ಟೆರೇಸ್ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ
ಬೆಂಗಳೂರು, ಡಿಸೆಂಬರ್ 20: ಟೆರೇಸ್ ಮೂಲಕ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಕೋಲಾರ ಮೂಲದ ಜ್ಞಾನಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಟೆರೇಸ್ನಿಂದ ಟೆರೇಸ್ಗೆ ಹಾರುತ್ತಾ ಬಾಲ್ಕನಿ ಮೂಲಕವೇ ಮನೆಗಳಿಗೆ ಹೋಗುತ್ತಿದ್ದ, ರಾಮಮೂರ್ತಿ ನಗರದ ಪೊಲೀಸರು ಬಂಧಿಸಿದ್ದಾರೆ.
ಈತ ರಾತ್ರಿಯಾಗುತ್ತಿದ್ದಂತೆಯೇ ಬೆಂಗಳೂರಿಗೆ ಬರುತ್ತಿದ್ದ, ಮೊದಲೇ ಗುರುತಿಸಿಕೊಂಡಿದ್ದ ಮನೆಗೆ ಟೆರೇಸ್ ಮೂಲಕ ಹತ್ತುತ್ತಿದ್ದ ಈತ, ಟೆರೇಸ್ನಿಂದ ಟೆರೇಸ್ಗೆ ಜಿಗಿಯುತ್ತಾ ಸರಣಿ ಕಳ್ಳತನ ಮಾಡುತ್ತಿದ್ದ, ಅಲ್ಲಿಂದಲೇ ಮನೆಯೊಳಗೆ ಪ್ರವೇಶಿಸಿ ಚಿನ್ನಾಭರಣ ಲೂಟಿ ಮಾಡುತ್ತಿದ್ದ.

ತಿಜೋರಿ ಖಾಲಿ ಇದ್ದರೆ ಮನೆಯಲ್ಲಿರುವ ಲ್ಯಾಪ್ಟಾಪ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ. ಈತನ ಬಂಧನದಿಂದ 16 ಕಳ್ಳತನಗಳು ಪತ್ತೆಯಾಗಿದ್ದು 33 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications