ಸಚಿವರ ಮನೆ ಸುತ್ತ ಕಸ ಎತ್ತಿ ಲೋಕಸತ್ತಾ ಪ್ರತಿಭಟನೆ
ಬೆಂಗಳೂರು, ಜೂ.9: ಬಿಬಿಎಂಪಿ ತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಸೋತು, ದಬ್ಬಾಳಿಕೆಯ ಮೂಲಕ ಮಂಡೂರಿನ ಜನರ ಮೇಲೆ ಕಸ ಸುರಿಯುತ್ತಿರುವುದನ್ನು ವಿರೋಧಿಸಿ ಲೋಕಸತ್ತಾ ಪಕ್ಷವು ಬೆಂಗಳೂರು ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಮನೆ ಬಳಿ ಜೂ.8 ಭಾನುವಾರ ಪ್ರತಿಭಟನೆ ನಡೆಸಿತು.
ಬೆಳಿಗ್ಗೆ 8 ಗಂಟೆಗೆ ಆರಂಭವಾದ ಪ್ರತಿಭಟನೆ, ಸಚಿವರ ನೆರೆಹೊರೆಯಲ್ಲಿ ಮನೆ ಮನೆಯಿಂದ ಬೇರ್ಪಡಿಸಿದ ಕಸವನ್ನು ಮಾತ್ರ ಪಡೆದು, ಮಂಡೂರಿನ ಜನತೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕರಪತ್ರ ಹಂಚಿ ಮತ್ತು ಘೋಷಣೆ ಕೂಗುವ ಮೂಲಕ ಜನರಿಗೆ ತಿಳಿಸಿ ಹೇಳಲಾಯಿತು.
ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಸ್.ಮುಕುಂದ ಅವರು ಮಾತನಾಡಿ ಸಮಸ್ಯೆಗೆ ಪರಿಸರ ಸ್ನೇಹಿ ಮತ್ತು ಕಡಿಮೆ ಖರ್ಚಿನ ಕಸ ನಿರ್ವಹಣೆ ವಿಧಾನ ಇದ್ದರೂ ಅವೈಜ್ಞಾನಿಕ ಪದ್ದತಿಯನ್ನು ಪಾಲಿಕೆ ಬೇಕಂತಲೇ ಅನುಸರಿಸುತ್ತಿದೆ. ಇದು ತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರರಿಗೆ ಲಾಭ ಮಾಡಿಕೊಡಲು ಪಾಲಿಕೆ ಮಾಡುತ್ತಿರುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.[ಮಂಡೂರು ಜನತೆ ಅನುಭವಿಸುವ ಕಷ್ಟ ಓದಿ]
ಬಿಬಿಎಂಪಿ ಗುತ್ತಿಗೆದಾರರ, ಕಸದ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ಏಜೆಂಟುರುಗಳ ಕಪಿ ಮುಷ್ಟಿಯಲ್ಲಿದ್ದು, ಈ ಕಾರಣಕ್ಕಾಗಿ ಸಾಲದ ಸಂಕೋಲೆಯಲ್ಲಿರುವ ಪಾಲಿಕೆಯು ನಗರದ ಅನೇಕ ಕಟ್ಟಡಗಳನ್ನು ಒತ್ತೆ ಇಡಬೇಕಾಗಿ ಬಂದಿದೆ.ಇದೇ ರೀತಿ ಮುಂದುವರೆದರೆ,ಮುಂದೆ ಇಡೀ ಪಾಲಿಕೆಯನ್ನೇ ಹರಾಜಿಗೆ ಇಡಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕಸತ್ತಾ ಪಕ್ಷದ ವತಿಯಿಂದ ಪ್ರಸ್ತಾಪಿಸಲಾಗಿರುವ 'ಡಂಪಿಂಗ್ ಸಾಕು' ಕರಡು ಮಸೂದೆಯ ಪ್ರತಿಯನ್ನು ಮನವಿಪತ್ರವನ್ನು ಸಚಿವರ ಆಪ್ತ ಸಹಾಯಕರಿಗೆ ನೀಡಲಾಯಿತು.
ಕಸದ ಸಮಸ್ಯೆ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಡಾ. ಮೀನಾಕ್ಷಿ ಭರತ್ ಮಾತನಾಡಿ, ನಗರದಲ್ಲಿ ಮೂಲದಲ್ಲಿಯೇ ಬೇರ್ಪಡಿಸಿದ ಕಸ ಪಡೆದು, ಸ್ಥಳೀಯವಾಗಿ ಸಂಸ್ಕರಿಸುವುದು, ಪ್ಲಾಸ್ಟಿಕ್, ಕಾಗದ ಮತ್ತು ಇತ್ಯಾದಿಗಳನ್ನು ಮರುಬಳೆಕೆ ಮಾಡುವ ವಿಧಾನವನ್ನು ಅನುಸರಿಸಲು ಪಾಲಿಕೆಯು ಗಂಭೀರ ಪ್ರಯತ್ನ ಮಾಡಬೇಕು. ಪಾಲಿಕೆಯು ಗಂಭೀರವಾಗಿ ಪ್ರಯತ್ನಿಸುವುದಾದರೆ, ಪಕ್ಷದ ಕಾರ್ಯಕರ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವುದಾಗಿ ಸಚಿವರಿಗೆ ಈ ಸಂದರ್ಭದಲ್ಲಿ ತಿಳಿಸಲಾಯಿತು.
ಈ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ದೀಪಕ್ ಸಿ.ಎನ್, ಕಾರ್ಯದರ್ಶಿ ರವಿ ಕುಮಾರ್ ಎಸ್, ಹಲವಾರು ಕಾರ್ಯಕರ್ತರು ನಗರದ ಅನೇಕ ನಾಗರಿಕರು ಭಾಗವಹಿಸಿದ್ದರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications