ಕಾರ್ಮಿಕರಿಗೆ ಬಾಕ್ಸ್ಗಳಲ್ಲಿ ಊಟ ವಿತರಿಸುವಂತೆ ಸರ್ಕಾರದ ಆದೇಶ
ಬೆಂಗಳೂರು, ಏಪ್ರಿಲ್ 28: ಕಾರ್ಮಿಕರಿಗೆ ಪಾಲಿಥಿನ್ ಕವರ್ಗಳಲ್ಲಿ ಬದಲಾಗಿ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಆಹಾರ ಮತ್ತು ಊಟ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಈ ನಿಯಮವನ್ನು ಪಾಲಿಸುವಂತೆ ತಿಳಿಸಿದೆ.
Recommended Video
ರಾಜ್ಯದಲ್ಲಿ ಕೋವಿಡ್-19ರ ಸಂಕಷ್ಟದ ಕಾಲದಲ್ಲಿ ಅನೇಕ ಕಾರ್ಮಿಕರಿಗೆ ಊಟಕ್ಕೂ ತೊಂದರೆಯಾಗಿದೆ. ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಮಾತ್ರವಲ್ಲದೆ, ವಿವಿಧ ಸಂಸ್ಥೆಗಳು, ಸಂಘಟನೆಗಳು ಕಾರ್ಮಿಕರಿಗೆ ಊಟ ನೀಡುತ್ತೇವೆ. ಆದರೆ, ಈ ಸಮಯದಲ್ಲಿ ಊಟ ನೀಡಲು ಪಾಲಿಥಿನ್ ಕವರ್ಗಳನ್ನು ಬಳಕೆ ಮಾಡಲಾಗುತ್ತಿದೆ.
ಆದರೆ, ಇನ್ನು ಮುಂದೆ ಊಟ ನೀಡಲು ಪಾಲಿಥಿನ್ ಕವರ್ಗಳನ್ನು ಬಳಕೆ ಮಾಡದೆ, ಪ್ಲಾಸ್ಟಿಕ್ ಬಾಕ್ಸ್ಗಳನ್ನು ಬಳಕೆ ಮಾಡುವಂತೆ ಸರ್ಕಾರ ತಿಳಿಸಿದೆ. ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಥಿನ್ ಕವರ್ಗಳ ಬಳಕೆ ಬೇಡ ಎಂದು ಸರ್ಕಾರ ಆದೇಶ ನೀಡಿದೆ.

ಕೊರೊನಾ ಸಮಯದಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಬಗ್ಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಲಾಕ್ಡೌನ್ ನಡುವೆ ಕೆಲವು ಕಾರ್ಮಿಕರಿಗೆ ಕೆಲಸ ಮಾಡುವ ಅವಕಾಶ ನೀಡಿದ್ದು, ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆ ಕಂಡಿದೆ. ಇಂದು 11 ಜನರಿಗೆ ಸೋಂಕು ತಲುಗಿದೆ.












Click it and Unblock the Notifications