ಕಣ್ಮನ ಸೆಳೆವ ಭರತನಾಟ್ಯಕ್ಕೆ ಸಾಕ್ಷಿಯಾದ ಜೆಎಸ್ಎಸ್ ರಂಗಮಂದಿರ
ಬೆಂಗಳೂರು, ಸೆ 30: ಪ್ರಣವಾಂಜಲಿ ಅಕಾಡೆಮಿ ಫಾರ್ ಫರ್ಮಾರ್ಮಿಂಗ್ ಆರ್ಟ್ಸ್ ಮತ್ತು ತಮೋಹ ಆರ್ಟ್ಸ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ 'ಪ್ರಯುಕ್ತಿ -2018' ಕಾರ್ಯಕ್ರಮ, ಜಯನಗರದ ಏಳನೇ ಬ್ಲಾಕ್ ನಲ್ಲಿರುವ ಜೆಎಸ್ಎಸ್ ರಂಗಮಂದಿರದಲ್ಲಿ ಶನಿವಾರ ಸಂಜೆ (ಸೆ 29) ಅದ್ದೂರಿಯಾಗಿ ನಡೆಯಿತು.
ಚಿಣ್ಣರಿಂದ ಹಿಡಿದು ದೊಡ್ಡವರು, ಭರತನಾಟ್ಯದ 29 ವಿವಿಧ ಪ್ರಾಕಾರಗಳ ನೃತ್ಯದ ಮೂಲಕ ನೆರೆದಿದ್ದ ಭಾರೀ ಜನರನ್ನು ಮನರಂಜಿಸಿದರು. ಎರಡು ಅಕಾಡೆಮಿಯ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ಆರರಿಂದ ಏಳು ವರ್ಷದ ಪುಟಾಣಿಗಳು ನೃತ್ಯ ಪ್ರದರ್ಶಿಸಿದ್ದು ಭಾರೀ ಮೆಚ್ಚುಗೆಗೆ ವ್ಯಕ್ತವಾಯಿತು. ರಾಮಾಯಣ ಕುರಿತಾದ ನೃತ್ಯ, ಅಂಬಾ ಜಗಜನನಿ, ಸುಬ್ರಮಣ್ಯಂ ಕೌತ್ವಂ, ಐಗಿರಿ ನಂದಿನಿ, ಇಂಡಿಯನ್ ಫ್ಯೂಷನ್ ಮುಂತಾದ ನೃತ್ಯಗಳು ಸಭಿಕರ ಪ್ರಶಂಸೆಗೆ ವ್ಯಕ್ತವಾಯಿತು.

ಪ್ರಣವಾಂಜಲಿ ಅಕಾಡೆಮಿಯ ಮುಖ್ಯಸ್ಥೆ ಪವಿತ್ರ ಮಂಜುನಾಥ್ ಮತ್ತು ತಮೋಹ ಆರ್ಟ್ಸಿನ ಗಾಯತ್ರಿ ಮಯ್ಯ ಅವರ ನೃತ್ಯಶಾಲೆಯಲ್ಲಿ ಪಳಗಿದ ವಿದ್ಯಾರ್ಥಿಗಳು ಸತತವಾಗಿ ನಾಲ್ಕು ಗಂಟೆಗಳ ಕಾಲ ಕಾರ್ಯಕ್ರಮ ನೀಡಿದ್ದು ವಿಶೇಷ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂದಿದ್ದ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ಪ್ರತಿಭೆಗಳ ಅನಾವರಣ ಇನ್ನೂ ಆಗಬೇಕಿದೆ. ಪೋಷಕರು ಇನ್ನೂ ಹೆಚ್ಚುಹೆಚ್ಚು ಕಲೆಯನ್ನು ಬೆಂಬಲಿಸುವ ಮೂಲಕ, ಭಾರತೀಯ ಸಂಸ್ಕೃತಿಯನ್ನು ಉತ್ತುಂಗಕ್ಕೇರಿಸಲು ಸಹಕರಿಸಲು ಮನವಿ ಮಾಡಿದರು.

ಇನ್ನೋವ್ರ ಮುಖ್ಯ ಅತಿಥಿ, ದೂರದರ್ಶನದ ಮಾಜಿ ಹೆಚ್ಚುವರಿ ನಿರ್ದೇಶಕ ನಾಡೋಜ ಡಾ. ಮಹೇಶ್ ಜೋಷಿ ಮಾತನಾಡಿ, ಪ್ರಯುಕ್ತಿ 2018 ಕಾರ್ಯಕ್ರಮವನ್ನು ಮತ್ತು ಈ ಅದ್ಭುತ ನಾಟ್ಯ ಕಾರ್ಯಕ್ರಮಕ್ಕೆ ಕಾರಣೀಕರ್ತರಾದ ಪವಿತ್ರ ಮಂಜುನಾಥ್ ಸಹೋದರಿಯರ ಕಾಳಜಿಯನ್ನು ಶ್ಲಾಘಿಸಿದರು.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications