕೆ ರಾಮನಗರದಲ್ಲಿ ಶುರುವಾಗಿದೆ ಪ್ರವಾಹ ಭೀತಿ
ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರಾದ ಅನಿರ್ಬನ್ ಸನ್ಯಾಲ್ ಅವರು ನೀರಿನಿಂದ ತುಂಬಿರುವ ನಗರದ ಪಕ್ಷಿ ನೋಟದ ಚಿತ್ರವನ್ನು ಹಂಚಿಕೊಂಡಿದ್ದು, ಮೂಲಸೌಕರ್ಯಗಳ ದುಸ್ಥಿತಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನೀರು ನೀತಿರುವುದನ್ನು ತೋರಿಸಿರುವ ಅವರು, ಬೆಂಗಳೂರು ಏರ್ಪೋರ್ಟ್ನಲ್ಲಿ ಇಂದಿನ ಸ್ಥಿತಿ. ಭಾರತದ ಇನ್ಫ್ರಾ ಸ್ಥಿತಿಯನ್ನು ನೋಡಿ ನನಗೆ ಅಳು ಬರುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಆಡಳಿತಾರೂಢ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆಪಾದನೆಯನ್ನು ಕರ್ಮ@ಐಂಭುಟಿಯಾ ಎಂಬುವವರು ಮಾಡಿದ್ದಾರೆ. ಗುತ್ತಿಗೆದಾರರು ಯೋಜನೆಯ ವೆಚ್ಚದ 40% ಅನ್ನು ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಲಂಚವಾಗಿ ನೀಡಬೇಕಾದಾಗ ಇಂತಹ ಪರಿಸ್ಥಿತಿ ನಮಗೆ ಲಭ್ಯವಾಗುತ್ತದೆ ಎಂದ ಅವರು ಜಲಾವೃತವಾದ ರಸ್ತೆಯು ವಾಹನಗಳನ್ನು ತೋಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಧಾರಾಕಾರ ಮಳೆ: ವಿದ್ಯುತ್ ತಂತಿ ತಗುಲಿ ಯುವತಿ ಸಾವು
ಟ್ರಾಫಿಕ್ ಜಾಮ್ ಹಿನ್ನೆಲೆ ಗಣೇಶನ ವೇಷ
ಐಟಿ ಉದ್ಯಮಿ ಟಿವಿ ಮೋಹನ್ ದಾಸ್ ಪೈ ಅವರು ದಯವಿಟ್ಟು ಬೆಂಗಳೂರು ನೋಡಿ ಎಂಬ ಶೀರ್ಷಿಕೆಯ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು, ಒಬ್ಬ ವ್ಯಕ್ತಿ ಗಣೇಶನಂತೆ ವೇಷ ಧರಿಸಿ ಮೊಣಕಾಲು ಆಳದ ನೀರಿನಲ್ಲಿ ಅಲೆದಾಡುತ್ತಿದ್ದು, ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ತೆವಳುತ್ತಿರುವಂತೆ ಕಂಡುಬಂದಿದೆ. ಹಲವಾರು ಟ್ವಿಟರ್ ಬಳಕೆದಾರರು ಅವರಿಗೆ ಪ್ರತಿಕ್ರಿಯಿಸಿ, ನಗರದಲ್ಲಿ ಮೂಲಸೌಕರ್ಯಗಳ ಕೊರತೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೆರೆಗಳು ಮತ್ತು ಒತ್ತುವರಿ ತೆರವು ಮಾಡಿ
ಟ್ವಿಟ್ಟನಲ್ಲಿ ರಾಜೀವ ಭೂಷಣ್ ಸಹಾಯ್ ಅವರು, ಬೃಹತ್ ಅರಣ್ಯನಾಶ ಮತ್ತು ಕಾನೂನುಬಾಹಿರ ಕಟ್ಟಡಗಳಿಂದ ಅವರೂ ಕೂಡ ಕಾನೂನುಬಾಹಿರವಾಗಿ ಎತ್ತರಕ್ಕೆ ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊರ್ವ ಬಳಕೆದಾರ [email protected] ಎಲ್ಲವನ್ನೂ ಮರುಪಡೆಯುವುದು ಕೆರೆಗಳು ಮತ್ತು ಒತ್ತುವರಿ ತೆರವು ಒಂದೇ ಪರಿಹಾರ ಎಂದು ಭಾವಿಸಿದೆ ಎಂದಿದ್ದಾರೆ.
ಬಡಾವಣೆ ಸಂಘಗಳು ಟ್ರ್ಯಾಕ್ಟರ್ಗೆ ಖರೀದಿಸಲು ಸಲಹೆ
ಇದರೊಂದಿಗೆ ಕೆಲವು ವ್ಯಂಗ್ಯದ ಪೋಸ್ಟ್ಗಳೂ ಇದ್ದವು. ಉದಾಹರಣೆಗೆ, ಗೌತಮ್ (@gautyou) ಹೆಸರಿನ ಟ್ವಿಟ್ಟರ್ ಬಳಕೆದಾರ ಸನ್ನಿ ಬ್ರೂಕ್ಸ್ನಂತಹ ಐಷಾರಾಮಿ ಲೇಔಟ್ಗಳಲ್ಲಿ ಮಳೆಯ ಸಮಯದಲ್ಲಿ ಪರ್ಯಾಯ ಸಾರಿಗೆ ವಿಧಾನವಾಗಿ ಟ್ರ್ಯಾಕ್ಟರ್ಗಳು ಓಡಾಡುತ್ತಿವೆ. ಈ ವಾಹನಗಳ ಮೇಲೆ ಸ್ಥಳಿಯ ಬಡಾವಣೆ ಸಂಘಗಳಿಗೆ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ. @CitizenKamran, ಎಂಬ ಇನ್ನೊಬ್ಬ ಟ್ವಿಟರ್ ಬಳಕೆದಾರ ನಗರವನ್ನು ಯುರೋಪಿಯನ್ ಮಾದರಿಗೆ ತಂದಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು ಇಂದಿರಾನಗರ ಈಗ ವೆನಿಸ್ ನಂತೆ ಕಾಣಲಾರಂಭಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅಪಾರ್ಟ್ಮೆಂಟ್ ಲೇಕ್ ವ್ಯೂ ಅಪಾರ್ಟ್ಮೆಂಟ್
ಚೇತನ್ ಕೃಷ್ಣ @ckchetanck ಎಂಬುವವರು, ಬಿಬಿಎಂಪಿ ಮತ್ತು @BJP4Karnataka ಕ್ಕೆ ಧನ್ಯವಾದಗಳು. ಈಗ ಬೆಂಗಳೂರಿನ ಪ್ರತಿಯೊಂದು ಅಪಾರ್ಟ್ಮೆಂಟ್ ಲೇಕ್ ವ್ಯೂ ಅಪಾರ್ಟ್ಮೆಂಟ್ ಆಗಿದೆ ಎಂದಿದ್ದಾರೆ. ವಿಶ್ವದ ಅಗ್ರ ಐಟಿ ಕಂಪನಿಗಳಿಗೆ ಆತಿಥ್ಯ ವಹಿಸುವ ನಗರಕ್ಕೆ ವರ್ಷಗಳಲ್ಲಿ ಸರಿಯಾದ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಆಡಳಿತ ವ್ಯವಸ್ಥೆಯ ಬಗ್ಗೆ ಹಲವಾರು ಬಳಕೆದಾರರು ದೂರಿದ್ದಾರೆ. ಈ ಬಗೆಯಲ್ಲಿ ಬೆಂಗಳೂರು ಪ್ರವಾಹದ ಕುರಿತು ಬೇರೆ ಬೇರೆ ಸಾಮಾಜಿಕ ಮಾಧ್ಯಮಗಳಲ್ಲಿ ಮಳೆ ಸಂಬಂಧಿತ ವೀಡಿಯೊಗಳು ಮತ್ತು ಮೀಮ್ಗಳು ಹರಿದಾಡಿವೆ.