ಮಂಡೂರು ಕ್ಷೇತ್ರದ ಡಂಪಿಂಗ್ ಸ್ವಾಮಿ ಮಹಾತ್ಮೆ
ಯಾವ ದೇವರಿಗೆ ನೈವೇದ್ಯ ಅಂದ್ರೆ ಇಷ್ಟವಾಗಲ್ಲ ಹೇಳಿ? ತೆಂಗಿನಕಾಯಿ ಜೊತೆಗೆ ತರಹೇವಾರಿ ಹಣ್ಣುಗಳೆಂದರೆ ನಮ್ಮ ತರಹೇವಾರಿ ದೇವರುಗಳಿಗೆ ಬಲು ಪ್ರೀತಿ. ಆದರೆ, ಕಸ-ಕಡ್ಡಿ, ಅನ್ನ-ಮುಸುರೆ, ಹೊಸಲು ಮಣ್ಣುಮಸಿಯಿಂದ ತುಂಬಿದ ಕಸದ ರಾಶಿಯನ್ನು ನೈವೇದ್ಯವಾಗಿ ಇಷ್ಟಪಡುವ ಈ ವಿಶಿಷ್ಟ ದೇವರ ಬಗ್ಗೆ ಕೇಳಿದ್ದೀರಾ? ನಿಮಗೆ ಗೊತ್ತಿಲ್ಲವಾದರೂ, ನಿಮ್ಮ ಅರಿವಿಗೆ ಬಾರದಂತೆ ಆ ಸ್ವಾಮಿಗೆ ಕಸದ ನೈವೇದ್ಯವನ್ನು ಕಳಿಸುತ್ತಿರುತ್ತೀರಿ ಎಂಬುದು ನೆನಪಿರಲಿ. ದೂರದವರೆಗೆ ಹಬ್ಬಿರುವ ಡಂಪಿಂಗ್ ಸ್ವಾಮಿಯ ಮಹಾತ್ಮೆಯನ್ನು ಒಮ್ಮೆ ಕಣ್ತುಂಬಾ ಓದಿಬಿಡಿ - ಸಂಪಾದಕ.
ನಾನು ಸ್ವಯಂಪ್ರೇರಿತನಾಗಿ ದೇವಸ್ಥಾನಗಳಿಗೆ ಹೋಗುವುದು ಕಡಿಮೆ. ಹೆಚ್ಚಾಗಿ ನನ್ನ ಹೆಂಡತಿಯೊಂದಿಗೆ ಅವಳ ಬಲವಂತಕ್ಕೆ ಹೋದದ್ದೆ ಹೆಚ್ಚು. ಹಾಗಂತ ನಾನು ನಾಸ್ತಿಕನಲ್ಲ. ನನಗೆ ನನ್ನದೆ ಆದ ದೇವಾಲಯಗಳಿವೆ. ಅಲ್ಲಿ ವಾರಕ್ಕೆ ಒಂದು ಸಲವಾದರೂ ಬೇಟಿ ಕೊಟ್ಟು ಆ ದೇವರುಗಳು ನನ್ನ ಮೇಲೆ ವಕ್ರದೃಷ್ಟಿ ಬೀಳದಂತೆ ಕೇಳಿಕೊಳ್ಳುತ್ತೇನೆ ಮತ್ತು ಭಕ್ತಿಯಿಂದ ಸೇವೆ ಮಾಡುತ್ತೇನೆ. ಆ ದೇವರುಗಳು ಮುನಿದರೆ ಮಹಾ ಮಾರಿಗಳು, ಹೀಗಾಗಿ ನಾನು ತುಂಬಾ ಭಯ ಭಕ್ತಿಯಿಂದ ಅವರುಗಳಿಗೆ ನಡೆದುಕೊಳ್ಳುತ್ತೇನೆ.

ಅವುಗಳಲ್ಲಿ ಒಂದು ನಿಸರ್ಗ ದೇವತೆ. ಇದರ ದೇವಸ್ಥಾನ ನಮ್ಮ ಮನೆಯ ಪಕ್ಕದಲ್ಲಿರುವ ಆಲಹಳ್ಳಿ ಕೆರೆಯಲ್ಲಿದೆ. ನಮ್ಮೆಲ್ಲರ ನಿರ್ಲಕ್ಷ್ಯದಿಂದ ಹಾಳು ಬಿದ್ದಿರುವ ಈ ಕೆರೆ ಇಂದು ದುಃಸ್ಥಿತಿಯಲ್ಲಿದೆ. ಇದರ ಜೀರ್ಣೋದ್ಧಾರಕ್ಕಾಗಿ ಕಳೆದ ಎರಡು ವರ್ಷಗಳಿಂದ ನಾವೆಲ್ಲ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸರ್ಕಾರವು ಕೂಡ ಏಳೂವರೆ ಕೋಟಿ ಹಣವನ್ನು ಕೊಡಲು ಮುಂದಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭವಾಗಿ ಕೆರೆ ದೇವತೆಯ ಮುನಿಸು ಕಡಿಮೆಯಾಗಿ ನಮ್ಮೆಲ್ಲರ ಮೇಲೆ ಕೃಪೆ ತೋರುತ್ತಾಳೆ ಎಂದುಕೊಂಡಿದ್ದೇವೆ. [ಮೇ 31ರ ನಂತರ ಕಸ ಹಾಕೋದು ಎಲ್ಲಿ?]
ಈಗ ಹೇಳಲು ಹೊರಟಿರುವುದು ಡಂಪಿಂಗ್ ಸ್ವಾಮಿ ಕುರಿತು. ನಿನ್ನೆ ನಮ್ಮ ರವಿ ಕೃಷ್ಣಾರೆಡ್ಡಿ (ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿ) ಫೋನ್ ಮಾಡಿ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ತಿಪ್ಪೆಸ್ವಾಮಿಯ ದೇವಸ್ಥಾನವಿರುವ ಮಂಡೂರಿಗೆ ಹೋಗೋಣ ಬನ್ನಿ, ಅಲ್ಲಿಯ ಭಕ್ತರು ಬರಹೇಳಿದ್ದಾರೆ ಎಂದರು. ನಾನು ಅಲ್ಲಿಗೆ ಹೋಗಿ ದರ್ಶನ ಪಡೆದು ಒಂದೂವರೆ ವರ್ಷವಾಗಿತ್ತು. ಸ್ವಾಮಿ ಮುನಿಸಿಕೊಂಡಿದ್ದರೆ ಕಷ್ಟ, ಹೋಗಿ ಬರುವುದು ಒಳ್ಳೆಯದು ಎಂದು ಬರುತ್ತೇನೆ ಎಂದೆ. ಹೊಸಕೋಟೆ ರಸ್ತೆಯಲ್ಲಿರುವ ಬೆಂಗಳೂರಿನಿಂದ ಸುಮಾರು 40 ಕಿಲೋಮಿಟರ್ ದೂರದಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ನಾವು ತಲುಪಿದಾಗ ಸಮಯ ಮಧ್ಯಾನ್ಹ 12 ಗಂಟೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications