ಕೆಂಪೇಗೌಡ ಏರ್ಪೋರ್ಟ್ನ ವಿರಾಮ ಕೊಠಡಿ, ಹೋಟೆಲ್ ಬಂದ್
ಬೆಂಗಳೂರು, ಮೇ 29: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿರಾಮ ಕೊಠಡಿ ಹಾಗೂ ಹೋಟೆಲ್ಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ.
ಇದರಿಂದ ದೇಶಿ ಹಾಗೂ ವಿದೇಶಿ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಗಳಿವೆ, ಏರ್ಪೋರ್ಟ್ ಹೋಗಿ ಏನಾದರೂ ತಿಂದು ಬಳಿಕ ವಿಮಾನ ಹತ್ತೋಣ ಅಂದುಕೊಂಡವರಿಗೆ ನಿರಾಶೆಯಾಗಲಿದೆ.
ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಕೆಲವೇ ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ. ಏರ್ಪೋರ್ಟ್ನಲ್ಲಿ ಎರಡು ವಿಶ್ರಾಂತಿ ಕೊಠಡಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇನ್ನೆರಡು ಡೊಮೆಸ್ಟಿಕ್ ಪ್ರಯಾಣಿಕರಿಗಾಗಿ ಇದೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, 20 ತಿಂಗಳ ಅವಧಿಯಲ್ಲಿ ಕಾಮಗಾರಿ ನಡೆಯಲಿದೆ.

ಜೂನ್ 1ರಿಂದ ಕಾಮಗಾರಿ ಆರಂಭವಾಗಲಿದೆ. ಪ್ರಯಾಣಿಕರಿಗೆ ಇನ್ನೂ ಉತ್ತಮ ಸೇವೆಯನ್ನು ನೀಡುವ ದೃಷ್ಟಿಯಲ್ಲಿ ನವೀಕರಣ ಮಾಡಲಾಗುತ್ತಿದೆ, ಪ್ರಯಾಣಿಕರು ಸಹಕರಿಸಬೇಕು ಎಂದು ಬಿಐಎಎಲ್ ತಿಳಿಸಿದೆ. ನಿತ್ಯ ಲಕ್ಷಾಂತರ ಪ್ರಯಾಣಿಕರು ಏರ್ಪೋರ್ಟ್ಗೆ ಭೇಟಿ ನೀಡುತ್ತಾರೆ, ಈ ಬಗ್ಗೆ ತಿಳಿದಿರದ ಪ್ರಯಾಣಿಕರಿಗೆ ತೊಂದರೆಯಾಗಲಿದೆ.












Click it and Unblock the Notifications