ಬೆಂಗಳೂರಲ್ಲಿ ಸೆ.17ರಂದು ಮಾಂಸ ಮಾರಾಟ ನಿಷೇಧ
ಬೆಂಗಳೂರು, ಸೆಪ್ಟೆಂಬರ್, 15 : ಗಣೇಶ ಚತುರ್ಥಿಯ ದಿನದಂದು ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಲು ಪಶುಪಾಲನಾ ವಿಭಾಗದ ಜಂಟಿ ಕಾರ್ಯದರ್ಶಿಗಳು ನಿರ್ಧಾರ ತೆಗೆದುಕೊಂಡಿದ್ದು, ಈ ನಿಯಮ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಪ್ರದೇಶಗಳಿಗೂ ಅನ್ವಯವಾಗಲಿದೆ.
ನಗರದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಭಾರೀ ತಯಾರಿ ನಡೆಯುತ್ತಿದ್ದು, ಸೆಪ್ಟಂಬರ್ 17ರ ಗುರುವಾರ ಗಣೇಶ ಚತುರ್ಥಿಯಂದು ಮಾತ್ರ ಮಾಂಸ ಮಾರಾಟ ನಿಷೇಧಿಸಲು ಆಜ್ಞೆ ಹೊರಡಿಸಲಾಗಿದೆ. ಇದರಂತೆ ನಗರಾದ್ಯಂತ ಮಾಂಸ ಮಾರಾಟ ಸ್ಥಗಿತಗೊಳ್ಳಲಿದೆ.[ಮಾಂಸ ಮಾರಾಟ ನಿಷೇಧ: ಮುಂಬೈ ಈಗ 'ಬ್ಯಾನ್- ಇಸ್ತಾನ್']
ಪಶುಪಾಲನಾ ವಿಭಾಗದಿಂದ ಹೊರಡಿಸಿದ ಈ ಆದೇಶವು ಒತ್ತಾಯಪೂರ್ವಕವಾದುದಲ್ಲ. ಆದರೂ ಮಾಂಸ ಮಾರಾಟಗಾರರು ಗಣೇಶ ಹಬ್ಬದ ಪ್ರಯುಕ್ತ ಈ ನಿಯಮವನ್ನು ಪಾಲಿಸುವಂತೆ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರದಾದ್ಯಂತ ಜೈನರ ಪರ್ಯೂಷಣದ ಪ್ರಯುಕ್ತ ಜಮ್ಮು ಕಾಶ್ಮೀರ, ಹರ್ಯಾಣ, ಮುಂಬೈ, ರಾಜ್ಯದಲ್ಲಿ ಮಾಂಸ ಮಾರಾಟ ನಿಷೇಧದ ಕುರಿತಾಗಿ ಪ್ರತಿರೋಧಗಳು ತಲೆದೋರಿದ್ದವು. ಇದರ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಮಾಂಸ ಮಾರಾಟ ನಿಷೇಧದ ತೀರ್ಪನ್ನು ಮುಂಬೈ ಹೈಕೋರ್ಟ್ ತಡೆಹಿಡಿದಿದೆ.