ನಿನ್ನ ಅಡ್ರೆಸ್ ಗೊತ್ತು, ಕತ್ತರಿಸಿ ಹಾಕ್ತೀನಿ: ಯುವತಿಗೆ ಓಲಾ ಚಾಲಕನ ಬೆದರಿಕೆ
ಬೆಂಗಳೂರು, ಏಪ್ರಿಲ್ 25: ನೀನು ಎಲ್ಲಿರುತ್ತೀಯಾ ಅಂತ ಗೊತ್ತು, ಕತ್ತರಿಸಿ ಹಾಕಿಬಿಡುತ್ತೇನೆ ಎಂದು ಓಲಾ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೋರ್ವರಿಗೆ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
22 ವರ್ಷದ ಅರಿಜಿತಾ ಬ್ಯಾನರ್ಜಿ ಎಂಬ ಯುವತಿಯ ತಂದೆ ಸೋಮವಾರ ಬೆಳಿಗ್ಗೆ ಮಗಳಿಗಾಗಿ ಕ್ಯಾಬ್ ಒಂದನ್ನು ಬುಕ್ ಮಾಡಿದ್ದಾರೆ. ಕ್ಯಾಬ್ ಚಾಲಕ ಮೊಹಮ್ಮದ್ ಅಜರುದ್ದೀನ್ ಅರಿಜಿತಾಳನ್ನು ಹತ್ತಿಸಿಕೊಂಡು ನಾಗವಾರಕ್ಕೆ ಇಳಿಸಿ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.
ನನ್ನ ತಂದೆ ಈಗಾಗಲೇ ಓಲಾ ಮನಿ ಮೂಲಕ ಕೊಡಬೇಕಾದ ಹಣ ಕೊಟ್ಟಿದ್ದಾರೆ ಎಂದು ಹೇಳಿದಾಗ, ಇಲ್ಲ 130 ರೂಪಾಯಿಗಳನ್ನು ಕೊಡಲೇ ಬೇಕೆಂದು ಹಠ ಹಿಡಿದಿದ್ದಾನೆ, ಅರಿಜಿತಾಳು ತಂದೆಗೆ ಕರೆ ಮಾಡಿ ಚಾಲಕನಿಗೆ ಫೋನ್ ಕೊಟ್ಟಾಗ, ಅವರ ಬಳಿಯೂ ಕೆಟ್ಟದಾಗಿ ಮಾತನಾಡಿದ ಡ್ರೈವರ್ ನಿನ್ನ ಮಗಳನ್ನು ಎಲ್ಲಿಯಾದರೂ ಬಿಟ್ಟುಬಿಡುತ್ತೇನೆ ಎಂದು ಬೆದರಿಸಿದ್ದಾನೆ.

ನಂತರ ಅರಿಜಿತಾ ಅವರ ಫೋನ್ ಅನ್ನು ವಾಪಸ್ ಮಾಡಲು ನಿರಾಕರಿಸಿದ್ದಾನೆ, ಆಗ ಅರಿಜಿತಾ 500 ಹಣ ಕೊಟ್ಟು ಫೋನ್ ವಾಪಸ್ ಪಡೆದಿದ್ದಾಳೆ, ಈ ಮಧ್ಯೆ ಸಹಾಯಕ್ಕಾಗಿ ಬೇರೆಯವರನ್ನು ಕೇಳಿದಾಗ ಯಾರೂ ಮುಂದೆ ಬರೆದೇ ಇರುವುದು ಸಹ ಅರಿಜಿತಾಳಿಗೆ ತೀವ್ರ ಆತಂಕ ಉಂಟುಮಾಡಿದೆ.
ಫೋನ್ ಪಡೆದ ಅರಿಜಿತಾ 'ನೀನು ಇನ್ನೆಂದು ಕಾರು ಓಡಿಸದಂತೆ ಮಾಡುತ್ತೇನೆಂದು ಹೇಳಿದ್ದಕ್ಕೆ' ಸಿಟ್ಟಿನಿಂದ ಪ್ರತಿಕ್ರಿಯಿಸಿದ ಡ್ರೈವರ್, 'ನಿನ್ನ ಅಡ್ರೆಸ್ ನನಗೆ ಗೊತ್ತು, ಕತ್ತರಿಸಿ ತುಂಡು ಮಾಡಿಬಿಡುತ್ತೇನೆ' ಎಂದು ಬೆದರಿಸಿದ್ದಾನೆ.
ಘಟನೆ ಬಗ್ಗೆ ಅರಿಜಿತಾ ಬಾಣಸವಾಡಿಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಾಗಿದ್ದು, ಚಾಲಕನಿಗಾಗಿ ಹುಡುಕಾಟ ನಡೆದಿದೆ. ಚಾಲಕನ ಬೆದರಿಕೆಯಿಂದಾಗಿ ಅರಿಜಿತಾ ತಾನು ಈಗ ವಾಸವಿರುವ ಮನೆ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.
ಘಟನೆ ನಡೆದ ದಿನವೇ ಅರಿಜಿತಾ ಅವರ ತಂದೆ ಒಲಾ ಸೆಕ್ಯೂರಿಟಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಓಲಾ, ಚಾಲಕನನ್ನು ತರಬೇತಿಗೆ ಕಳುಹಿಸಿ ಆತ ಉತ್ತೀರ್ಣನಾಗುವವರೆಗೂ ಮತ್ತೆ ಕಾರು ಚಾಲನೆ ಮಾಡಲು ಅವಕಾಶ ನೀಡುವುದಿಲ್ಲವೆಂದು ಹೇಳಿದೆ.
ಎಫ್ಐಆರ್ ದಾಖಲಾದ ನಂತರ ಮತ್ತೆ ಕರೆ ಮಾಡಿದ ಓಲಾ ಸಿಬ್ಬಂದಿ ಬೆದರಿಕೆ ಹಾಕಿದ ಚಾಲಕನನ್ನು ಕೆಲಸದಿಂದ ತೆಗೆದುಹಾಕಿದ್ದು, ಪ್ರಕರಣದ ತನಿಖೆ ನಡೆಸಲು ಪೊಲೀಸರಿಗೆ ಅವಶ್ಯಕ ಸಹಕಾರ ನೀಡುತ್ತಿರುವುದಾಗಿ ಹೇಳಿದೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications