Get Updates
Get notified of breaking news, exclusive insights, and must-see stories!

110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕಕ್ಕೆ ಜನರ ನಿರಾಸಕ್ತಿ

ಬೆಂಗಳೂರು, ಏಪ್ರಿಲ್ 28: ನಗರದ ಹೊರವಲಯದ 110 ಹಳ್ಳಿಗಳಿಗೆ ಕಾವೇರಿ ನೀರು ಪೈರೈಸಲು ಜಲಮಂಡಳಿ ಮುಂದಾಗಿತ್ತು. ಆದರೆ ಜನರಿಂದ ಉತ್ತಮ ಸ್ಪಂದನೆ ದೊರೆಯದೆ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಹೊರವಲಯದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಅನುಷ್ಠಾನಕ್ಕೆ ಜನರಿಂದಲೇ ಸರಿಯಾದ ಸ್ಪಂದನೆ ಲಭ್ಯವಾಗಿಲ್ಲ. 110 ಹಳ್ಳಿಗಳ ಪೈಕಿ 17 ಹಳ್ಳಿಗಳಿಗೆ ನೀರು ಪೂರೈಸಲು ಮೂಲ ಸೌಕರ್ಯ ದೊರೆತಿದ್ದರೂ ಸಂಪರ್ಕ ಪಡೆಯಲು ಅಲ್ಲಿನ ನಿವಾಸಿಗಳು ನಿರಾಸಕ್ತಿ ತೋರುತ್ತಿದ್ದಾರೆ.

ಬೆಂಗಳೂರು ಜಲಮಂಡಳಿಯು ಈಗಾಗಲೇ 17 ಹಳ್ಳಿಗಳಲ್ಲಿ ಪೈಪ್ ಅಳವಡಿಸಿದೆ, ಜನವರಿಯಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಲಾಗಿದೆ. ಮೊದಲು 10 ಹಳ್ಳಿಗಳಿಗೆ, ನಂತರ 7 ಹಳ್ಳಿಗಳಿಗೆ ಸೇರಿ ಒಟ್ಟು 17ಹಳ್ಳಿಗಳಲ್ಲಿ ನೀರಿನ ಸಂಪರ್ಕ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಮೂರು ತಿಂಗಳು ಕಳೆದರೂ ನಿರೀಕ್ಷಿಸಿದಷ್ಟು ಅರ್ಜಿಗಳು ಬಂದಿಲ್ಲ.

Poor response for Cauvery water connection in 17 villages

ಬಿಬಿಎಂಪಿಯ ಬ್ಯಾಟರಾಯನಪುರ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಒಟ್ಟು 225 ಚದರ ಕಿ.ಮೀ ವ್ಯಾಪ್ತಿಯಲ್ಲಿ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 17 ಹಳ್ಳಿಗಳಲ್ಲಿ ಮುಖ್ಯ ಪೈಪ್ ಗಳನ್ನು ಅಳವಡಿಸಲಾಗಿದೆ. ಇನ್ನು ಜನರು ಅರ್ಜಿ ಹಾಕಿದಲ್ಲಿ ಮನೆಗಳಿಗೆ ನೀರಿನ ಸಂಪರ್ಕ ಕೊಡಲು ಪೈಪ್ ಅಳವಡಿಸುವ ಕಾಮಗಾರಿ ಬಾಕಿ ಇದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದಕ್ಕಾಗಿ ಜನರೇ ಮೊದಲು ಅರ್ಜಿ ಹಾಕಿ ನಿಗದಿತ ಶುಲ್ಕ ಪಾವತಿಸಬೇಕು. ಬಹುತೇಕ ಹಳ್ಳಿಗಳಲ್ಲಿ 400 ರಿಂದ 500 ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಕೆಲವೆಡೆ ಬಡಾವಣೆಗಳಲ್ಲಿ ಒಂದೇ ಬಾರಿಗೆ ಅರ್ಜಿಗಳು ಬರಬಹುದೆಂದು ನಿರೀಕ್ಷಿಸಲಾಗಿತ್ತು.

ಬೋರ್ ವೆಲ್, ಟ್ಯಾಂಕರ್ ಅವಲಂಬನೆ: 110 ಹಳ್ಳಿಗಳಿಗೆ ಒಟ್ಟು 20 ದಶಲಕ್ಷ ಲೀಟರ್ ನೀರು ಪೂರೈಸಲು ಜಲಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಆದರೆ ಈ ಹಳ್ಳಿಯ ಜನರು ಬೋರ್ ವೆಲ್ ಹಾಗೂ ಟ್ಯಾಂಕರ್ ನೀರ್ನೇ ನಂಬಿಕೊಂಡಿದ್ದಾರೆ. 17 ಹಳ್ಳಿಗಳಲ್ಲಿ ನೀರು ಪೂರೈಸಲು ಪೈಪ್ ಅಳವಡಿಸಿದ್ದರೂ ಜನರು ಆಸಕ್ತಿ ತೋರುತತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+