ಪೂಜೆ ಮಾಡಿ ಹೊಸ ಕಚೇರಿ ಪ್ರವೇಶಿಸಿದ ಯಡಿಯೂರಪ್ಪ
Recommended Video
ಬೆಂಗಳೂರು, ಜುಲೈ 02: ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಅವರು ವಿಧಾನಸೌಧದ ತಮ್ಮ ಕಚೇರಿಗೆ ವಿಶೇಷ ಪೂಜೆ ಮಾಡಿ ಪ್ರವೇಶ ಮಾಡಿದರು.
ಬಜೆಟ್ ಅಧಿವೇಶನದ ಮೊದಲ ದಿನ ಸದನಕ್ಕೆ ಹಾಜರಾಗಿದ್ದ ಯಡಿಯೂರಪ್ಪ ಅವರು ಅದಕ್ಕೂ ಮುನ್ನಾ ತಮಗೆ ನೀಡಲಾಗಿರುವ ಕಚೇರಿ ಕೊಠಡಿಯ ಪೂಜೆ ಮಾಡಿದರು.
ಬಯಸಿದ ನಿವಾಸ ನೀಡದ ಸರಕಾರ, ನೋ ಎಂದ ಯಡಿಯೂರಪ್ಪ
ಯಡಿಯೂರಪ್ಪ ಅವರಿಗೆ ವಿಧಾನಸೌಧದ 161ನೇ ಕೊಠಡಿ ನೀಡಲಾಗಿದೆ. ಗಣೇಶ, ಲಕ್ಷ್ಮಿ, ಸರಸ್ವತಿ ಅವರುಗಳ ಫೊಟೊಕ್ಕೆ ಪೂಜೆ ಸಲ್ಲಿಸಿದರು. ಅರ್ಚಕರೊಬ್ಬರ ನೇತೃತ್ವದಲ್ಲಿ ಬಿಎಸ್ವೈ ಪೂಜೆ ಮಾಡಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಹಾತ್ಮಾ ಗಾಂಧಿಜಿ, ಬಿ.ಆರ್.ಅಂಬೇಡ್ಕರ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಎಲ್.ಕೆ.ಅಡ್ವಾಣಿ, ಆರ್ಎಸ್ಎಸ್ ಹಿರಿಯ ನಾಯಕ ಶಾಮ್ ಪ್ರಸಾದ್ ಅವರುಗಳ ಭಾವಚಿತ್ರಗಳನ್ನು ಇಟ್ಟಿದ್ದಾರೆ.
ಯಡಿಯೂರಪ್ಪನವರು 3ನೆಯ ಬಾರಿಗೆ ವಿರೋಧಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿರೋಧಪಕ್ಷದಲ್ಲಿದ್ದುಕೊಂಡು ಅಪವಿತ್ರ ಮೈತ್ರಿ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದಾಗಿ ಅವರು ಹೇಳಿದರು. ರಾಜ್ಯದ ಜನತೆ ತಮ್ಮೊಂದಿಗೆ ಇರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಕಚೇರಿ ಪ್ರವೇಶದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡರು, ಶ್ರೀ ಕೆ.ಪಿ ನಂಜುಂಡಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.