Namma Metro Yellow Line: ಈ ಮಾರ್ಗದಲ್ಲಿ ಅಕ್ಕ-ಪಕ್ಕ ಮನೆಗಳ ಬಾಡಿಗೆ ದರ ಏರಿಕೆ, ಏಕೆ ಗೊತ್ತಾ?
ಬೆಂಗಳೂರು, ಜುಲೈ 02: ಐಟಿ ಕೇಂದ್ರವಾಗಿ, ಮಟ್ರೋ ಸಂಚಾರವಿರುವ ಮಹಾನಗರವಾಗಿ ದಿನೇ ದಿನೆ ಬೆಳವಣಿಗೆ ಹೊಂದುತ್ತಿರುವ ರಾಜಧಾನಿ ಬೆಂಗಳೂರು ದುಬಾರಿಯು ಆಗುತ್ತಿದೆ. ಹೌದು, ಇಲ್ಲಿ ನೆಲೆಗೊಳ್ಳಬೇಕಾದರೆ ಲಕ್ಷ ಲಕ್ಷ ಸಂಬಳ ಇದ್ದರೆ ಮಾತ್ರವೇ ಸಾಧ್ಯ ಎಂಬಂತಹ ಸ್ಥಿತಿ ಎದುರಾಗಿದೆ.
ಇದಕ್ಕೆ ಪ್ರಮುಖ ಕಾರಣವೇನೆಂದರೆ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ವಿಸ್ತರಣೆ ಆದಂತೆಲ್ಲ ಮೆಟ್ರೋ ಲೈನ್ ಹೋಗಿರುವ ಅಕ್ಕಪಕ್ಕದ ಮನೆ ಬಾಡಿಗೆ, ಆಸ್ತಿ, ಕಟ್ಟಡ ಜೊತೆಗೆ ಬದುಕು ದುಬಾರಿ ಆಗುತ್ತಿದೆ. ಈ ಸಾಲಿಗೆ ಮೆಟ್ರೋ ಹಳದಿ ಮಾರ್ಗವು ಹೊಸದಾಗಿ ಸೇರ್ಪಡೆಗೊಳ್ಳಲಿದೆ.

ಹೌದು, ಬಹುನಿರೀಕ್ಷೆಯ ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line)ವು ಈ ವರ್ಷಾಂತ್ಯಕ್ಕೆ ತೆರೆದುಕೊಳ್ಳಲಿದೆ. ಈ ಸಂಬಂಧ ಆರ್ವಿ ರಸ್ತೆ ಮತ್ತು ಬೊಮ್ಮಸಂದ್ರವರೆಗಿನ ಈ ಹಳದಿ ಮಾರ್ಗದಲ್ಲಿ ಮನೆ ಬಾಡಿಗೆ, ಆಸ್ತಿಗಳ ಮೌಲ್ಯ ಹೆಚ್ಚಾಗುತ್ತಲೇ ಇದೆ. ಇದು ಮಧ್ಯಮ ವರ್ಗದವರಿಗೆ ಶಾಕ್ ನೀಡುತ್ತಿದೆ.
ಅಂತಿಮ ಹಂತದತ್ತ ಹಳದಿ ಮಾರ್ಗದ ಕೆಲಸ
ಸದ್ಯ ಬೆಂಗಳೂರು ಮೆಟ್ರೋ ಹಳದಿ ಮಾರ್ಗದಲ್ಲಿ ಕಳೆದ ಕೆಲವು ದಿನಗಳಿಂದ ಸಿಗ್ನಲಿಂಗ್ ಪರೀಕ್ಷೆಗಳು ಆರಂಭಗೊಂಡಿದ್ದವು. ಆರಂಭ ರೈಲುಗಳು ಸಂಚಾರ ಪರೀಕ್ಷೆ ನಡೆಯಿತು. ಇದರೊಂದಿಗೆ ವಯಡಕ್ಟ್ ಮೂಲಕ ಹಳಿಗೆ ವಿದ್ಯುತ್ ಪೂರೈಕೆ ನಂತರ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲಾಯಿತು.
ಬೆಂಗಳೂರು ಇಡೀ 73 ಕಿಲೋ ಮೀಟರ್ ಜಾಲದಲ್ಲಿಯೇ ಈ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ (Driverless metro rail) ರೈಲುಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪರಿಚಯಿಸಿದೆ. ಇದರ ಬೆನ್ನಲ್ಲೆ ಮೊದಲ ಚಾಲಕ ರಹಿತ ರೈಲಿನ ಡೈನಾಮಿಕ್ ಸಿಗ್ನಲಿಂಗ್ ಪರೀಕ್ಷೆಗಳು ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸೋಮವಾರ (ಜುಲೈ 1) ಆರಂಭಗೊಂಡಿದೆ.

ಸಿಗ್ನಲಿಂಗ್ ಪರೀಕ್ಷೆಗೆ 2.5 ತಿಂಗಳು ಬೇಕು
ಈ ಕುರಿತು BMRCL ಅಧಿಕಾರಿಗಳೇ ಖುದ್ದು ಮಾಹಿತಿ ನೀಡಿದ್ದು, ಹಳದಿ ಮಾರ್ಗದಲ್ಲಿ ಕಳೆದ ತಿಂಗಳು ಜೂನ್ 13 ರಿಂದ ಪ್ರಾಥಮಿಕ ಚಟುವಟಿಕೆಗಳು ಆರಂಭಿಸಲಾಗಿದೆ. ಈ ಮೊದಲೇ ಯೋಜಿಸಿದಂತೆ, ನಾವು ಇಂದು ಮಧ್ಯಾಹ್ನ 3 ಗಂಟೆಗೆ ಡೈನಾಮಿಕ್ ಸಿಗ್ನಲಿಂಗ್ ಪರೀಕ್ಷೆಗಳನ್ನು ಪ್ರಾರಂಭಿಸಿದ್ದೇವೆ. ಇದದರಲ್ಲಿ ಹಲವು ರೀತಿಯ ಪರೀಕ್ಷೆಗಳನ್ನು ನಡೆಸಬೇಕಿದ್ದು, ಇದು ಪೂರ್ಣಗೊಳ್ಳಲು 2.5 ತಿಂಗಳು ಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವಾಗ ಸಿಗ್ನಲಿಂಗ್ ಪರೀಕ್ಷೆ ಪೂರ್ಣಗೊಳ್ಳಲಿದೆ ಎಂದು ಖಚಿತ ಮಾಹಿತಿಗೆ ಇನ್ನೂ ಒಂದೂವರೆ ತಿಂಗಳು ಕಾಯಬೇಕಿದೆ. ಸದ್ಯ ಮುಂದಿನ ಸುಮಾರು 15 ದಿನ ಏಕೀಕರಣ ಪರೀಕ್ಷೆಗಳು ನಡೆಯಲಿವೆ. ಬಹು ರೈಲು ಸಂಚಾರ, ಸಿಗ್ನಲಿಂಗ್ ಸುಸೂತ್ರ ಪೂರೈಕೆಯ ಪರೀಕ್ಷೆಗಳಿಗೆ ಮತ್ತೆ 10 ದಿನ ಹಿಡಿಯುತ್ತದೆ ಎಂದು ಅವರು ತಿಳಿಸಿದರು.
ಸಿಗ್ನಲಿಂಗ್ ಪರೀಕ್ಷೆ ಆದ ಬಳಿಕ, ಅಂತಿಮ ಪ್ರಾಯೋಗಿಕ ಸಂಚಾರ ಎಲ್ಲವು ಯಶಸ್ವಿಯಾದ ಬಳಿಕ ಬಹುನಿರೀಕ್ಷೆಯ ಈ ಮೆಟ್ರೋ ಹಳದಿ ಮಾರ್ಗವು ಡಿಸೆಂಬರ್ 2024ರ ವೇಳೆಗೆ ವಾಣಿಜ್ಯ ಕಾರ್ಯಾಚರಣೆ ನಡೆಸಲಿದೆ. ಇದು ಡ್ರೈವರ್ ಲೆಸ್ ರೈಲು ಆದರೂ ಸಹ ಆರಂಭಿಕವಾಗಿ ಚಾಲಕ ಸಹಿತವಾಗಿ ಓಡಿಸಲು BMRCL ತೀರ್ಮಾನಿಸಿದೆ.
ಸದ್ಯ ಬಹುದಿನಗಳಿಂದ ಕಾಯುತ್ತಿದ್ದ ಬೆಂಗಳೂರ ಮಂದಿಗೆ ನಮ್ಮ ಮೆಟ್ರೋ ಅಧಿಕಾರಿಗಳು ಶುಭ ಸುದ್ದಿಯನ್ನೇ ಕೊಟ್ಟಿದ್ದಾರೆ. ಮುಂದಿನ ಕೇಲವೇ ತಿಂಗಳಲ್ಲಿ ಲಕ್ಷಾಂತರ ಜನರು ಈ ಹಳದಿ ಮಾರ್ಗದಲ್ಲಿ ಸಂಚಾರ ನಡೆಸಲಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications