ತಿಪ್ಪೆರುದ್ರಸ್ವಾಮಿಗೆ ಕಸವೆಂದರೆ ಬಲು ಇಷ್ಟವಂತೆ
(ಡಂಪಿಂಗ್ ಸ್ವಾಮಿ ಮಹಾತ್ಮೆ - ಭಾಗ 2) ಈ ಕ್ಷೇತ್ರದ ಮಹಿಮೆಯ ಬಗ್ಗೆ ಕೊಂಚ ಹೇಳಲೆಬೇಕು. ಕೆಲವು ವರ್ಷಗಳ ಹಿಂದೆ ನಮ್ಮ ಬಿಬಿಎಂಪಿಯವರು ಇಲ್ಲಿ ಡಂಪಿಂಗ್ ಸ್ವಾಮಿಯ ಚಿಕ್ಕ ಮೂರ್ತಿಯನ್ನು ಪ್ರತಿಷ್ಠಾಪಿಸಿದಾಗ 3,000 ಜನಸಂಖ್ಯೆ ಇರುವ ಮಂಡೂರಿನ ಜನ ಸ್ವಾಮಿಯ ಮಹಿಮೆಯನ್ನು ತಿಳಿಯದೇ ಸ್ವಾಗತಿಸಬೇಕೋ ಬಿಡಬೇಕೋ ಎಂಬ ಗೊಂದಲದಲ್ಲಿದ್ದರು. ನಮ್ಮ ಜನಪ್ರತಿನಿಧಿಗಳು ಈ ದೇವರು ಇಲ್ಲಿ ಬರುವುದರಿಂದ ಈ ಕ್ಷೇತ್ರದ ಮಹಿಮೆ ಹೆಚ್ಚಾಗುತ್ತದೆ, ಯಾತ್ರಿಗಳ ಸಂಖ್ಯೆ ಹೆಚ್ಚುತ್ತದೆ, ನಿಮಗೆಲ್ಲ ಉದ್ಯೋಗ ಸಿಗುತ್ತದೆ ಹಾಗೂ ನಿಮ್ಮೆಲ್ಲರ ಬಾಳು ಹಸನಾಗುತ್ತದೆ ಎಂದು ಆಶ್ವಾಸನೆ ನೀಡಿದರು. ಅರೆಮನಸ್ಸಿನಿಂದಲೇ ಒಪ್ಪಿದರು ಜನ.

ಈ ದೇವರಿಗೆ ಕಸವೆಂದರೆ ತುಂಬಾ ಇಷ್ಟವಂತೆ ಅದನ್ನ ಎಲ್ಲಿಂದ ತರುವುದು ಎಂದು ಗ್ರಾಮಸ್ಥರು ಯೋಚನೆಯಲ್ಲಿದ್ದಾಗ, ಬಿಬಿಎಂಪಿಯವರು ನೀವೇನು ಯೋಚನೆ ಮಾಡಬೇಡಿ ನಾವು ನಮ್ಮ ಖರ್ಚಿನಲ್ಲೇ ಇಡಿ ಬೆಂಗಳೂರಿನ ಪ್ರತಿಯೊಂದು ಮನೆಯಿಂದಲೂ ಕಸವನ್ನು ಸಂಗ್ರಹಿಸಿ ನಮ್ಮ ಖರ್ಚಿನಲ್ಲೇ ಸ್ವಾಮಿಯ ಸನ್ನಿಧಿಗೆ ತಲುಪಿಸುತ್ತೇವೆ ಎಂದರು. ಹಾಗೆಯೆ ನಡೆದುಕೊಂಡರು ಕೂಡ. ನೋಡನೋಡುತ್ತಿದ್ದಂತೆ ತಿಪ್ಪೆರುದ್ರಸ್ವಾಮಿ ಬೆಳೆಯತೊಡಗಿದ. ಇವರು ಕಳುಹಿಸುವ 5-10 ಲಾರಿಗಳ ಕಸ ಸ್ವಾಮಿಗೆ ಸಾಲದಾಯ್ತು. ಇನ್ನೂ ಬೇಕು ಇನ್ನೂ ಬೇಕು ಎಂದು ಹೂಂಕರಿಸತೊಡಗಿದ.
ಕಸದ ಜೊತೆಗೆ ಸತ್ತ ನಾಯಿಗಳು, ಇತರ ಪ್ರಾಣಿಗಳನ್ನು ಕಳುಹಿಸತೊಡಗಿದರು. ಕೊನೆಗೆ ಸತ್ತ ಮನುಷ್ಯರ ದೇಹಗಳನ್ನು ಕಳುಹಿಸಿದರು. ಆದರೂ ಸ್ವಾಮಿ ಸಂತೃಪ್ತನಾಗಲಿಲ್ಲ ಇನ್ನೂ ಬೇಕು ಎಂದಾಗ ಸ್ವಾಮಿಯ ವಾಹನಗಳಾದ ಕ್ರೂರ ನಾಯಿಗಳು ಗ್ರಾಮಸ್ಥರ ಸುಮಾರು 40-50 ಕುರಿಗಳನ್ನು ಬಲಿಪಡೆದು ಅಭಿಷೇಕ ಮಾಡಿದವು. ಇಷ್ಟಕ್ಕೆ ಸಂತೃಪ್ತನಾಗುವನೆ ಡಂಪಿಂಗ್ ಸ್ವಾಮಿ? ಇವನ ಕೋಪ ಊರ ಜನರ ಮೇಲೆ ಬಿತ್ತು. ಎಂಟತ್ತು ಜನ ಒಬ್ಬರಾದ ಒಬ್ಬರು ಹಾಗೆಯೇ ತರಗೆಲೆಗಳಂತೆ ಸತ್ತು ಹೋದರು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications