Get Updates
Get notified of breaking news, exclusive insights, and must-see stories!

ಬೆಂಗಳೂರು: ಮಂಜುನಾಥನಗರ ಮೇಲುಸೇತುವೆಯಲ್ಲಿ ಸಮಸ್ಯೆ, ಐಐಎಸ್ಸಿಗೆ ಪತ್ರ ಬರೆದ ಬಿಬಿಎಂಪಿ

ಬೆಂಗಳೂರು, ಏಪ್ರಿಲ್ 06: ನಗರದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುವ ಪ್ರತಿಷ್ಠಿತ ಮೇಲ್ಸೇತುವೆಯೊಂದರಲ್ಲಿ ಉಬ್ಬುವಿಕೆ (ಬಲ್ಜಿಂಗ್) ಮತ್ತು ಬಿರುಕು ಬಿಟ್ಟಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಅಗತ್ಯ ಕ್ರಮಕ್ಕೆ ಸಿದ್ಧ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಿಳಿಸಿದೆ.

ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥನಗರ ಮೇಲ್ಸೇತುವೆಯಲ್ಲಿ ಆರ್.ಇ ಪ್ಯಾನೆಲ್‌ಗಳಲ್ಲಿ ಉಬ್ಬುಗಳು ಕಂಡು ಬಂದಿದೆ. ಅಲ್ಲದೇ ಮಲ್ಸೇತುವೆಯಲ್ಲಿ ಕಟ್ಟಡದಲ್ಲಿ ಬಿರುಕು ಕಾಣಸಿಕೊಂಡಿದೆ ಅಂತಲೂ ವರದಿ ಆಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಬಿಎಂಪಿ ಕೂಲಂಕುಶವಾಗಿ ಪರಿಶೀಲನೆಗೆ ಒಳಪಡಿಸಲು ನಿರ್ಧರಿಸಿದೆ.

Bengaluru: Problem On West Of Chord Road Flyover, Letter From BBMP To IISC For Safety Audit

ಮೇಲ್ಸೇತುವೆಯಲ್ಲಿ ಬಲ್ಜ್ಂಗ್ ಕಂಡು ಬಂದಿದ್ದರಿಂದ, ಸದರಿ ಕಾಮಗಾರಿಯ ಯೋಜನಾ ಸಮಾಲೋಚಕರ ತಾಂತ್ರಿಕ ವರದಿ ಅನ್ವಯ ಬಲ್ಜಿಂಗ್ ಅನ್ನು ತಡೆಗಟ್ಟಲು 52 ಆರ್.ಇ ಪ್ಯಾನೆಲ್‌ಗಳಿಗೆ ನೈಲಿಂಗ್ ಅಳವಡಿಸಲಾಗಿದೆ. ಈ ಮಧ್ಯೆ ಮೇಲುಸೇತುವೆಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಐಐಎಸ್‌ಸಿಗೆ ಬಿಬಿಎಂಪಿ ಪತ್ರ

ಈ ಹಿಂದೆ ಮೇಲ್ಸೇತುವೆ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ವರದಿ ನೀಡಿದ್ದರು. ಅದಾದ ಬಳಿಕವು ಕೆಲವು ಆರೋಪಗಳ ಬಂದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಮೇಲ್ಸೇತುವೆ ಸುರಕ್ಷತಾ ಆಡಿಟ್ ಮಾಡಿ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆಯವರಿಂದ ಮತ್ತೊಂದು ಅಭಿಪ್ರಾಯವನ್ನು ಪಡೆಯಲು ಬಿಬಿಎಂಪಿ ಪತ್ರ ಬರೆದಿದೆ. ಸದರಿ ಅವರು ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿದೆ.

ಈ ಹಿಂದೆ ಬಿಬಿಎಂಪಿ ಮೇಲ್ಸೇತುವೆ ಸದರಿ ಕಾಮಗಾರಿಯ ಸುರಕ್ಷತಾ ಆಡಿಟ್ ಮಾಡಿ ವರದಿ ನೀಡುವಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ಬಿಬಿಎಂಪಿ ಮನವಿ ಮಾಡಿತ್ತು. ಈ ಕುರಿತಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ತಪಾಸಣೆಯನ್ನು ಕೈಗೊಂಡು ಕೂಲಂಕುಷವಾಗಿ ಪರಿಶೀಲಸಿ ವರದಿ ನೀಡಿದ್ದಾರೆ.

Bengaluru: Problem On West Of Chord Road Flyover, Letter From BBMP To IISC For Safety Audit

ಹಳೆಯ ವರದಿಯಲ್ಲಿ ಏನಿದೆ

ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ವರದಿಯಲ್ಲಿ ಮೇಲ್ಸೇತುವೆಯ ಆರ್.ಇ ಪ್ಯಾನಲ್‌ಗಳು ಸ್ವಲ್ಪ ಉಬ್ಬಿದಂತೆ ಕಂಡು ಬಂದಿರುವ ಬಗ್ಗೆ ಹೇಳಲಾಗಿತ್ತು. ಈ ಪ್ಯಾನಲ್‌ಗಳು ಇನ್ನಷ್ಟು ಬಲ್ಜಿಂಗ್ ಆಗುವ ಬಗ್ಗೆ ಪರಿಶೀಲಿಸಿ ಎಡಭಾಗದ ಆರ್.ಇ ಪ್ಯಾನೆಲ್‌ಗಳ ಪಕ್ಕದಲ್ಲಿ 10.00 ಮೀಟರ್‌ಗಳ ಅಂತರದಲ್ಲಿ 12 ಅಡಿಯ ಕಬ್ಬಿಣದ ಸರಳುಗಳನ್ನು ಬಿಬಿಎಂಪಿ ಅಳವಡಿಸಿತು. ಹೀಗಿದ್ದರೂ ಮತ್ತೆ ಸಮಸ್ಯೆಯಾಗಿದೆ. ಇದು ಜನರ ಪ್ರಾಣಕ್ಕೆ ಸಂಚಕಾರ ತರಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಬಿಬಿಎಂಪಿ ನೀಡಿದ ಭರವಸೆ

ಈಗಾಗಲೇ ಸದರಿ ಮೇಲುಸೇತುವೆಯನ್ನು ನುರಿತ ತಜ್ಞರು ಮೂರು-ನಾಲ್ಕು ಬಾರಿ ತಪಾಸಣೆ ಕಾರ್ಯ ಮಾಡಿದ್ದಾರೆ. ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ತರಹದ ತೊಂದರೆ ಇಲ್ಲ. ಹಾಗಾಗಿ ಸಾರ್ವಜನಿಕರು ವಾಹನಗಳಲ್ಲಿ ಮೇಲುಸೇತುವೆಯ ಮೇಲೆ ಸಂಚರಿಸಬಹುದು ಎಂದು ಯೋಜನಾ ವಿಭಾಗದ ಮುಖ್ಯ ಅಭಿಯಂತರ ವಿನಾಯಕ ಸುಗೂರ್ ಭರವಸೆ ನೀಡಿದ್ದಾರೆ.

2018 ರಲ್ಲಿ ಉದ್ಘಾಟನೆಗೊಂಡಿದ್ದ ಮೇಲ್ಸೇತುವೆ

ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥ ನಗರ ಮೇಲುಸೇತುವೆಯ ಕಾಮಗಾರಿಯನ್ನು ಬಿಬಿಎಂಪಿ ಕರೆದಿದ್ದ ಟೆಂಡರ್‌ ಅಡಿಯಲ್ಲಿ ಮೆ:ಎಂ. ವೆಂಕಟರಾವ್ ಇನ್‌ಫ್ರಾ ಪ್ರೊಜೆಟ್ಸ್ ಪ್ರೈ.ಲಿ ಪಡೆದಿತ್ತು. ಅದರಂತೆ ಮೇಲ್ಸೇತುವೆಯ ಕಾಮಗಾರಿಯು 2016ರ ಮಾರ್ಚ್ 14ರಂದು ಆರಂಭವಾಗಿತ್ತು. ನಿಗದಿಯಂತೆ 2018 ಆಗಸ್ಟ್ 27ರಂದು ಕಾಮಗಾರಿ ಪೂರ್ಣಗೊಂಡಿತ್ತು. ಬಳಿಕ ಬಿಬಿಎಂಪಿ ಮತ್ತು ಸರ್ಕಾರದಿಂದ ಅಧಿಕೃತವಾಗಿ ಉದ್ಘಾಟನೆಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಮೇಲ್ಸೇತುವೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಂಡು ಬರುತ್ತಿರುವುದು ನೋಡಿದರೆ ಬಿಬಿಎಂಪಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+