ನಾರಾಯಣ ಹೆಲ್ತ್- ಮಜೂಂದರ್ ಶಾ ಪ್ರತಿಷ್ಠಾನದಿಂದ ಸ್ಟಾರ್ಟ್ಅಪ್ಗಳಿಗೆ ನೆರವು
ಬೆಂಗಳೂರು, ಜೂನ್ 12: ನಾರಾಯಣ ಹೆಲ್ತ್, ಮಜೂಂದರ್ ಶಾ ವೈದ್ಯಕೀಯ ಪ್ರತಿಷ್ಠಾನದೊಂದಿಗೆ ಜತೆ ಸೇರಿ ಜಾಗತಿಕ ವೇಗವರ್ಧಕ ಸಂಸ್ಥೆಯಾದ ದ ಗೈನ್ ಮತ್ತು ದಕ್ಷಿಣ ಕೊರಿಯಾದ ಸ್ಟಾರ್ಟ್ ಅಪ್ ಪಿಕ್ಸೆಲ್ ಡಿಸ್ಪ್ಲೇ ಜತೆಗೆ ಒಡಂಬಡಿಕೆಗೆ ಸಹಿ ಮಾಡಿವೆ.
ಈ ಪಾಲುದಾರಿಕೆಯಿಂದಾಗಿ ನಾರಾಯಣ ಹೆಲ್ತ್ ಮತ್ತು ಮಜೂಂದರ್ ಶಾ ವೈದ್ಯಕೀಯ ಪ್ರತಿಷ್ಠಾನ ಮಾರ್ಗಸೂಚಿಯನ್ನು ಒದಗಿಸಲಿದ್ದು, ಜತೆಗೆ ಆರೋಗ್ಯಸೇವಾ ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್ಅಪ್ ಕಂಪನಿಗಳು ತಮ್ಮ ಅನುಶೋಧನೆಯನ್ನು ದೃಢೀಕರಿಸಲು ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಿಕೊಡಲಿವೆ.
ಈ ಪಾಲುದಾರಿಕೆಯ ಅಂಗವಾಗಿ, ಪಿಕ್ಸೆಲ್ ಡಿಸ್ಪ್ಲೇ ಉತ್ಪನ್ನಗಳು ನಾರಾಯಣ ಹೆಲ್ತ್ ಸಿಟಿಯಲ್ಲಿ ಮಾರುಕಟ್ಟೆ ದೃಢೀಕರಣಗೊಳ್ಳುವ ಕಠಿಣ ಪ್ರಕ್ರಿಯೆಗೆ ಒಳಗೊಳ್ಳಲಿವೆ. ಪಿಕ್ಸೆಲ್ ಡಿಸ್ಪ್ಲೇ ದಕ್ಷಿಣ ಕೊರಿಯಾದ ಒಂದು ವಿನೂತನ ಕಂಪನಿಯಾಗಿದ್ದು, ಕೃತಕ ಬುದ್ಧಿಮತ್ತೆ ಆಧರಿತ ಮೊಬೈಲ್ ಮಕ್ಕಳ ದೃಷ್ಟಿಶಾಸ್ತ್ರ ಪರೀಕ್ಷಾ ಪರಿಹಾರವನ್ನು ಒದಗಿಸುತ್ತದೆ. ಇದು ಕಿಝೋಪ್ಟರ್ ಎನ್ನುವ ವಿನೂತನ ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಈ ತಂತ್ರಜ್ಞಾನವು ಮಕ್ಕಳ ನಿಖರ ಹಾಗೂ ಕ್ಷಿಪ್ರ ನೇತ್ರ ಪರೀಕ್ಷೆಗೆ ಅನುವು ಮಾಡಿಕೊಡುತ್ತದೆ ಹಾಗೂ ಇದಕ್ಕೆ ಮೊಬೈಲ್ ಹೊರತುಪಡಿಸಿ ಯಾವುದೇ ಹೆಚ್ಚುವರಿ ಹಾರ್ಡ್ವೇರ್ ಗಳು ಬೇಕಿಲ್ಲ.

ಈ ಪಾಲುದಾರಿಕೆಯ ಅಂಗವಾಗಿ, ಪಿಕ್ಸೆಲ್ ಡಿಸ್ಪ್ಲೇ ಉತ್ಪನ್ನಗಳು ನಾರಾಯಣ ಹೆಲ್ತ್ ಸಿಟಿಯಲ್ಲಿ ಮಾರುಕಟ್ಟೆ ದೃಢೀಕರಣಗೊಳ್ಳುವ ಕಠಿಣ ಪ್ರಕ್ರಿಯೆಗೆ ಒಳಗೊಳ್ಳಲಿವೆ. ಪಿಕ್ಸೆಲ್ ಡಿಸ್ಪ್ಲೇ ದಕ್ಷಿಣ ಕೊರಿಯಾದ ಒಂದು ವಿನೂತನ ಕಂಪನಿಯಾಗಿದ್ದು, ಕೃತಕ ಬುದ್ಧಿಮತ್ತೆ ಆಧರಿತ ಮೊಬೈಲ್ ಮಕ್ಕಳ ದೃಷ್ಟಿಶಾಸ್ತ್ರ ಪರೀಕ್ಷಾ ಪರಿಹಾರವನ್ನು ಒದಗಿಸುತ್ತದೆ. ಇದು ಕಿಝೋಪ್ಟರ್ ಎನ್ನುವ ವಿನೂತನ ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಈ ತಂತ್ರಜ್ಞಾನವು ಮಕ್ಕಳ ನಿಖರ ಹಾಗೂ ಕ್ಷಿಪ್ರ ನೇತ್ರ ಪರೀಕ್ಷೆಗೆ ಅನುವು ಮಾಡಿಕೊಡುತ್ತದೆ ಹಾಗೂ ಇದಕ್ಕೆ ಮೊಬೈಲ್ ಹೊರತುಪಡಿಸಿ ಯಾವುದೇ ಹೆಚ್ಚುವರಿ ಹಾರ್ಡ್ವೇರ್ ಗಳು ಬೇಕಿಲ್ಲ.
ಮಜೂಂದರ್ ಶಾ ವೈದ್ಯಕೀಯ ಕೇಂದ್ರವು ನಾರಾಯಣ ಹೆಲ್ತ್ ನ ಒಂದು ಘಟಕವಾಗಿದ್ದು, ಮಜೂಂದರ್ ಶಾ ಸೆಂಟರ್ ಫಾರ್ ಟ್ರಾನ್ಸಿಷನಲ್ ರೀಸರ್ಚ್ (ಎಂಎಸ್ಸಿಟಿಆರ್), ಮಜೂಂದರ್ ಶಾ ಕ್ಯಾನ್ಸರ್ ಔಟ್ರೀಚ್ ಪ್ರೋಗ್ರಾಂ (ಎಂಎಸ್ಸಿಓಪಿ) ಮತ್ತು ಅಂತರರಾಷ್ಟ್ರೀಯ ತಂತ್ರಜ್ಞಾನ ವರ್ಗಾವಣೆ ಉದ್ಯಮಶೀಲತೆ ಮತ್ತು ಅನುಶೋಧನಾ ಸಂಸ್ಥೆ,, ತಂತ್ರಜ್ಞಾನ ವ್ಯವಹಾರ ಪಾಲನಾ ಕೇಂದ್ರ (ಟಿಬಿಐ ಘಟಕ)ಗಳು ಪ್ರಸ್ತುತ ಮಜೂಂದರ್ ಶಾ ವೈದ್ಯಕೀಯ ಪ್ರತಿಷ್ಠಾನ ಪರಿಸರದ ನಾಲ್ಕು ಪ್ರಮುಖ ಆಧಾರಸ್ತಂಭಗಳಾಗಿವೆ.
ದ ಗೈನ್ ಎನ್ನುವುದು ಜಾಗತಿಕ ವೇಗರ್ವಧಕ ಸಂಸ್ಥೆಯಾಗಿದ್ದು, ತಂತ್ರಜ್ಞಾನ ಸ್ಟಾರ್ಟ್ಅಪ್ಗಳ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡುತ್ತದೆ. ಈ ಮೂಲಕ ಅವುಗಳು ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ದ ಗೈನ್ ಇದೀಗ ಆಕ್ಸೆಸ್ ಟೂ ಇಂಡಿಯಾ (ಎ21) ಯೋಜನೆಯನ್ನು ಜಾರಿಗೊಳಿಸಿದ್ದು, ಇದು ಜಾಗತಿಕ ಸ್ಟಾರ್ಟ್ಅಪ್ಗಳು ಭಾರತೀಯ ಮಾರುಕಟ್ಟೆಗೆ ಸ್ಟಾರ್ಟ್ಅಪ್ಗಳು ತೆರೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಇದಕ್ಕೆ ಅನುಕೂಲಕರವಾಗುವಂತೆ ಪ್ರಬಲವಾದ ಮಾರ್ಗದರ್ಶಕರು, ಕಾರ್ಪೊರೇಟ್ ಸಂಸ್ಥೆಗಳು, ಹೂಡಿಕೆದಾರರು ಮತ್ತು ಪಾಲುದಾರರ ಜಾಲವನ್ನು ರೂಪಿಸಲು ನೆರವು ನೀಡುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications