ಅಂಚೆ ಇಲಾಖೆಯಿಂದ 'ನ್ಯಾಷನಲ್ ಪೋಸ್ಟಲ್ ವೀಕ್'
ಬೆಂಗಳೂರು, ಅಕ್ಟೋಬರ್, 10 : ನಾಗರಿಕ ಸಂವಹನ ಪ್ರಪಂಚದ ಮುಖ್ಯ ಭಾಗವಾಗಿರುವ ಅಂಚೆ ಇಲಾಖೆ ಅಕ್ಟೋಬರ್ 9ರ ಶುಕ್ರವಾರದಿಂದ 'ರಾಷ್ಟ್ರೀಯ ಪೋಸ್ವಲ್ ವೀಕ್' ಆರಂಭಿಸಿದೆ. ಇದರ ಪ್ರಯುಕ್ತ ಅಕ್ಟೋಬರ್ 10ರ ಶನಿವಾರ ಶಾಲಾ ಮಕ್ಕಳಿಗೆ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ವಿವಿಧ ಶಾಲಾ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ವ್ಯಕ್ತಪಡಿಸಿದರು.
ಅಂಚೆ ಇಲಾಖೆ 160 ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪೋಸ್ವಲ್ ವೀಕ್ ಪ್ರಾರಂಭಿಸಿದೆ. ಈ ನಿಮಿತ್ತ ನಗರದ ಅಂಬೇಡ್ಕರ್ ರಸ್ತೆಯ ಪ್ರಧಾನ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಗರಾದ್ಯಂತ ಪತ್ರ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ.[ರಾಮಾಯಣ, ಮಹಾಭಾರತದ ಕತೆ ಹೇಳಲಿವೆ ಅಂಚೆ ಚೀಟಿಗಳು]

ಅಕ್ಟೋಬರ್ 13ರ ಮಂಗಳವಾರ ಆಯ್ದ ಶಾಲೆಗಳಿಗೆ ತೆರಳಿ ಅಂಚೆ ಚೀಟಿ ಸಂಗ್ರಹಣೆ, ಇದರ ಉಪಯೋಗ, ಸಂಗ್ರಹಿಸುವುದು ಹೇಗೆ ಎಂಬುದರ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡಲಾಗುವುದು. ಪೋಸ್ಟಲ್ ನ ಕುರಿತಾಗಿ ಸಮಗ್ರ ಜ್ಞಾನವನ್ನು ಜನರಿಗೆ ಹಾಗೂ ಮಕ್ಕಳಿಗೆ ನೀಡುವುದರ ಮೂಲಕ ಪತ್ರ ಸಂಸ್ಕೃತಿ ಜಾಗೃತಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೆಚ್ಚುವರಿ ಮುಖ್ಯ ಪೋಸ್ಟ್ ಮಾಸ್ಟರ್ ದಿನೇಶ್ ಖರೆ ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ 10.30ಕ್ಕೆ ಜಿಪಿಒ ಕಚೇರಿಯಿಂದ ಕಬ್ಬನ್ ಪಾರ್ಕಿನಲ್ಲಿ ಕೇಂದ್ರ ಗ್ರಂಥಾಲಯದವರೆಗೆ 'ವಾಕ್ ಆಂಡ್ ಟಾಕ್' ಜಾಥಾ ಹಮ್ಮಿಕೊಂಡಿದ್ದು, ಮಕ್ಕಳಿಗೆ ಪತ್ರ ಬರೆಸಲಾಗುತ್ತದೆ. ಈ ಜಾಥಾದಲ್ಲಿ ಸುಮಾರು 80 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಜಿಪಿಒ ಸದಸ್ಯರು ಭಾಗವಹಿಸುತ್ತಾರೆ.[ಅಂಚೆ ಇಲಾಖೆಯ ವಿಶೇಷ ಲಕೋಟೆ ಕೊಂಡುಕೊಳ್ಳಿ]

ಪೋಸ್ಟಲ್ ಹಮ್ಮಿಕೊಂಡ ಕಾರ್ಯಕ್ರಮಗಳು :
* ಸಾರ್ವಜನಿಕರೊಂದಿಗೆ ನೇರ ಸಂವಾದ
* ವಿವಿಧ ಶಾಲೆಗಳಿಗೆ ಪೋಸ್ಟಲ್ ಅಧಿಕಾರಿಗಳ ಭೇಟಿ, ಅಂಚೆ ಕಚೇರಿ ಸೇವೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು
* ಜಿಪಿಒ(Jeneral post office) ಸಿಬ್ಬಂದಿಗೆ ಕೌಶಲ ಕಾರ್ಯಾಗಾರ
* ಉಳಿತಾಯ, ಬ್ಯಾಂಕ್ ಕ್ಯಾಂಪ್, ಫಿಲಾಟ್ಲೆ ದಿನ, ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಡೇ, ಬ್ಯುಸಿನೆಸ್ ಡೆವಲಪ್ ಮೆಂಟ್
* ಹಿಂದುಳಿದ ಶಾಲೆಗಳಿಗೆ ತೆರಳಿ ಮೊಬೈಲ್ ಫಿಲಾಟ್ಲೆ ಪ್ರದರ್ಶನ
* ಮಕ್ಕಳ ಭಾವಚಿತ್ರಗಳನ್ನು ಬಳಸಿಕೊಂಡು ಮೈ ಸ್ಟಾಂಪ್ ತಯಾರಿಸಿ ಅದರ ಬಗ್ಗೆ ಮಾಹಿತಿ ನೀಡುವುದು
* ಅಂಚೆ ಕಚೇರಿಯ ವಿವಿಧ ವಿಭಾಗಗಳ ಕಾರ್ಯ ವೈಖರಿ ಪರಿಚಯ ಮಾಡಿಸುವುದು
*ಅಕ್ಟೋಬರ್ 12ರಂದು ಗಾಂಧಿ ಭಾವಚಿತ್ರವಿರುವ ಹೊಸ ಸ್ಟಾಂಪ್ ಬಿಡುಗಡೆ
-
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ












Click it and Unblock the Notifications