ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್
ಬೆಂಗಳೂರು, ಅ.3: ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ತಾಯಿ-ಮಗಳು ನಾಪತ್ತೆಯಾಗಿದ್ದು ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ಮಗಳು, ತಾಯಿ ಕುಷಾಲ ನಾಪತ್ತೆಯಾದವರು, ಕುಷಾಲ ಅವರು ಅವರ ಪತಿಗೆ ಕರೆ ಮಾಡಿ ತಮ್ಮ ಬಳಿ ಇದ್ದ ಹಣವನ್ನು ಯಾರೋ ಕದ್ದಿದ್ದಾರೆ ಎಂದು ಹೇಳಿದ್ದಾರೆ, ಅದರ ನಂತರ ಅವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ, ಯಾವ ಕಾರಣಕ್ಕಾಗಿ ಅಪಹರಣ ಮಾಡಲಾಗಿದೆ ಎನ್ನುವುದು ಕೂಡ ಇದುವರೆಗು ರಹಸ್ಯವಾಗಿಯೇ ಉಳಿದಿದೆ.
ಕುಷಾಲ ಅವರು ತೆಲಂಗಾಣದಲ್ಲಿದ್ದಾಗ ಕರೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಅಲ್ಲಿಗೆ ಹೋಗಿ ವಿಚಾರಿಸಿದರೂ ಯಾವುದೇ ಕುರುಹು ದೊರೆತಿಲ್ಲ. ಗೌರಕ್ ಅವರ ಪುತ್ರಿಯನ್ನು ರಾಹುಲ್ ಎಂಬ ಯುವಕ ಪ್ರೀತಿಸುತ್ತಿದ್ದ, ಆತ ತನ್ನ ಅಂಗಡಿಗೆ ಬರುತ್ತಿದ್ದ ಬಂದು ಆಕೆಯನ್ನು ಪರಿಚಯಿಸಿಕೊಂಡು ಪ್ರೀತಿಸುವಂತೆ ತಲೆ ಕೆಡಿಸಿದ್ದ, ಹೀಗಾಗಿ ಸಮಯ ನೋಡಿ ಅವರನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ದೂರು ನೀಡಲು ಅಶೋಕನಗರ ಪೊಲೀಸ್ ಠಾಣೆಗೆ ಹೋದಾಗ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಕುಟುಂಬಸ್ಥರು ಪೊಲೀಸ್ ಕಮಿಷನರ್ಗೆ ದೂರು ನೀಡಲು ಮುಂದಾಗಿದ್ದಾರೆ. ಗೌರಕ್ ಶಾಂತಿನಗರದಲ್ಲಿ ಸಮೋಸ ಅಂಗಡಿ ನಡೆಸುತ್ತಿದ್ದ, ಅಲ್ಲಿಯೇ ಗೌರಕ್ ಪುತ್ರಿಯೊಂದಿಗೆ ರಾಹುಲ್ ಗೆ ಸ್ನೇಹ ಬೆಳದಿದೆ ಎಂದು ದೂರಿದ್ದಾರೆ.












Click it and Unblock the Notifications