2018ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಘೋಷಣೆ

ಬೆಂಗಳೂರು, ಡಿಸೆಂಬರ್ 1: ಕರ್ನಾಟಕ ಮಾಧ್ಯಮ ಅಕಾಡೆಮಿಯು 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳನ್ನು ಶನಿವಾರ ಘೋಷಣೆ ಮಾಡಿದೆ.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ 2018ನೇ ಸಾಲಿನ ವಿಶೇಷ ಪ್ರಶಸ್ತಿ: ಜೀವಮಾನದ ಸಾಧನೆ ಹಾಗೂ ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

ವಿಶೇಷ ಪ್ರಶಸ್ತಿಗೆ 50 ಸಾವಿರ ರುಪಾಯಿ ನಗದು, ವಾರ್ಷಿಕ ಪ್ರಶಸ್ತಿಗೆ 25 ಸಾವಿರ ರುಪಾಯಿ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. 2018ನೇ ಸಾಲಿಗೆ 51 ಮಂದಿ ಪತ್ರಕರ್ತರನ್ನು ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Media

2018ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ, ಅಭಿಮಾನಿ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅಭಿಮಾನಿ ಪ್ರಶಸ್ತಿ, ಅರಗಿಣಿ ಪ್ರಶಸ್ತಿ, ಮೈಸೂರು ದಿಗಂತ ಪ್ರಶಸ್ತಿ ಹಾಗೂ ಪತ್ರಕರ್ತ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಜೊತೆಗೆ ತಲಾ 10 ಸಾವಿರ ರುಪಾಯಿ ನಗದು ಬಹುಮಾನ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ನೆರವೇರಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಇತರೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ತಿಳಿಸಿದ್ದಾರೆ.

ವಿಶೇಷ ಪ್ರಶಸ್ತಿ:
ಜೀವಮಾನದ ಸಾಧನೆಗೆ ವಿಶೇಷ ಪ್ರಶಸ್ತಿ -ಧರ್ಮಾವರಪು ಬಾಲಾಜಿ

ವಾರ್ಷಿಕ ಪ್ರಶಸ್ತಿಗಳು-2018
ಪ್ರೇಮಕುಮಾರ್ ಹರಿಯಬ್ಬೆ ಪ್ರಜಾವಾಣಿ
ವಿಶ್ವನಾಥ್ ಸುವರ್ಣ (ಛಾಯಾಗ್ರಾಹಕರು)
ಮೋಹನ ಹೆಗಡೆ ವಿಜಯವಾಣಿ
ಭಾನು ತೇಜ್ ಎಕನಾಮಿಕ್ ಟೈಮ್ಸ್
ಬಿ.ಎಸ್. ಸತೀಶಕುಮಾರ್ ದಿ ಹಿಂದೂ
ಜಿ. ಎಂ.ಕುಮಾರ್ ಬಿ. ಟಿವಿ
ಕೆ. ಎನ್. ಚನ್ನೆಗೌಡ ವಿಜಯವಾಣಿ
ಮರಿಯಪ್ಪ ಕೆ.ಜೆ ಪ್ರಜಾವಾಣಿ
ಸಾಲೋಮನ್ ಆಂದೋಲನ
ಆಯೇಶಾ ಖಾನಂ ದೂರದರ್ಶನ
ಅಬ್ದುಲ್ ಖಾಲಿಕ್ ಡೆಲಿ ಪಾಸ್ಬಾನ್
ಎಂ. ಅನಿಲ್‌ಕುಮಾರ್ ನ್ಯೂಸ್ 9
ಕೆ. ಎನ್. ನಾಗೇಶಕುಮಾರ್ ಸಿನಿಮಾ ಛಾಯಾಗ್ರಾಹಕರು
ಹರಿಪ್ರಸಾದ ಟಿ.ವಿ9
ಈಶ್ವರ್ ಶಿವಣ್ಣ ಛಾಯಾಗ್ರಾಹಕರು ಬೆಂಗಳೂರು ಮಿರರ್
ಬಸವರಾಜ ಭೂಸಾರೆ ಸಮಾಜಮುಖಿ
ಮೋಹನಕುಮಾರ್ ಛಾಯಾಗ್ರಾಹಕರು
ದೊಡ್ಡಬೊಮ್ಮಯ್ಯ ಸಂಜೆವಾಣಿ
ರಾಮು ಪಾಟೀಲ್ ಇಂಡಿಯನ್ ಎಕ್ಸಪ್ರೆಸ್
ರಾಜು ವಿಜಾಪುರ ಡೆಕ್ಕನ್ ಹೆರಾಲ್ಡ್
ರಾಜು ನಧಾಫ್ ವಿಜಯ ಕರ್ನಾಟಕ
ಉಮೇಶ್ ಪೂಜಾರ್ ಸವಿ ನುಡಿ
ಎಸ್. ವಿ. ಶಿವಪ್ಪಯ್ಯನಮಠ ವಿಶ್ವವಾಣಿ
ಶಶಿಕುಮಾರ ಪಾಟೀಲ್ ಯುವರಂಗ
ಶಿವರಾಂ ಅಸುಂಡಿ ನ್ಯೂಸ್ 18
ಕೆ.ಜೆ. ಸುರೇಶ್ ಪ್ರಜಾ ಟಿವಿ
ಪಿ. ಪರಮೇಶ್ ಸುದ್ದಿ ಮೂಲ
ಎಂ ಪಾಷಾ ಈಶಾನ್ಯ ಟೈಮ್ಸ್
ಶರಣಪ್ಪ ಬಾಚಲಾಪುರ ನ್ಯೂಸ್ 18
ಸುಭಾಷ್ ಹುದಲೂರು ಸುದಿನ
ಲೋಚನೇಶ್ ಹೂಗಾರ ಸಂಜೆ ದರ್ಪಣ
ಎಚ್.ಬಿ.ವೈದ್ಯನಾಥ್ ನಾವಿಕ
ಪ್ರಕಾಶ್ ಕುಗ್ವೆ ಪ್ರಜಾವಾಣಿ
ಕಂಕ ಮೂರ್ತಿ ಸಂಯುಕ್ತ ಕರ್ನಾಟಕ
ಜೆ.ಆರ್.ಕೆಂಚೇಗೌಡ ಪ್ರಜೋದಯ
ಮೀರಾ ಅಪ್ಪಯ್ಯ ಸ್ಟಾರ್ ಆಫ್ ಮೈಸೂರು
ಕೆ.ಎನ್.ರವಿಕುಮಾರ್ ಕನ್ನಡಪ್ರಭ
ಎಚ್.ಬಿ.ಮಂಜುನಾಥ್ ಉದಯವಾಣಿ
ನಂದೀಶ್ ನ್ಯೂಸ್ 18
ಪಾ.ಶ್ರೀ. ಅನಂತರಾಂ
ವಿನ್ಸ್ಟೆನ್ ಕೆನಡಿ ವಾರ್ತಾ ಭಾರತಿ
ಕಾಗತಿ ನಾಗರಾಜಪ್ಪ ಉದಯವಾಣಿ
ಗಂಗಹನುಮಯ್ಯ ಅಮೃತವಾಣಿ
ವೆಂಕಟಸ್ವಾಮಿ ಸಂಜೆ ಸಮಾಚಾರ್
ಶ್ರೀಜಾ ಡಿಜಿಟಲ್ ಮಿಡಿಯಾ
ಪ್ರಕಾಶ್ ಶೆಟ್ಟಿ ವ್ಯಂಗ್ಯಚಿತ್ರಕಾರರು
ಸುಕೇಶ್ ಕುಮಾರ್ ಶೆಟ್ಟಿ ಕಸ್ತೂರಿ
ಕೆ.ಎಸ್.ಜನಾರ್ದನಾಚಾರಿ ಈ ಸಂಜೆ
ಎನ್.ಎಸ್.ಸುಭಾಷಚಂದ್ರ ಇಂಡಿಯನ್ ಎಕ್ಸ್ ಪ್ರೆಸ್
ಮಂಜುಶ್ರೀ ಕಡಕೋಳ ಪ್ರಜಾವಾಣಿ

ತಳಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ
ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ 2018
ಡಾ. ಸಿ.ಎಸ್. ದ್ವಾರಕಾನಾಥ್, ಹಿರಿಯ ಪತ್ರಕರ್ತರು

ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ-2018
ಆಂದೋಲನ ಪ್ರಶಸ್ತಿ ಕೋಲಾರ ವಾಣಿ, ಕೋಲಾರ

ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿ 2018
ದೇಶಾದ್ರಿ ಹೊಸ್ಮನೆ. ಸಿನಿಮಾ ಪತ್ರಕರ್ತರು

ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ 2018
ಪರಮೇಶ್ವರ ಭಟ್, ಬದಲಾದ ಕೆರೆಗಳಿಂದ ಬದಲಾಯ್ತು ಬದುಕು, ವಿತ್ತವಾಣಿ

ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ 2018
ಜಿ. ಎನ್ ನಾಗರಾಜು, ಬಲಿಗೆ ಬಾಯ್ತೆರೆದ ಪಾವಗಡದ ಸರ್ಕಾರಿ ಪ್ರೌಢ ಶಾಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+