ಎಚ್ಡಿ ದೇವೇಗೌಡರಿಗೆ ಕೇರಳದಲ್ಲಿ ಪ್ರಕೃತಿ ಚಿಕಿತ್ಸೆ
ಬೆಂಗಳೂರು, ಡಿಸೆಂಬರ್ 19: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು 10 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ.
10 ದಿನಗಳ ಕಾಲ ಕೇರಳದ ಕಲ್ಲಿಕೋಟೆಯ ಪ್ರಕೃತಿ ಚಿಕಿತ್ಸಾ ಕೇಂದ್ರವೊಂದರಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೇ ತಿಂಗಳಲ್ಲಿ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಸಾಯಿರಾಧಾ ರೆಸಾರ್ಟ್ನಲ್ಲಿ ಕುಮಾರಸ್ವಾಮಿ ಹಾಗೂ ಎಚ್ಡಿ ದೇವೇಗೌಡರು ಪ್ರಕೃತಿ ಚಿಕಿತ್ಸೆ ಪಡೆದಿದ್ದರು. ಏಪ್ರಿಲ್ 29ರಿಂದ ಮೇ 3ರವರೆಗೆ ಚಿಕಿತ್ಸೆ ಪಡೆದಿದ್ದರು.

ಪ್ರಕೃತಿ ಚಿಕಿತ್ಸಾ ಪದ್ಧತಿ ನೈಸರ್ಗಿಕವಾದ ರೋಗ ನಿವಾರಣಾ ಶಕ್ತಿಯಾಗಿದೆ. ಅದಲ್ಲದೇ ದೇಹದ ಅತಿಮುಖ್ಯವಾದ ಗುಣಪಡಿಸುವ ಗುಣ ಹಾಗು ತನ್ನನ್ನು ತಾನು ನಿಭಾಯಿಸುವ ಶಕ್ತಿಯ ಮೇಲೆ ಅವಲಂಬಿತವಾಗಿರುವ ಪರ್ಯಾಯ ಚಿಕಿತ್ಸಾ ಪದ್ಧತಿಯ ಒಂದು ವಿಧಾನ.
ಪ್ರಕೃತಿ ಚಿಕಿತ್ಸಾ ತತ್ವವು ಸಮಗ್ರತಾ ದೃಷ್ಟಿಯ ವಿಧಾನ ಹಾಗು ಶಸ್ತ್ರಕ್ರಿಯೆ ಮತ್ತು ಔಷಧಗಳ ಅತ್ಯಲ್ಪ ಬಳಕೆಯನ್ನು ಪ್ರತಿಪಾದಿಸುತ್ತದೆ. ಪ್ರಕೃತಿ ಚಿಕಿತ್ಸಾ ಪದ್ಧತಿಯು ವೈದ್ಯಕೀಯ ಸಮುದಾಯದವರು ವಿವಿಧ ಪ್ರಮಾಣದಲ್ಲಿ ಒಪ್ಪಿಕೊಂಡಿರುವ ಹಲವಾರು ಚಿಕಿತ್ಸಾ ಕ್ರಮಗಳನ್ನು ಒಳಗೊಂಡಿದೆ.












Click it and Unblock the Notifications