Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 28ರಂದು ಕರೆಂಟ್ ಕಟ್
Bengaluru Power Cut: ವಿದ್ಯುತ್ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇಂದು (ಫೆಬ್ರವರಿ 28) ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
66/11 kV ಪದ್ಮನಾಭನಗರ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಈ ಕೆಳಕಂಡ ಪ್ರದೇಶಗಳಲ್ಲಿ ಫೆಬ್ರವರಿ 28ರ ಬಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಪವರ್ ಕಟ್?: ಬನಗಿರಿನಗರ, ಜಯನಗರ 7ನೇ ಬ್ಲಾಕ್, ಬನಶಂಕರಿ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್, ಚನ್ನಮ್ಮನಕೆರೆ ಅಚ್ಚುಕಟ್ಟು, ಸರೋಜಾ ಕಾಂಪ್ಲೆಕ್ಸ್, ರಾಜೀವನಗರ, ಪದ್ಮನಾಭನಗರ, ಯಾರಬನಗರ, ಟಾಟಾ ಸಿಲ್ಕ್ ಫಾರ್ಮ್, ಶಾಸ್ತ್ರಿನಗರ, ಎಸ್ 9 ಉಪವಿಭಾಗ ಆವರಣ, 9ನೇ ಮುಖ್ಯ ಬಾಟಾ ಶೋರೊಂ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಮಾಗಡಿ ರಸ್ತೆ ಆಸುಪಾಸಿನ ಬಡಾವಣೆಗಳು, ಶ್ರೀನಗರ, ಚಾಮರಾಜಪೇಟೆ, ಬಸವನಗುಡಿ, ಕನಕಪುರ ರೋಡ್ನಲ್ಲಿ ಫೆಬ್ರವರಿ 23ರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ನಗರದ ಬ್ಯಾಡರಹಳ್ಳಿ 66/11 kV, ಶ್ರೀಗಂಧಕಾವಲು 66/11 ಕೆವಿ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ ಪವರ್ ಕಟ್ ಆಗಲಿದೆ ಬೆಸ್ಕಾಂ ತಿಳಿಸಿತ್ತು.
ಬ್ಯಾಡರಹಳ್ಳಿ, ಬಿಇಎಲ್ ಲೇಔಟ್ 2ನೇ ಹಂತ, ಗಿಡ್ಡದಕೋನೇನಹಳ್ಳಿ, ಮುದ್ದಿನಪಾಳ್ಯ, ಬಿಡಿಎ 8 ಮತ್ತು 9ನೇ ಬ್ಲಾಕ್, ರೈಲ್ವೆ ಲೇ ಔಟ್, ಉಪಕಾರ್ ಲೇಔಟ್, ಬಾಲಾಜಿ ಲೇ ಔಟ್, ಭವಾನಿ ಲೇಔಟ್, ಗೊಲ್ಲರಹಟ್ಟಿ, ರತ್ನನಗರ, ಮಾರ್ಡನ್ ಲೇಔಟ್, ಡಿ ಗ್ರೂಪ್ ಲೇಔಟ್, ಹೇರೋಹಳ್ಳಿ, ತುಂಗಾನಗರ, ಕೇಪೇಗೌಡ ನಗರ, ಪೋಲಿಸ್ ಕ್ವಾಟ್ರಸ್, ಬೈರವೇಶ್ವರನಗರ ಇಂಡಸ್ಟ್ರೀಯಲ್ ಎಸ್ಟೇಟ್.
ಹೊಸಹಳ್ಳಿ, ಚಿಕ್ಕ ಗೊಲ್ಲರಹಟ್ಟಿ, ಕಲ್ಲಹಳ್ಳಿ, ಹೊಸಹಳ್ಳಿ, ಬಿಎಂಟಿಸಿ ಡಿಪೋ, ಅನಿಕೇತನನಗರ, ಪಂಚಮುಖಿ ಲೇಔಟ್, ನಡೇಕೇರಪ್ಪ ಇಂಡಸ್ಟ್ರೀಯಲ್ ಎಸ್ಟೇಟ್, ಮಹದೇಶ್ವರನಗರ, ಮಾರುತಿ ನಗರ, ನಾಗರಹೊಳೆ ನಗರ, ಮುನೇಶ್ವರ ನಗರ, ಸಂಜೀವ್ ನಗರ, ಅನ್ನಪೂರ್ಣೇಶ್ವರಿ ನಗರ, ಸುಂಕದಕಟ್ಟೆ ಇಂಡಸ್ಟ್ರೀಯಲ್ ಏರಿಯಾ, ಚಂದನ ಬಡಾವಣೆ, ಕೆಬ್ಬಹಳ್ಳ, ರಾಜೀವ್ ಗಾಂಧಿನಗರ, ಚನ್ನಪ್ಪ ಲೇಔಟ್, ಶ್ವೀನಿವಾಸನಗರ, ಪೈಪ್ ಲೈನ್ ರೋಡ್.
ಮುತ್ತುರಾಯ ಬಡಾವಣೆ, ಪಿ & ಟಿ ಲೇ ಔಟ್, ರೋಡ್ ರಾಮಣ್ಣ ಕಾಂಪೌಂಡ್, ಬಿ.ಎಂ.ಶಂಕರಪ್ಪ ಎಸ್ಟೇಟ್, ಹೆಗ್ಗನಹಳ್ಳಿ ಮೇನ್ ರೋಡ್ , ಎನ್.ಜಿ.ಇ.ಎಫ್ ಲೇಔಟ್, ಬಾಲಾಜಿ ಲೇಔಟ್, ಎಂ.ಪಿ.ಎಂ. ಲೇಔಟ್, ಸರ್.ಎಂ.ವಿ. 9ನೇ ಬ್ಲಾಕ್, ಮಲ್ಲತ್ತಹಳ್ಳಿ, ಕೆಂಗುಂಟೆ, ಉಲ್ಲಾಳ ಮೇನ್ ರೋಡ್, ಲಕ್ಷ್ಮಿ ಹಾಸ್ಪಿಟಲ್ ಚನ್ನಿಗಪ್ಪ ಇಂಡಸ್ಟ್ರೀಯಲ್ ಏರಿಯಾ, ಕವಿತಾ ಹಾಸ್ಪಿಟಲ್, ಒಕ್ಕಲಿಗರ ಸಂಘ ಹಾಸ್ಪಿಟಲ್ ಅನ್ನಪೂರ್ಣೇಶ್ವರಿ ನಗರ, ಆರ್ಕಿಡ್ ಸ್ಕೂಲ್, ಕೊಟ್ಟೆಗೇಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ಟಾಗಲಿದೆ ಎಂದು ತಿಳಿಸಿತ್ತು.
ಸುಮನಹಳ್ಳಿ, ಸಜ್ಜೇಪಾಳ್ಯ, ಸುಂಕದಕಟ್ಟೆ ಮೇನ್ ರೋಡ್, ಹೊಯ್ಸಳ ನಗರ, ಮೋಹನ್ ಥೀಯೇಟರ್, ಶಿವ ಫಾರಂ, ಮಾರುತಿ ನಗರ, ಹನುಮಂತನಗರ, ಗವಿಪುರಂ, ಬಸಪ್ಪ ಲೇಔಟ್, ಶ್ರೀನಗರ, ಬಸವನಗುಡಿ ಮತ್ತು ಮೌಂಟ್ ಜಾಯ್ ರೋಡ್, ಕೆಂಪೇಗೌಡ ನಗರ, ಚಾಮರಾಜಪೇಟೆ, ಪೈಪ್ ಲೈನ್ ಏರಿಯಾ, ಗಿರಿನಗರ 2ನೇ ಹಂತ, ವಿದ್ಯಾಪೀಠ, ಸಿ.ಟಿ.ಬೆಡ್, ತ್ಯಾಗರಾಜನಗರ, ಬಿ.ಎಸ್.ಕೆ. 1ನೇ ಹಂತ, ಎನ್.ಆರ್. ಕಾಲೋನಿ.
ಹೊಸಕೆರಹಳ್ಳಿ, ನಾಗೇಂದ್ರ ಬ್ಲಾಕ್, ಮುನೇಶ್ವರ ಬ್ಲಾಕ್, ಅವಲಹಳ್ಳಿ, ಕೆ.ಆರ್.ಹಾಸ್ಪಿಟಲ್ ರೋಡ್, ಬಿಡಿಎ ಲೇಔಟ್, ಪಿ.ಇ.ಎಸ್. ಕಾಲೇಜು, ಎನ್.ಟಿ.ವೈ ಲೇಔಟ್, ಸುಂದರ್ ಇಂಡಸ್ಟ್ರಿಯಲ್ ಲೇಔಟ್, ಬ್ಯಾಟರಾಯನಪುರ, ಟೆಲಿಕಾಂ ಲೇಔಟ್, ಕೆ.ಆರ್. ರೋಡ್, ಕನಕಪುರ ರೋಡ್, ಶಾಸ್ತ್ರಿನಗರ, ಅವಲಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿತ್ತು.












Click it and Unblock the Notifications