Namma metro: ನಮ್ಮ ಮೆಟ್ರೋದಲ್ಲಿ 2ನೇ ಮಹಿಳಾ ಕೋಚ್ಗೆ ಹೆಚ್ಚಿದ ಬೇಡಿಕೆ, ಯಾವ ಮಾರ್ಗದಲ್ಲಿ? -ಮಾಹಿತಿ
ಬೆಂಗಳೂರು, ನವೆಂಬರ್, 24: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಮೂಲಕ ಮೆಟ್ರೋ ಜನಪ್ರಿಯತೆಯನ್ನು ಪಡೆಯುತ್ತಲೇ ಇದೆ. ಹಾಗೆಯೇ ಮೆಟ್ರೋದಲ್ಲಿ ಮಹಿಳೆಯರಿಗಂತಲೇ ಮೀಸಲಿಟ್ಟ ಕೋಚ್ ತುಂಬಿ ತುಳುಕುತ್ತಲೇ ಇದೆ. ಆದ್ದರಿಂದ 2ನೇ ಮಹಿಳಾ ಕೋಚ್ ನಿಧಿಪಡಿಸುವಂತೆ ಬೇಡಿಕೆಗಳು ಕೇಳಿಬರುತ್ತಿವೆ. ಯಾವ ಮಾರ್ಗದಲ್ಲಿ ಈ ಬೇಡಿಕೆ ಹೆಚ್ಚಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಒಂದು ಕಾಲದಲ್ಲಿ ವಿಶ್ರಾಂತಿ ಮತ್ತು ಆರಾಮದಾಯಕ ಆಗಿದ್ದ ಪ್ರಯಾಣವಾಗಿದ್ದ ನಮ್ಮ ಮೆಟ್ರೋದ ಸವಾರಿ ಈಗ, ಅದರಲ್ಲೂ ನೇರಳೆ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಉಸಿರುಗಟ್ಟುವ ವಾತಾವರಣದಲ್ಲಿ ಪ್ರಯಾಣಿಸುವಂತದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಆರ್ ಪುರ-ಬೈಯಪ್ಪನಹಳ್ಳಿ ಮಾರ್ಗ ಆರಂಭವಾಗಿ 45 ದಿನಗಳಷ್ಟೇ ಕಳೆದಿವೆ. ನವೆಂಬರ್ನಲ್ಲಿ ದಿನಕ್ಕೆ ಸರಾಸರಿ 6.5 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಆದರೆ 73.81 ಕಿಲೋ ಮೀಟರ್ ಮಾರ್ಗವನ್ನು ಕವರ್ ಮಾಡಲು ಕೇವಲ 52 ರೈಲುಗಳು ಮಾತ್ರ ಇವೆ. ಸದ್ಯ ಇದಕ್ಕೆ ಯಾವುದೇ ಬೇರೆ ಪರಿಹಾರ ಇಲ್ಲದಂತಾಗಿದೆ.
ಪ್ಲಾಟ್ಫಾರ್ಮ್ಗಳಲ್ಲಿ ಇರುವ ಭದ್ರತಾ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಸ್ ರೈಲುಗಳ ಒಳಗೆ ಮತ್ತು ಹೊರಗೆ ಹೋಗುವ ಜನಸಂದಣಿಯನ್ನು ನಿಯಂತ್ರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಿಬ್ಬಂದಿ ಸ್ವಯಂ ಚಾಲಿತ ಬಾಗಿಲುಗಳನ್ನು ಮುಚ್ಚಲು ಜನರನ್ನು ತಳ್ಳಬೇಕಾಗುತ್ತಿದೆ.
ಅನೇಕ ನಿಲ್ದಾಣಗಳಲ್ಲಿ, ಬೋಗಿಗಳೊಳಗಿನ ಪ್ರಯಾಣಿಕರು ಹತ್ತಲು ಪ್ರಯತ್ನಿಸುವವರಿಗೆ ಜಾಗ ಇಲ್ಲ ಎಂದು ಕಿರುಚುತ್ತಾರೆ. ಪ್ರತಿ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಹತ್ತಲು ವಿಫಲರಾದವರು ಮುಂದಿನ ರೈಲಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊದಲು ಪ್ರತಿ ರೈಲಿನಲ್ಲಿ ಮಹಿಳೆಯರಿಗೆ ಮತ್ತೊಂದು ಕೋಚ್ ಮೀಸಲಿಡಿ. ಅವರು ನಜ್ಜುಗುಜ್ಜಾಗುವ ರೀತಿಯನ್ನು ನೋಡಿದರೆ ನನಗೆ ದುಃಖ ಆಗುತ್ತದೆ. ಮೆಟ್ರೋದಲ್ಲಿ ಈ ರೀತಿ ಪ್ರಯಾಣ ಮಾಡಲು ಹೇಗೆ ಅನುಮತಿಸಲಾಗಿದೆ? 80 ಮತ್ತು 90ರ ದಶಕದಲ್ಲಿ ಬಿಟಿಎಸ್ ಬಸ್ಗಳಲ್ಲಿ ಈ ರೀತಿಯ ದೃಶ್ಯಗಳು ಕಂಡು ಬರುತ್ತಿದ್ದವು ಎಂದು ಹಿರಿಯ ನಾಗರಿಕ ರಾಕೇಶ್ ಗೌಡ ಅವರು ಹೇಳಿದ್ದಾರೆ ಎಂದಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪೀಕ್ ಅವರ್ನಲ್ಲಿ ಮಹಿಳಾ ಕೋಚ್ನಲ್ಲಿ ಒಂದು ಇಂಚು ಕೂಡ ಜಾಗ ಇರುವುದಿಲ್ಲ. ಆದ್ದರಿಂದ ನಾನು ಜನರಲ್ ಕೋಚ್ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಕಳೆದ ಒಂದು ತಿಂಗಳಿನಿಂದ ತುಂಬಾ ಕಷ್ಟಪಟ್ಟು ಪ್ರಯಾಣ ಮಾಡುತ್ತಿದ್ದೇನೆ ಎಂದು ಎಂಜಿ ರಸ್ತೆಯಿಂದ ದೀಪಾಂಜಲಿ ನಗರಕ್ಕೆ ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರಿಬ್ಬರು ಹೇಳಿದ್ದಾರೆ ಅಂತಾ ವರದಿ ಮಾಡಿದೆ.
ವಿಧಾನಸೌಧದಿಂದ ಜಯನಗರದ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದ ಮೂವರು ಸಹೋದ್ಯೋಗಿಗಳು ಕೆಂಪೇಗೌಡ ಇಂಟರ್ಚೇಂಜ್ ನಿಲ್ದಾಣದಲ್ಲಿ ರೈಲು ಬದಲಾಯಿಸಲು ಬರುತ್ತಿದ್ದವರನ್ನು ಮಾತನಾಡಿಸಿದ TNIE,ನಿಮಗೆ ಕುಳಿತುಕೊಳ್ಳಲು ಸ್ಥಳವಿದೆಯೇ ಎಂದು ಕೇಳಿದಾಗ, ಅವರು ನಗಲು ಪ್ರಾರಂಭಿಸಿದರು.
ನಮಗೆ ನಿಲ್ಲಲು ಸಹ ಒಂದು ಇಂಚು ಜಾಗವಿರುವುದಿಲ್ಲ. ಆಸನದ ಬಗ್ಗೆ ಯೋಚಿಸುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಸರ್ಕಾರಕ್ಕೆ ಒಂದೇ ಒಂದು ಮನವಿ, ಅದೇನೆಂದರೆ ದಯವಿಟ್ಟು ರೈಲುಗಳ ನಡುವಿನ ಸಮಯವನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ ಅಂತಾ ವರದಿ ಮಾಡಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Namma Metro: ಏರ್ಪೋರ್ಟ್ ಮೆಟ್ರೋ ನೀಲಿ ಮಾರ್ಗಕ್ಕೆ ಬರಲಿವೆ 2 ಡ್ರವರ್ಲೆಸ್ ರೈಲು -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?











Click it and Unblock the Notifications