ಆಸ್ತಿ ನೋಂದಣಿ ಇನ್ನು 'ಕಾವೇರಿ' ಮೂಲಕ ಆನ್ಲೈನ್ ನಲ್ಲೇ ಸಾಧ್ಯ
ಬೆಂಗಳೂರು, ನವೆಂಬರ್ 15: ನೋಂದಣಿ ಹಾಗೂ ಮುದ್ರಾಂಕ ಇಲಾಖೆಯು ಅಭಿವೃದ್ಧಿಪಡಿಸಿರುವ 'ಕಾವೇರಿ' ಎನ್ನುವ ಆನ್ಲೈನ್ ಸೇವೆಗಳನ್ನು ಕಂದಾಯ ಸಚಿವ ಆರ್ವಿ ದೇಶಪಾಂಡೆ ನವೆಂಬರ್ 16ರಂದು ಉದ್ಘಾಟಿಸಲಿದ್ದಾರೆ.
ಕಾವೇರಿ ಆನ್ಲೈನ್ ಸೇವೆಗಳ ಜಾಲದಲ್ಲಿ ಆಸ್ತಿ ನೋಂದಣಿ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಸೇವೆಗಳೂ ಕೂಡ ಲಭ್ಯವಿರಲಿದೆ. ಜನರಿಗೆ ಅವರಿರುವ ಜಾಗದಲ್ಲೇ ಸೇವೆ ಲಭ್ಯವಾಗಲಿದೆ. ಜನರು ತಂತ್ರಜ್ಞಾನ ಆಧರಿಸಿ ಈ ಸೇವೆಗಳ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಆನ್ಲೈನ್ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಆಸ್ತಿ ತೆರಿಗೆಗಳನ್ನು ಕಚೇರಿಗಳಿಗೆ ತೆರಳಿ ಕಟ್ಟಬೇಕಿಲ್ಲ, ಎಲ್ಲಾ ರೀತಿಯ ಮಾಹಿತಿಗಳನ್ನು ಕುಳಿತಲ್ಲಿಂದಲೇ ಪಡೆಯಬಹುದು ಹಾಗೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.












Click it and Unblock the Notifications