ಕರ್ನಾಟಕದ ಹುಡುಗಿಗೆ ಸಂತೂರ್ ಫೆಮಿನಾ ಸೌತ್ ಪ್ರಶಸ್ತಿ
ಉದ್ಯಾನ ನಗರಿಯಲ್ಲಿ ಮಾರ್ಚ್ 18ರಂದು ಖಾಸಗಿ ಹೋಟೆಲೊಂದರಲ್ಲಿ ನಡೆದಿದ್ದ ಸಂತೂರ್ ಫೆಮಿನಾ ಸ್ಟೈಲ್ ದಿವಾ ಸೌತ್ ಸೌಂದರ್ಯ ಸ್ಪರ್ಧೆ
ಬೆಂಗಳೂರು, ಮಾರ್ಚ್ 20: ಉದ್ಯಾನ ನಗರಿಯಲ್ಲಿ ಇತ್ತೀಚೆಗೆ ನಡೆದ ಸಂತೂರ್ ಫೆಮಿನಾ ಸ್ಟೈಲ್ ದಿವಾ ಸೌತ್ ಸೌಂದರ್ಯ ಸ್ಪರ್ಧೆಯಲ್ಲಿ, ಮಣಿಪಾಲ್ ನ ಆಶ್ನಾ ಗರವ್ ಅವರು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾವನಾ ಶ್ರೀಪಾದ ಅವರು, ಮೊದಲ ರನ್ನರ್ ಅಪ್ ಪ್ರಶಸ್ತಿ ಗಳಿಸಿದರೆ, ಅನೂಖಿಯಾ ಹರೀಶ್ ಅವರು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು. ಮಾರ್ಚ್ 18ರಂದು ಈ ಸ್ಪರ್ಧೆ ಅಂತಿಮ ಸುತ್ತು ನಡೆಸಲಾಗಿತ್ತು.

ಅಂತಿಮ ಸುತ್ತಿನಲ್ಲಿ 14 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಕಿ ಪಲೋಮಾ ರಾವ್ ಅವರು, ಎಲ್ಲಾ ಸ್ಪರ್ಧಾಳುಗಳನ್ನು ಸ್ಪರ್ಧೆಯ ತೀರ್ಪುಗಾರರಿಗೆ ಒಬ್ಬೊಬ್ಬರಾಗಿ ಪರಿಚಯಿಸಿದರು.
ಎಲ್ಲಾ ಸ್ಪರ್ಧಾಳುಗಳಿಗೂ ಮಿಂಚುವ ವಜ್ರಾಭರಣಗಳನ್ನು ಹಾಕಲಾಗಿತ್ತು. ಈ ವಜ್ರಾಭರಣಗಳನ್ನು ಆಭರಣ್ ಜ್ಯೂವೆಲರ್ಸ್ ಪ್ರಾಯೋಕತ್ವ ನೀಡಿತ್ತು.

ಫೈನಲ್ ನಲ್ಲಿ ಒಟ್ಟು ಮೂರು ಸುತ್ತುಗಳು ನಡೆದವು. ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ಮಿರ ಮಿರನೆ ಮಿಂಚುವ ಆಕರ್ಷಕ ಗೌನ್ ಗಳನ್ನು ಧರಿಸಿದ್ದ ಸುಂದರಿಯರು, ತಮ್ಮ ಸೌಂದರ್ಯವನ್ನು ನೂರು ಪಟ್ಟು ಹೆಚ್ಚಾಗಿ ಬಿಂಬಿಸುವಂತೆ ಕಂಗೊಳಿಸಿದರು.
ಫೈನಲ್ ನ ಅಂತಿಮ ಸುತ್ತಿನಲ್ಲಿ ಎಲ್ಲಾ ಸ್ಪರ್ಧಾಳುಗಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿ, ತೀರ್ಪುಗಾರರೇ ಸೂಕ್ತ ತೀರ್ಪು ನೀಡುವಲ್ಲಿ ಕೊಂಚ ಗೊಂದಲಕ್ಕೀಡಾಗುವಂತೆ ಮಾಡಿದರು.

ಆದರೆ, ಅಂತಿಮ ಹಂತದಲ್ಲಿ ಮಣಿಪಾಲ್ ನ ಆಶ್ನಾ ಗೌರವ್ ಅವನ್ನು ತೀರ್ಪುಗಾರರು ಪ್ರಶಸ್ತಿಗೆ ಆಯ್ಕೆ ಮಾಡಿದರು. ಆಶ್ನಾ ಆಯ್ಕೆಯಾಗುತ್ತಲೇ ಸಮಾರಂಭದಲ್ಲಿದ್ದ ಪ್ರೇಕ್ಷಕರ ಚಪ್ಪಾಳೆ ಮುಗಿಲು ಮುಟ್ಟಿತ್ತು.

ಅಂದಹಾಗೆ, ಈ ಸಮಾರಂಭಕ್ಕೆ ಕನ್ನಡ ಹಾಗೂ ಹಿಂದಿ ಚಿತ್ರರಂಗದ ಸಿನಿಮಾ ತಾರೆಯರು ಆಗಮಿಸಿ, ಈ ಸ್ಪರ್ಧೆಯು ಮತ್ತಷ್ಟು ಕಳೆಗಟ್ಟುವಂತೆ ಮಾಡಿದ್ದರು. ಹಿಂದಿ ಸಿನಿಮಾ ತಾರೆಯಲ್ಲಿ ಮಿಂಚಿನಂತೆ ಕಂಡಿದ್ದು ಅದಾ ಶರ್ಮಾ.

ಇನ್ನು, ಸಮಾರಂಭದಲ್ಲಿ ಭಾಗವಹಿಸಿದ್ದ ಕನ್ನಡ ಕಲಾವಿದೆಯರಲ್ಲಿ ಕಣ್ಣಿಗೆ ಕಂಡಿದ್ದು ಇತ್ತೀಚೆಗಷ್ಟೇ ತೆರೆ ಕಂಡಿದ್ದ 'ಕಿರಿಕ್ ಪಾರ್ಟಿ' ಚಿತ್ರದ ನಟಿ ರಶ್ಮಿಕಾ ಮಂದಾನಾ.
-
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications