ಬೆಂಗಳೂರು ರಸ್ತೆಯ ಗುಂಡಿಗೆ ಮುಕ್ತಿ ನೀಡಲು ಬಂದ 'ಪಾಟ್ ಹೋಲ್ ರಾಜ'
ಬೆಂಗಳೂರು ರಸ್ತೆಗಳ ಹೊಂಡಗಳನ್ನು ಮುಚ್ಚಲು 'ಪಾಟ್ ಹೋಲ್ ರಾಜ' ಸಂಸ್ಥೆ ಮುಂದಾಗಿದೆ. ಭಾರತದ ವಾಯುಸೇನಯಲ್ಲಿ ಪೈಲಟ್ ಆಗಿದ್ದ ಪ್ರತಾಪ್ ಭೀಮಸೇನ ರಾವ್ ಈ ಸಂಸ್ಥೆ ಸ್ಥಾಪಿಸಿದ್ದಾರೆ.
ಬೆಂಗಳೂರು, ಮೇ 5: ಬೆಂಗಳೂರಿನ ರಸ್ತೆಗಳಲ್ಲಿ ಹೊಂಡಗಳು ಸಾಮಾನ್ಯ. ಅದರಲ್ಲೂ ಕೆಲವು ರಸ್ತೆಗಳಂತೂ ಗುಂಡಿಗಳಿಂದಲೇ ತುಂಬಿಕೊಂಡಿವೆ. ಇದನ್ನು ಸರಕಾರ ರಿಪೇರಿ ಮಾಡುವ ಮನಸ್ಸು ಮಾಡುವುದೇ ಅಪರೂಪ.
ಈ ಕಾರಣಕ್ಕೆ ಈ ಹೊಂಡಗಳನ್ನು ಮುಚ್ಚಲು 'ಪಾಟ್ ಹೋಲ್ ರಾಜ' ಸಂಸ್ಥೆ ಮುಂದಾಗಿದೆ. ಭಾರತದ ವಾಯುಸೇನಯಲ್ಲಿ ಪೈಲಟ್ ಆಗಿದ್ದ ಪ್ರತಾಪ್ ಭೀಮಸೇನ ರಾವ್ ಈ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯದಲ್ಲಿ ನಿರತವಾಗಿದ್ದಾರೆ.

ಇಂಥಹದ್ದೊಂದು ಕೆಲಸಕ್ಕೆ ಮುಂದಾಗಲು ಕಾರಣ ಒಂದು ನೋವಿನ ಕಥೆ. ಭೀಮಸೇನ ರಾವ್ ಗೆಳೆಯರ ಮಗಳೊಬ್ಬರು ಹೊಂಡದಿಂದಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದಾದ ನಂತರ ಎಂದೂ ಮುಗಿಯದ ರಸ್ತೆ ಹೊಂಡದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಹುಡುಕಿದ ದಾರಿಯೆ 'ಪಾಟ್ ಹೋಲ್ ರಾಜ'.
ಜನರು ಎಲ್ಲಾದರೂ ರಸ್ತೆಗಳಲ್ಲಿ ಹೊಂಡಗಳನ್ನು ಕಂಡರೆ 8147684653 ವಾಟ್ಸಾಪ್ ನಂಬರಿಗೆ ಚಿತ್ರವನ್ನು ರವಾನಿಸಬಹುದು. ನಂತರ ಈ ಸಂಸ್ಥೆಯ ಮೂಲಕ ಜನರನ್ನು ಒಟ್ಟು ಸೇರಿಸಿ ರಿಪೇರಿ ಕೆಲಸಕ್ಕೆ ಮುಂದಾಗುತ್ತಾರೆ. ಕಳೆದ ಒಂದೂವರೆ ವರ್ಷದಲ್ಲಿ ಇದೇ ರೀತಿ 300 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ.
ವಿಶೇಷ ಎಂದರೆ ಈ ರೀತಿ ಹೊಂಡಗಳನ್ನು ಮುಚ್ಚಲು ಭೀಮಸೇನ ರಾವ್ ಕೋಲ್ಡ್ ಡಾಂಬರ್ ಬಳಸುತ್ತಾರೆ. ಸಾಮಾನ್ಯವಾಗಿ ಹೊಂಡಗಳನ್ನು ಮುಚ್ಚಲು ಹಾಟ್ ಡಾಮರ್ ಬಳಸುತ್ತಾರೆ. ಆದರೆ ಇದನ್ನು ಕೇವಲ 3-4 ಗಂಟೆ ಸಂಗ್ರಹಿಸಿಡಬಹುದು. ಆದರೆ ಕೋಲ್ಡಾ ಡಾಂಬರನ್ನು 10 ತಿಂಗಳ ಕಾಲ ಪೇರಿಸಿಡಬಹುದಾಗಿದೆ. ಮತ್ತು ಇದನ್ನು ಬಳಸುವುದೂ ಸುಲಭವಾಗಿದೆ.
ಒಂದು ಚದರ ಅಡಿಯ 55 ಮಿಮೀ ಹೊಂಡ ತುಂಬಲು ಕನಿಷ್ಠ 2500 ರೂಪಾಯಿ ಖರ್ಚಾಗುತ್ತದೆ. ಸದ್ಯ ಸಿಎಸ್ಆರ್ ಫಂಡ್ ಹಾಗೂ ಉದ್ಯೋಗಿಗಳ ಹಣದಲ್ಲಿ ಹೊಂಡಗಳನ್ನು ಗುರುತಿಸಿ ಮುಚ್ಚುವ ಕೆಲಸ ನಡೆಸಲಾಗುತ್ತಿದೆ.
ಒಮ್ಮೆ ಜನರು ಪಾಥ್ ಹೋಲ್ ಚಿತ್ರಗಳನ್ನ ವಾಟ್ಸಾಪಿಗೆ ಕಳುಹಿಸುತ್ತಿದ್ದಂತೆ ಈ ಚಿತ್ರ ಪಾಟ್ ಹೋಲ್ ವೆಬ್ಸೈಟಿನಲ್ಲಿ ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಈ ಸಮಸ್ಯೆ ಬಗೆಹರಿಯಿತಾ? ಹೊಂಡಕ್ಕೆ ಮುಕ್ತಿ ಸಿಕ್ಕಿತಾ ಎಂಬ ವಿವರಗಳು ಇಲ್ಲಿ ಸಿಗುತ್ತವೆ.
ಇಡೀ ಬೆಂಗಳೂರು ರಸ್ತೆಗಳನ್ನು ಹೊಂಡ ಮುಕ್ತ ಮಾಡಬೇಕು, ಕೇವಲ 3 ದಿನದಲ್ಲಿ ಎಲ್ಲಾ ಹೊಂಡಗಳನ್ನು ಮುಚ್ಚುವಂತಾಗಬೇಕು ಎಂಬ ಗುರಿಯನ್ನು ಪ್ರತಾಪ್ ಭೀಮಸೇನ ರಾವ್ ಹಾಕಿಕೊಂಡಿದ್ದಾರೆ. [ಮೂಲ ಮಾಹಿತಿ]
-
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications