Namma Metro:ರೈಲ್ವೆ ಹಳಿಗೆ ಅಡ್ಡಲಾಗಿ ವೆಬ್ ಗರ್ಡರ್ ನಿರ್ಮಿಸಿದ BMRCL, ಏನಿದು?
ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ ಗೆ ಸಂಪರ್ಕ ಸಾಧಿಸುವ ಮೆಟ್ರೊ ರೈಲು ಮಾರ್ಗಕ್ಕೆ ಸೃಷ್ಟಿಯಾಗಿದ್ದ ರೈಲ್ವೆ ಹಳಿ ಗರ್ಡ್ರ್ ಸಮಸ್ಯೆ ಪರಿಹಾರವಾಗಿದೆ. ಉಂಟಾಗಿದ್ದ ಸಮಸ್ಯೆ ಏನು, ಪರಿಹಾರ ಯಾವುದು ತಿಳಿಯಿರಿ.
ಬೆಂಗಳೂರು, ಫೆಬ್ರುವರಿ 03: ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ ಗೆ ಸಂಪರ್ಕ ಸಾಧಿಸುವ ಮೆಟ್ರೊ ರೈಲು ಮಾರ್ಗಕ್ಕೆ ಸೃಷ್ಟಿಯಾಗಿದ್ದ ರೈಲ್ವೆ ಹಳಿ ಗರ್ಡ್ರ್ ಸಮಸ್ಯೆ ಪರಿಹಾರವಾಗಿದೆ. ಇತ್ತೀಚೆಗಷ್ಟೇ ಆರಂಭಿಸಲಾಗಿದ್ದ ವೆಬ್ ಗರ್ಡರ್ ಕಾಮಗಾರಿ ಪೂರ್ಣಗೊಳಿಸಿ ಅದನ್ನು ಶುಕ್ರವಾರ ತೆರೆಯಲಾಗಿದೆ.
ಬೆನ್ನಿಗಾನಹಳ್ಳಿ ಬಳಿ ಹಾದುಹೋಗಿರುವ ಸೇಲಂ ರೈಲ್ವೆ ಮಾರ್ಗ ಮೇಲ್ಭಾಗದಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಒಟ್ಟು 65 ಮೀಟರ್ ಉದ್ದದ ವೆಬ್ ಗರ್ಡರ್ ನಿರ್ಮಿಸಿದೆ. ನಮ್ಮ ಮೆಟ್ರೊ ಮಾರ್ಗದಲ್ಲಿ ಅಳವಡಿಕೆ ಆದ ಅತಿ ಉದ್ದದ ವೆಬ್ ಗರ್ಡರ್ ಇದಾಗಿದೆ. ಸುರಕ್ಷತೆ ಸಂಬಂಧ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿ ಈ ವೆಬ್ ಗರ್ಡರ್ ಸ್ಥಾಪಿಸಲಾಗಿದ್ದು, ಇದೀಗ ಅದನ್ನು ತೆರೆಯಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ರೈಲ್ವೆ ವಿಭಾಗದ ಅನುಮತಿಸಿದ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ. ರೈಲು ಸುಗಮ ಸಂಚಾರಕ್ಕಾಗಿ ವೆಬ್ ಗರ್ಡರ್ ಕೆಳಭಾಗದಲ್ಲಿ ಒಟ್ಟು 845 ಮೀಟರ್ ಅಂತರ ಇಡಲಾಗಿದೆ.

ವೆಬ್ ಗರ್ಡರ್ ಪೂರ್ತಿ ವಿವರ
ಸ್ಪ್ಯಾನ್ ಉದ್ದ 65 ಮೀಟರ್
ಓಪನ್ ವೆಬ್ ಗರ್ಡರ್ ಉದ್ದ 63.225 ಮೀಟರ್
ಓಪನ್ ವೆಬ್ ಗರ್ಡರ್ ಒಟ್ಟು ಅಗಲ 11.450 ಮೀಟರ್
ಓಪನ್ ವೆಬ್ ಗರ್ಡರ್ ಒಟ್ಟ ಎತ್ತರ 9.650ಮೀಟರ್
ಓಪನ್ ವೆಬ್ ಗರ್ಡರ್ ತೂಕ 550 ಮಿಲಿಯನ್ ಟನ್
ವೆಬ್ ಗರ್ಡರ್ಗೆ ಬಳಸಿದ ಬೇರಿಂಗ್ ಮಾದರಿ ಸ್ಪೀರಿಕಲ್ ಬೇರಿಂಗ್

ಬೆನ್ನಿಗಾನಹಳ್ಳಿ ಬಳಿ ನೀಲಿ (ವಿಮಾನ ನಿಲ್ದಾಣ ಮಾರ್ಗ), ನೇರಳೆ ಮಾರ್ಗಗಳೆರಡೂ ಹಾದು ಹೋಗಲು ಪಿಲ್ಲರ್ಗಳ ಮೇಲೆ ಕಬ್ಬಿಣದ ಗರ್ಡರ್ ಅಳವಡಿಕೆ ಅಗತ್ಯವಿತ್ತು. ಇದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ.ಗೆ ಸವಾಲಿನ ಕೆಲಸವಾಗಿತ್ತು. ಇದೀಗ ಆ ಸಮಸ್ಯೆಗೆ ಪರಿಹಾರ ದೊರೆತಿದೆ. ಮೊದಲ ಹಂತದಲ್ಲಿ ಕೆ.ಆರ್.ಪುರದಿಂದ ವೈಟ್ಫೀಲ್ಡ್ ತನಕದ ಮಾರ್ಗ 2023ರ ಜೂನ್ ವೇಳೆಗೆ ಸಾರ್ವಜನಿಕ ಪ್ರಯಾಣಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
-
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ











Click it and Unblock the Notifications