ಚೇತನ್ ಭಗತ್ ಮೇಲೆ ಕತೆ ಕದ್ದ ಆರೋಪ, ಬೆಂಗ್ಳೂರಿನಲ್ಲಿ ಕೇಸ್
ಬೆಂಗಳೂರು ಮೂಲದ ಲೇಖಕಿ ಅನ್ವಿತಾ ಭಾಜಪೇಯಿ ಎಂಬುವರು ಚೇತನ್ ಭಗತ್ ವಿರುದ್ಧ ಕೋರ್ಟಿನಲ್ಲಿ ಕೇಸ್ ಹಾಕಿದ್ದು, 'ಒನ್ ಇಂಡಿಯನ್ ಗರ್ಲ್' ಕೃತಿ ಮಾರಾಟ ಸ್ಥಗಿತಕ್ಕೆ ಆದೇಶಿಸುವಂತೆ ಅರ್ಜಿ ಹಾಕಿದ್ದಾರೆ.
ಬೆಂಗಳೂರು, ಏಪ್ರಿಲ್, 25: ಜನಪ್ರಿಯ ಲೇಖಕ, ಕಾದಂಬರಿಕಾರ ಚೇತನ್ ಭಗತ್ ಅವರ ಮೇಲೆ ಮತ್ತೊಮ್ಮೆ ಕೃತಿ ಚೌರ್ಯ ಆರೋಪ ಕೇಳಿ ಬಂದಿದೆ. ಬೆಂಗಳೂರು ಮೂಲದ ಲೇಖಕಿ ಅನ್ವಿತಾ ಭಾಜಪೇಯಿ ಎಂಬುವರು ಚೇತನ್ ಭಗತ್ ವಿರುದ್ಧ ಕೋರ್ಟಿನಲ್ಲಿ ಕೇಸ್ ಹಾಕಿದ್ದು, 'ಒನ್ ಇಂಡಿಯನ್ ಗರ್ಲ್' ಕೃತಿ ಮಾರಾಟ ಸ್ಥಗಿತಕ್ಕೆ ಆದೇಶಿಸುವಂತೆ ಅರ್ಜಿ ಹಾಕಿದ್ದಾರೆ.
ಅನ್ವಿತಾ ಬಾಜಪೇಯಿ ಹಾಗೂ ಚೇತನ್ ಭಗತ್ ಇಬ್ಬರು ಫೇಸ್ ಬುಕ್ ಮೂಲಕ ಕೂಡಾ ತಮ್ಮ ವಾದ ಪ್ರತಿವಾದ ಮಂಡಿಸಿದ್ದಾರೆ. ಈ ಹಿಂದೆ ಚೇತನ್ ಭಗತ್ ಅವರ ಹಾಫ್ ಗರ್ಲ್ ಫ್ರೆಂಡ್ ಕೃತಿ ಕೂಡಾ ಕೃತಿ ಚೌರ್ಯ ಆರೋಪ ಎದುರಿಸಿತ್ತು. ಪಾಟ್ನ ಮೂಲಕ ಲೇಖಕರೊಬ್ಬರು, ಚೇತನ್ ವಿರುದ್ಧ ಕತೆ ಕದ್ದ ಆರೋಪ ಹೊರೆಸಿದ್ದರು.

2014ರಲ್ಲಿ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಬಂದಿದ್ದ ಚೇತನ್ ಭಗತ್ ಅವರಿಗೆ 'ಡ್ರಾಯಿಂಗ್ ಪ್ಯಾರಲಲ್ಸ್' ಪ್ರತಿ ನೀಡಿ ಆ ಕಥೆ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವಂತೆ ಕೋರಿದ್ದೆ. 2016 ಅಕ್ಟೋಬರ್ ತಿಂಗಳಲ್ಲಿ ಒನ್ ಇಂಡಿಯನ್ ಗರ್ಲ್ ಪ್ರಕಟವಾಯಿತು. ಅದರ ಕಥೆ ನೋಡಿ ಆಘಾತವಾಯಿತು.
ಪುಸ್ತಕದ ಮಾರಾಟ ನಿಲ್ಲಿಸಿ, 5 ಲಕ್ಷ ಪರಿಹಾರ ನೀಡಬೇಕು ಎಂದು ಚೇತನ್ ಅವರಿಗೆ ವಕೀಲರ ಮೂಲಕ ನೋಟಿಸ್ ಕಳಿಸಲಾಗಿದೆ. ಆದರೆ, ನೋಟಿಸ್ ಗೆ ಉತ್ತರ ಸಿಗದ ಕಾರಣ ಸಿವಿಎಲ್ ಕೋರ್ಟ್ ಮೆಟ್ಟಿಲೇರಿದ್ದೇನೆ. ಆರು ತಿಂಗಳುಗಳ ಕಾಲ ಪುಸ್ತಕ ಮಾರಾಟ ನಿಲ್ಲಿಸಲಾಗಿತ್ತು. ಆದರೆ, ಈಗ ಮತ್ತೆ ಪುಸ್ತಕ ಮಾರಾಟವಾಗುತ್ತಿದೆ ಎಂದು ಅನ್ವಿತಾ ಹೇಳಿಕೊಂಡಿದ್ದಾರೆ.
ಆದರೆ, ಅನ್ವಿತಾ ಅವರ ಆರೋಪಗಳನ್ನು ಅಲ್ಲಗೆಳೆದಿರುವ ಚೇತನ್, ಅನ್ವಿತಾ ಅವರ ಯಾವುದೇ ಪುಸ್ತಕವನ್ನು ಓದಿಲ್ಲ. ಒನ್ ಇಂಡಿಯನ್ ಗರ್ಲ್ ನನ್ನ ಸ್ವಂತ ಕೃತಿ, ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ.
ಈ ನಡುವೆ ಪ್ರಕಾಶಕ ಸಂಸ್ಥೆ ರೂಪ ಪಬ್ಲಿಷರ್ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿಲ್ಲ. ಚೇತನ್ ಅವರ ಮತ್ತೊಂದು ಕೃತಿ 'ಫೈವ್ ಪಾಯಿಂಟ್ ಸಮ್ ಒನ್' ದೆಹಲಿಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಠ್ಯವಾಗುತ್ತಿರುವ ಸುದ್ದಿ ಕೂಡಾ ಬಂದಿದೆ.
-
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications