Get Updates
Get notified of breaking news, exclusive insights, and must-see stories!

ಡಿ.ಕೆ ಶಿವಕುಮಾರ್ 3 "ಕೆ" ಹೇಳಿಕೆ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ "ನಾಲ್ವಡಿ ಕೃಷ್ಣರಾಜ ಒಡೆಯರ್" ಕೊಡುಗೆ ವೈರಲ್!

ಬೆಂಗಳೂರಿಗರು ಹಾಗೂ ಕನ್ನಡಿಗರು ನಾಲ್ವಡಿ ಕೃಷ್ಣರಾಜ ಒಡೆಯರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಚೆಗೆ ಕೊಟ್ಟಿರುವ ಹೇಳಿಕೆ. ಡಿ.ಕೆ ಶಿವಕುಮಾರ್ ಅವರು ಈಚೆಗೆ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮದಲ್ಲಿ ಕೆಲವೊಂದು ವಿಚಾರಗಳನ್ನು ಮಾತನಾಡಿದ್ದರು. ಇದಾದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರು ಹಾಗೂ ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಸ್ಮರಿಸಲಾಗುತ್ತಿದೆ.

ಈಚೆಗೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಾವು 3 'ಕೆ'ಯನ್ನು ಸದಾ ನೆನಪಿಟ್ಟುಕೊಳ್ಳಬೇಕು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು, ವಿಕಾಸ ಸೌಧ ಹಾಗೂ ಉದ್ಯೋಗ ಸೌಧದ ನಿರ್ಮಾತೃ ಎಸ್.ಎಂ. ಕೃಷ್ಣ ಅವರು. ಇಡೀ ವಿಶ್ವಕ್ಕೆ ಬೆಂಗಳೂರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದಿದ್ದರು.

Nalvadi Krishnaraja Wodeyar contribution goes viral on social media after D K Shivakumar s 3 K statement

"ಕರ್ನಾಟಕ ವಿಶೇಷ" ಎನ್ನುವ ಪುಟದಿಂದ ಸೋಷಿಯಲ್ ಮೀಡಿಯಾದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿಶೇಷ ಬರಹವನ್ನು ಹಂಚಿಕೊಳ್ಳಲಾಗಿದೆ.

* ಬೆಂಗಳೂರಿಗೆ ಆಧುನಿಕತೆಯ ದಾರಿತೋರಿದ ಮಹಾನ್ ರಾಜರ್ಷಿ - ನಾಲ್ವಡಿ ಕೃಷ್ಣರಾಜ ಒಡೆಯರರು

* 1910 ರಿಂದ 1940ರವರೆಗೆ ಆಡಳಿತ ನಡೆಸಿದ ಈ ಮೈಸೂರಿನ ಮಹಾರಾಜರು, ಬೆಂಗಳೂರನ್ನು ಜ್ಞಾನ, ವಿಜ್ಞಾನ ಮತ್ತು ಬೆಳಕಿನ ನಗರವನ್ನಾಗಿ ರೂಪಿಸಿದವರು.

ಬೆಂಗಳೂರಿಗೆ ಅವರ ಪ್ರಮುಖ ಕೊಡುಗೆಗಳು:

🔹 Indian Institute of Science (#IISc) ಸ್ಥಾಪನೆ 1909 ಇದು ಬೆಂಗಳೂರನ್ನು ಶೈಕ್ಷಣಿಕ ಮತ್ತು ವಿಜ್ಞಾನ ಕೇಂದ್ರವನ್ನಾಗಿ ರೂಪಿಸಿತು. ಇಂದು ಐಐಎಸ್‌ಸಿ ಭಾರತದಲ್ಲಿನ ಅತ್ಯುತ್ತಮ ವಿಜ್ಞಾನ ಸಂಸ್ಥೆಗಳಲ್ಲಿ ಒಂದಾಗಿದೆ.

🔹 ಶಿವನ ಸಮುದ್ರ ವಿದ್ಯುತ್ ಯೋಜನೆ 1902 : ಇದು ಏಷ್ಯಾದ ಮೊದಲ ಜಲವಿದ್ಯುತ್ ಘಟಕ! ಇದರಿಂದಲೇ ಬೆಂಗಳೂರು ಜಾಗತಿಕವಾಗಿ ಮೊದಲನೆಯದಾಗಿ ವಿದ್ಯುತ್ ಪಡೆದ ನಗರಗಳ ಪೈಕಿ ಒಂದಾಯಿತು. ವಿದ್ಯುತ್‌ನಿಂದಲೇ ದೂರವಾಣಿ, ಟೆಲಿಗ್ರಾಫ್, ಟೈಪಿಂಗ್, ಕಂಪ್ಯೂಟಿಂಗ್ ಇತ್ಯಾದಿ ಕ್ಷೇತ್ರಗಳು ಬೆಳೆದವು. ನಂತರದ ದಶಕಗಳಲ್ಲಿ IT ಕಂಪನಿಗಳ ಪ್ರಾರಂಭಕ್ಕೂ ಇದು ಅಡಿಪಾಯವಾಯಿತು. ಇಂದು ಬೆಂಗಳೂರು IT-BT ಕೇಂದ್ರವಾಗಿ ಬೆಳೆದು ವಿಶ್ವದ ಗಮನ ಸೆಳೆಯುತ್ತಿದೆ.

🔹 ಬೆಂಗಳೂರಿನ ವೈದ್ಯಕೀಯ ಕಾಲೇಜುಗಳು: 1900ರ ದಶಕದಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಬೆಂಗಳೂರು ವೈದ್ಯಕೀಯ ಕಾಲೇಜು (BMC) ಸ್ಥಾಪನೆ. ಇಂದಿನ ಕರ್ನಾಟಕದ ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದೆ.

🔹 ಸಾರ್ವಜನಿಕ ಆರೋಗ್ಯಕ್ಕೆ ಬುನಾದಿ ಹಾಕಿದರು: ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆಗೆ ನೂತನ ತಂತ್ರಜ್ಞಾನ ಮತ್ತು ವೈದ್ಯರನ್ನು ಒದಗಿಸಿದರು.
🔹 ಉದ್ಯಮ, ಕಾರ್ಖಾನೆಗಳಿಗೆ ಪ್ರೋತ್ಸಾಹ - ಸೀರೆ, ತಂಬಾಕು, ಇಂಜಿನಿಯರಿಂಗ್ ಕ್ಷೇತ್ರಗಳಿಗೆ ಉತ್ತೇಜನ.

🔹 ಶಿಕ್ಷಣ, ವಿಶ್ವವಿದ್ಯಾನಿಲಯ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ.

ಇಂದಿನ ಬೆಂಗಳೂರು - ಟೆಕ್ ಹಬ್, ಶಿಕ್ಷಣ ಕೇಂದ್ರ, ವಿಜ್ಞಾನ ನಗರ... ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆದ ದಾರಿ, ಅವರ ದೃಷ್ಟಿಕೋನದಿಂದಲೇ ಮೊದಲುಗೊಂಡಿತು. ಅವರಿಗೆ ನಮ್ಮ ಕೋಟಿ ಕೋಟಿ ನಮನಗಳು ಎಂದು ಕರ್ನಾಟಕ ವಿಶೇಷ ಪುಟದಿಂದ ಹಂಚಿಕೊಳ್ಳಲಾಗಿತ್ತು. ಈ ಬರಹವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+