ಅಕ್ರಮ ಸಂಬಂಧ ಶಂಕೆ: ಕೋಪದಲ್ಲಿ ಪತ್ನಿ ಸ್ನೇಹಿತನ ತಾಯಿಯನ್ನು ಕೊಂದ ಪತಿ
ಬೆಂಳೂರು, ನವೆಂಬರ್ 19: ಪತ್ನಿಯ ಶೀಲ ಶಂಕಿಸಿ ಕೋಪದಲ್ಲಿ ಸ್ನೇಹಿತನ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಕೊತ್ತನೂರಿನ ಸಾವಿತ್ರಮ್ಮ ಮೃತರು, ಘಟನೆಯಲ್ಲಿ ಮೃತ ಸಾವಿತ್ರಮ್ಮ ಪುತ್ರ ಭರತ್ ಹಾಗೂ ತಂದೆ ಸಣ್ಣಪ್ಪ ಎಂಬುವವರಿಗೂ ಚಾಕುವಿನಿಂದ ಇರಿದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ
ಆರೋಪಿ ಆನಂದ್ ಕುಮಾರ್ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆನಂದ್ ಕುಮಾರ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ, ಕೆಲ ವರ್ಷಗಳ ಹಿಂದೆ ಸ್ನೇಹಾ ಎಂಬುವವರನ್ನು ವಿವಾಹವಾಗಿದ್ದು, ಆನಂದ್ ದಂಪತಿಗೆ 11 ವರ್ಷದ ಮಗಳಿದ್ದಾಳೆ. ದಂಪತಿಗೆ ಕೊತ್ತನೂರಿನ ನಿವಾಸಿ ಆಟೋ ಚಾಲಕ ಭರತ್ ಎಂಬಾತನ ಪರಿಚಯವಾಗಿತ್ತು.
ಈ ಮಧ್ಯೆ ಭರತ್ ಆನಂದ್ ಪತ್ನಿ ಜತೆ ಹೆಚ್ಚು ಸಲುಗೆಯಿಂದ ವರ್ತಿಸುತ್ತಿದ್ದರು ಅಲ್ಲದೆ ಭರತ್ ಆಗಾಗ ಆನಂದ್ ಮನೆಗೆ ಹೋಗಿ ಬರುತ್ತಿದ್ದುದನ್ನು ನೋಡಿದ್ದ ಆನಂದ್ ಪತ್ನಿ ಮೇಲೆ ಅನುಮಾನಗೊಂಡಿದ್ದ.
ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!
ಇದೇ ವಿಚಾರಕ್ಕೆ ಪತ್ನಿ ಜೊತೆಗೆ ಜಗಳ ನಡೆದು ಪತಿಯ ವರ್ತನೆಯಿಂದ ಕೋಪಗೊಂಡ ಪತ್ನಿ ಭರತ್ಗೆ ಕರೆ ಮಾಡಿ ನಡೆದಿದ್ದೆಲ್ಲಾ ವಿವರಿಸಿ ಬುದ್ಧಿಹೇಳುವಂತೆ ಸೂಚಿಸಿದ್ದಳು. ಆಗ ಭರತ್ ಆತನ ಮನೆಗೆ ಬಂದು ತಮ್ಮ ನಡುವೆ ಅಂಥ ಯಾವುದೇ ಸಂಬಂಧವಿಲ್ಲ ಎಂದು ತಿಳಿ ಹೇಳದ್ದರೂ ಆತತ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಆನ್ ಲೈನ್ ಗೇಮ್ ಚಟಕ್ಕೆ ಪಾಲಕರನ್ನೇ ಕೊಂದ ಮಗ!
ಬಳಿಕ ದೊಡ್ಡವರು ಮಾತನಾಡಿದರೆ ಕೇಳಬಹುದು ಎಂದು ಭರತ್ ತಾಯಿಯನ್ನು ಕರೆಸಿದ್ದರು ಆ ಸಂದರ್ಭದಲ್ಲಿ ಭರತ್ ತಾಯಿಯನ್ನು ಕೊಲೆ ಮಾಡಿದ್ದು, ಭರತ್ ಹಾಗೂ ಭರತ್ ತಂದೆಯ ಮೇಲೂ ಕೂಡ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.