ಅಂಚೆ ಇಲಾಖೆಯಿಂದ 'ನ್ಯಾಷನಲ್ ಪೋಸ್ಟಲ್ ವೀಕ್'
ಬೆಂಗಳೂರು, ಅಕ್ಟೋಬರ್, 10 : ನಾಗರಿಕ ಸಂವಹನ ಪ್ರಪಂಚದ ಮುಖ್ಯ ಭಾಗವಾಗಿರುವ ಅಂಚೆ ಇಲಾಖೆ ಅಕ್ಟೋಬರ್ 9ರ ಶುಕ್ರವಾರದಿಂದ 'ರಾಷ್ಟ್ರೀಯ ಪೋಸ್ವಲ್ ವೀಕ್' ಆರಂಭಿಸಿದೆ. ಇದರ ಪ್ರಯುಕ್ತ ಅಕ್ಟೋಬರ್ 10ರ ಶನಿವಾರ ಶಾಲಾ ಮಕ್ಕಳಿಗೆ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ವಿವಿಧ ಶಾಲಾ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ವ್ಯಕ್ತಪಡಿಸಿದರು.
ಅಂಚೆ ಇಲಾಖೆ 160 ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪೋಸ್ವಲ್ ವೀಕ್ ಪ್ರಾರಂಭಿಸಿದೆ. ಈ ನಿಮಿತ್ತ ನಗರದ ಅಂಬೇಡ್ಕರ್ ರಸ್ತೆಯ ಪ್ರಧಾನ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಗರಾದ್ಯಂತ ಪತ್ರ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ.[ರಾಮಾಯಣ, ಮಹಾಭಾರತದ ಕತೆ ಹೇಳಲಿವೆ ಅಂಚೆ ಚೀಟಿಗಳು]

ಅಕ್ಟೋಬರ್ 13ರ ಮಂಗಳವಾರ ಆಯ್ದ ಶಾಲೆಗಳಿಗೆ ತೆರಳಿ ಅಂಚೆ ಚೀಟಿ ಸಂಗ್ರಹಣೆ, ಇದರ ಉಪಯೋಗ, ಸಂಗ್ರಹಿಸುವುದು ಹೇಗೆ ಎಂಬುದರ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡಲಾಗುವುದು. ಪೋಸ್ಟಲ್ ನ ಕುರಿತಾಗಿ ಸಮಗ್ರ ಜ್ಞಾನವನ್ನು ಜನರಿಗೆ ಹಾಗೂ ಮಕ್ಕಳಿಗೆ ನೀಡುವುದರ ಮೂಲಕ ಪತ್ರ ಸಂಸ್ಕೃತಿ ಜಾಗೃತಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೆಚ್ಚುವರಿ ಮುಖ್ಯ ಪೋಸ್ಟ್ ಮಾಸ್ಟರ್ ದಿನೇಶ್ ಖರೆ ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ 10.30ಕ್ಕೆ ಜಿಪಿಒ ಕಚೇರಿಯಿಂದ ಕಬ್ಬನ್ ಪಾರ್ಕಿನಲ್ಲಿ ಕೇಂದ್ರ ಗ್ರಂಥಾಲಯದವರೆಗೆ 'ವಾಕ್ ಆಂಡ್ ಟಾಕ್' ಜಾಥಾ ಹಮ್ಮಿಕೊಂಡಿದ್ದು, ಮಕ್ಕಳಿಗೆ ಪತ್ರ ಬರೆಸಲಾಗುತ್ತದೆ. ಈ ಜಾಥಾದಲ್ಲಿ ಸುಮಾರು 80 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಜಿಪಿಒ ಸದಸ್ಯರು ಭಾಗವಹಿಸುತ್ತಾರೆ.[ಅಂಚೆ ಇಲಾಖೆಯ ವಿಶೇಷ ಲಕೋಟೆ ಕೊಂಡುಕೊಳ್ಳಿ]

ಪೋಸ್ಟಲ್ ಹಮ್ಮಿಕೊಂಡ ಕಾರ್ಯಕ್ರಮಗಳು :
* ಸಾರ್ವಜನಿಕರೊಂದಿಗೆ ನೇರ ಸಂವಾದ
* ವಿವಿಧ ಶಾಲೆಗಳಿಗೆ ಪೋಸ್ಟಲ್ ಅಧಿಕಾರಿಗಳ ಭೇಟಿ, ಅಂಚೆ ಕಚೇರಿ ಸೇವೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು
* ಜಿಪಿಒ(Jeneral post office) ಸಿಬ್ಬಂದಿಗೆ ಕೌಶಲ ಕಾರ್ಯಾಗಾರ
* ಉಳಿತಾಯ, ಬ್ಯಾಂಕ್ ಕ್ಯಾಂಪ್, ಫಿಲಾಟ್ಲೆ ದಿನ, ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಡೇ, ಬ್ಯುಸಿನೆಸ್ ಡೆವಲಪ್ ಮೆಂಟ್
* ಹಿಂದುಳಿದ ಶಾಲೆಗಳಿಗೆ ತೆರಳಿ ಮೊಬೈಲ್ ಫಿಲಾಟ್ಲೆ ಪ್ರದರ್ಶನ
* ಮಕ್ಕಳ ಭಾವಚಿತ್ರಗಳನ್ನು ಬಳಸಿಕೊಂಡು ಮೈ ಸ್ಟಾಂಪ್ ತಯಾರಿಸಿ ಅದರ ಬಗ್ಗೆ ಮಾಹಿತಿ ನೀಡುವುದು
* ಅಂಚೆ ಕಚೇರಿಯ ವಿವಿಧ ವಿಭಾಗಗಳ ಕಾರ್ಯ ವೈಖರಿ ಪರಿಚಯ ಮಾಡಿಸುವುದು
*ಅಕ್ಟೋಬರ್ 12ರಂದು ಗಾಂಧಿ ಭಾವಚಿತ್ರವಿರುವ ಹೊಸ ಸ್ಟಾಂಪ್ ಬಿಡುಗಡೆ
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications