ಶಿವಕುಮಾರ ಸಾಯ ಅವರ 'ತೆರೆದ ಅಧ್ಯಾಯ' ನಿಮ್ಮಮುಂದೆ
ಬೆಂಗಳೂರು, ಜೂನ್ 26: ಶಿವಕುಮಾರ ಸಾಯ ಅವರ ತೆರೆದ ಅಧ್ಯಾಯ ಪಿಡಿಎಫ್ ಮುದ್ರಿಕೆ ಇದೀಗ ಅಂತರ್ಜಾಲದಲ್ಲಿ ಬಿಡುಗಡೆಗೊಂಡಿದೆ. ಅವರ ಪ್ರಕಟಿತ ಕವನಗಳನ್ನು ಒಳಗೊಂಡಿರುವ ಮುದ್ರಿಕೆ ಇದಾಗಿದೆ.
ರಡು ದಶಕಗಳಿಂದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದ ಕವನಗಳನ್ನು ಆಯ್ದು 250 ಪುಟಗಳ ಈ ಪಿಡಿಎಫ್ ಹೊತ್ತಗೆಯನ್ನು ಸಿದ್ಧಪಡಿಸಲಾಗಿದೆ. ಓದುಗರು ಗೂಗಲ್ ಪೇಜ್ನಲ್ಲಿ ಗೂಗಲ್ ಡ್ರೈವಿನ ಸಹಾಯದಿಂದಲೂ ಕೂಡ ಓದಬಹುದಾಗಿದೆ.
ಸ್ವಾತಂತ್ರ್ಯದಾಗಮನ , ಮಳೆಗಾಲ, ರೈತ, ಹಕ್ಕಿ, ಶಾಂತಿ ಯುದ್ಧವ ಮಾಡು, ರಜೆ, ಕೋರಿಕೆ, ಕಳ್ಳ ಇಲಿ, ನನಗೂ ಕಲಿಸು, ಮುಂದುವರಿದರು ಮನುಷ್ಯರು, ಕಡಲ ತೀರದ ಸಂಜೆ ಹೀಗೆ ಅನೇಕ ಆಯ್ದ ಕವನಗಳ ಗುಚ್ಚವನ್ನು ಅಲ್ಲಿ ನೀಡಲಾಗಿದೆ.
ಹಳ್ಳಿಯ ಒಂದು ಚಿತ್ರಣ, ಅಲ್ಲಿನ ಮಳೆಗಾಲ, ರಜೆ ಎಂದರೆ ಸಾಕು ಸಂತೋಷದಿಂದ ಕುಣಿದುಕುಪ್ಪಳಿಸುವ ಮಕ್ಕಳು, ಕಡಲತೀರದಲ್ಲಿ ಕಳೆದ ಒಂದು ಸಂಜೆಯ ನೋಟ, ಹೀಗೆ ಮಕ್ಕಳ ಕುರಿತು ಹೆಚ್ಚು ಕವನಗಳು ಅಲ್ಲಿವೆ.
Comments
English summary
Collections of poem 'Tereda Adhyaya' weitten by Poet Shivakumar Saya is now available in PDF format in google page.
Story first published: Tuesday, June 26, 2018, 17:13 [IST]